ಈಶ ಫೌಂಡೇಶನ್ ಕೇವಲ ಅಧ್ಯಾತ್ಮ ಸಂಸ್ಥೆ

KannadaprabhaNewsNetwork |  
Published : May 08, 2025, 12:32 AM IST
ಸಿಕೆಬಿ-1 ಸುದ್ದಿಗೋಷ್ಟಿಯಲ್ಲಿ ಸ್ವಾಮಿ ವಿಮೋಹ ಮಾತನಾಡಿದರು. | Kannada Prabha

ಸಾರಾಂಶ

ಈಶ ಫೌಂಡೇಶನ್ ಅಥವಾ ಸದ್ಗುರು ಸನ್ನಿಧಿಯು ಕರ್ನಾಟಕದ ಯಾವುದೇ ರಾಜಕೀಯ ಪಕ್ಷ ಅಥವಾ ಯಾವುದೇ ಸರ್ಕಾರದಿಂದ (ಹಿಂದಿನ ಅಥವಾ ಪ್ರಸ್ತುತ) ಯಾವುದೇ ಭೂಮಿ ಅಥವಾ ಹಣವನ್ನು ಪಡೆದಿಲ್ಲ. ಎಲ್ಲಾ ಭೂಮಿಯನ್ನು ಗ್ರಾಮಸ್ಥರಿಂದ (ಭೂಮಾಲೀಕರಿಂದ) ನೇರವಾಗಿ ಹಣ ಪಾವತಿಸಿ ಖರೀದಿಸಲಾಗಿದೆ.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ತಾಲೂಕಿನ ಅವಲಗುರ್ಕಿ ಗ್ರಾಪಂ ಬಳಿ ನಿರ್ಮಾಣಗೊಂಡಿರುವ ಸದ್ಗುರು ಸನ್ನಿಧಿ ಮತ್ತು ಈಶ ಫೌಂಡೇಶನ್ ಯಾವುದೇ ರಾಜಕೀಯ ಅಥವಾ ಧಾರ್ಮಿಕ ಸಂಘಟನೆಯೊಂದಿಗೆ ಸಂಯೋಜಿತವಾಗಿಲ್ಲ. ಈಶ ಫೌಂಡೇಶನ್ ಸದ್ಗುರು ಜಗ್ಗಿ ವಾಸವಾಸುದೇವ್ ರವರು ಸ್ಥಾಪಿಸಿದ ಆಧ್ಯಾತ್ಮಿಕ ಸಂಸ್ಥೆಯಾಗಿದೆ ಎಂದು ಈಶ ಫೌಂಡೇಶನ್‌ನ ಸ್ವಾಮಿ ವಿಮೋಹ ಸ್ಪಷ್ಟಪಡಿಸಿದರು.

ನಗರದ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈಶ ಫೌಂಡೇಶನ್ ಅಥವಾ ಸದ್ಗುರು ಸನ್ನಿಧಿಯು ಕರ್ನಾಟಕದ ಯಾವುದೇ ರಾಜಕೀಯ ಪಕ್ಷ ಅಥವಾ ಯಾವುದೇ ಸರ್ಕಾರದಿಂದ (ಹಿಂದಿನ ಅಥವಾ ಪ್ರಸ್ತುತ) ಯಾವುದೇ ಭೂಮಿ ಅಥವಾ ಹಣವನ್ನು ಪಡೆದಿಲ್ಲ. ಎಲ್ಲಾ ಭೂಮಿಯನ್ನು ಗ್ರಾಮಸ್ಥರಿಂದ (ಭೂಮಾಲೀಕರಿಂದ) ನೇರವಾಗಿ ಹಣ ಪಾವತಿಸಿ ಖರೀದಿಸಲಾಗಿದೆ ಎಂದರು.

ಇಲ್ಲಿ ಈಗ ನಿರ್ಮಾಣ ವಾಗುತ್ತಿರುವ ಲಿಂಗಭೈರವಿ ದೇಗುಲ ಕಟ್ಟಡದ ಎದುರಿನಲ್ಲಿ ನವಗ್ರಹ ದೇವಾಲಯ ಮತ್ತು ಪಕ್ಕದಲ್ಲಿ ಪುರುಷರಿಗಾಗಿ ಸೂರ್ಯ ಪುಷ್ಕರಣಿ, ಮಹಿಳೆಯರಿಗಾಗಿ ಚಂದ್ರ ಪುಷ್ಕರಣಿ ಶೀಘ್ರದಲ್ಲೆ ನಿರ್ಮಾಣವಾಗಿ ಲೋಕಾರ್ಪಣೆ ಗೊಳ್ಳಲಿದೆ. ಫೌಂಡೇಶನ್‌ ಕೇವಲ ಧಾರ್ಮಿಕ ಕ್ಷೇತ್ರವನ್ನು ಅಷ್ಟೇ ಅಲ್ಲದೆ ಸಮಾಜ ಸೇವಾ ಕಾರ್ಯಕ್ರಮ, ಪರಿಸರ ಅಭಿವೃದ್ಧಿ ಯೋಗ, ಶಿಕ್ಷಣ, ಕ್ರೀಡೆ ಮುಂತಾದ ವಿಭಾಗಗಳಲ್ಲಿ ತೊಡಗಿಕೊಂಡಿದೆ ಎಂದರು.

ಮುಂದಿನ ದಿನಗಳಲ್ಲಿ ಈಶ ಸಂಸ್ಥೆಯ ವತಿಯಿಂದ ಪ್ರಾಚೀನ ಗುರುಕುಲ ಪದ್ಧತಿಯನ್ನು ಮರುಕಲ್ಪಿಸುವ ರೀತಿಯಲ್ಲಿ ವಿದ್ಯಾ ಸಂಸ್ಥೆ ಆರಂಭಿಸುವುದು ಒಳಗೊಂಡಂತೆ 10 ಹಲವು ಸುಧಾರಣಾ ಕ್ರಮಗಳನ್ನು ಈ ಭಾಗದ ಜನತೆಗೆ ಪರಿಚಯಿಸಲಿದೆ ಎಂದರು.

ಯೋಗ ನರಸಿಂಹ ದೇವಸ್ಥಾನಕ್ಕೆ ಹೋಗಲು ನಾವು ಗ್ರಾಮಸ್ಥರಿಂದ ಯಾವುದೇ ಶುಲ್ಕವನ್ನು ಸಂಗ್ರಹಿಸುವುದಿಲ್ಲ ಮತ್ತು ರಸ್ತೆ ಬಳಕೆಗಾಗಿ ಯಾವುದೇ ಶುಲ್ಕವನ್ನು ಸಂಗ್ರಹಿಸದೆ ಗ್ರಾಮದ ರಸ್ತೆಯನ್ನು ಈಶ ಫೌಂಡೇಶನ್ ನಿರ್ವಹಿಸುತ್ತಿದೆ ಎಂದು ತಿಳಿಸಿದರು

ಪತ್ರಿಕಾಗೋಷ್ಠಿಯಲ್ಲಿ ಈಶಾ ಸಂಸ್ಥೆಯ ಕಾರ್ಯಕರ್ತರುಗಳಾದ ,ಪ್ರಣತಿ,ಅಪರ್ಣ,ಸ್ವಾಮಿ ಪ್ರಭೋಧ, ನಿರ್ಮಲ, ಕೃಷ್ಣವೇಣಿ, ವಿನಯ್, ಪ್ರಣವ್, ಲತಾ, ಹರ್ಷ,ರವಿತೇಜ, ಶರತ್.ಮತ್ತಿತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭಾರತೀಯರ ಕರೆತರಲು ವಿಶೇಷ ವಿಮಾನ ಮಾಡಿ: ಮೋದಿಗೆ ಸಿಎಂ ಸಿದ್ದು ಪತ್ರ
100ಕ್ಕೂ ಕನ್ನಡಿಗರ ಹೊತ್ತು ಬಂತು ಮೊದಲ ವಿಮಾನ