ಧರ್ಮ ಕಾರ್ಯಗಳಲ್ಲಿ ಯುವ ಪೀಳಿಗೆ ತೊಡಗಿರುವುದು ಅಭಿನಂದನೀಯ: ಶಾಸಕ ಕೆ.ಎಸ್. ಆನಂದ್

KannadaprabhaNewsNetwork |  
Published : Apr 07, 2025, 12:34 AM IST
6ಕೆಕಡಿಯು2. | Kannada Prabha

ಸಾರಾಂಶ

ಕಡೂರು, ಯುವ ಪೀಳಿಗೆ ಧರ್ಮ ಕಾರ್ಯಗಳಲ್ಲಿ ತಮ್ಮನ್ಮು ತೊಡಗಿಸಿಕೊಂಡು ಮುಂದಿನ ಪೀಳಿಗೆಯನ್ನು ಜಾಗೃತಗೊಳಿಸುವ ಕಾರ್ಯ ಅಭಿನಂದನೀಯವಾದದ್ದು ಎಂದು ಶಾಸಕ ಕೆ.ಎಸ್. ಆನಂದ್ ಹೇಳಿದರು.

ದೊಡ್ಡಪೇಟೆ ಶ್ರೀ ರಾಮದೇವರ ದೇವಾಲಯದಲ್ಲಿ ರಾಮ ಮೂರ್ತಿ ಪ್ರತಿಷ್ಟಾಪನೆ ಮಹೋತ್ಸವ

ಕನ್ನಡಪ್ರಭ ವಾರ್ತೆ, ಕಡೂರು

ಯುವ ಪೀಳಿಗೆ ಧರ್ಮ ಕಾರ್ಯಗಳಲ್ಲಿ ತಮ್ಮನ್ಮು ತೊಡಗಿಸಿಕೊಂಡು ಮುಂದಿನ ಪೀಳಿಗೆಯನ್ನು ಜಾಗೃತಗೊಳಿಸುವ ಕಾರ್ಯ ಅಭಿನಂದನೀಯವಾದದ್ದು ಎಂದು ಶಾಸಕ ಕೆ.ಎಸ್. ಆನಂದ್ ಹೇಳಿದರು.

ಭಾನುವಾರ ಪಟ್ಟಣದ ದೊಡ್ಡಪೇಟೆ ಶ್ರೀ ರಾಮದೇವರ ದೇವಾಲಯದಲ್ಲಿ ರಾಮನವಮಿ ಅಂಗವಾಗಿ ಪಂಚಲೋಹದ ರಾಮ ಮೂರ್ತಿ ಪರಿವಾರದ ಪ್ರತಿಷ್ಟಾಪನೆ ಮಹೋತ್ಸವದ ಧಾರ್ಮಿಕ ಸಭೆಯಲ್ಲಿ ಮಾತನಾಡಿದರು. ಹಿಂದೆ ಈ ಚಿಕ್ಕಗುಡಿ ಯಲ್ಲಿ ಪೂಜಾ ಕಾರ್ಯಗಳು ನೆರವೇರುತ್ತಿದ್ದು ಅನೇಕ ಹಿರಿಯರ ಪರಿಶ್ರಮ ಮತ್ತು ಇಂದಿನ ಯುವಕರ ಬೆಂಬಲದೊಂದಿಗೆ ಉತ್ಸವ ಮೂರ್ತಿಗಳ ಪ್ರತಿಷ್ಟಾಪನೆಗೆ ಒತ್ತು ನೀಡಿ ಧಾರ್ಮಿಕವಾಗಿ ತೊಡಗಿಸಿಕೊಂಡಿರುವುದು ಸಂತೋಷದ ಸಂಗತಿ. ಈ ದೇವಸ್ಥಾನದ ಅಭಿವೃದ್ಧಿಗೆ ನನ್ನ ಸಹಕಾರ ನಿರಂತರವಾಗಿರಲಿದೆ ಎಂದರು.

ಪುರಸಭೆ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಮಾತನಾಡಿ, ಈ ಭಾಗದ ಮಹಿಳೆಯರ ಹೆಚ್ಚಿನ ಕಾಳಜಿಯಿಂದ ಶ್ರೀ ರಾಮ ದೇವರ ದೇವಸ್ಥಾನಕ್ಕೆ ಹೊಸ ರೂಪ ನೀಡಲು ಸಾಧ್ಯವಾಗಿದೆ. ಶ್ರೀ ರಾಮ ಯುವಕ ಸಂಘದಿಂದ ಅಭಿವೃದ್ಧಿಗೆ ಶ್ರಮಿಸ ಲಾಗಿದೆ. ಎಲ್ಲರ ಆರಾಧ್ಯ ದೈವವಾಗಿ ಕಾಣುವ ಶ್ರೀರಾಮನ ಆದರ್ಶದ ತಳಹದಿಯಲ್ಲಿ ನಾವೆಲ್ಲರೂ ಸಾಗಬೇಕಿದೆ ಎಂದರು.

ಪುರಸಭಾ ಸದಸ್ಯ ತೋಟದಮನೆ ಮೋಹನ್ ಮಾತನಾಡಿ, ಯುವಕರ ಒಗ್ಗಟ್ಟಿನ ಬಲ ಮತ್ತು ಭಕ್ತರ ಅನನ್ಯ ಸಹಕಾರ ದಿಂದ ದೇವಸ್ಥಾನಕ್ಕೆ ವಿಶೇಷವಾದ ಉತ್ಸವ ಮೂರ್ತಿ ಪ್ರತಿಷ್ಟಾಪಿಸಲು ಸಾಧ್ಯವಾಗಿ ಧರ್ಮ ಕಾರ್ಯ ನಡೆಯುತ್ತಿದೆ ಎಂದರು.

ಮಹೋತ್ಸವದ ಅಂಗವಾಗಿ ಶ್ರೀ ರಾಮತಾರಕ ಹೋಮ ಹಾಗು ಸಂಕಲ್ಪ ಸೇವೆಗಳು ನಡೆದು ಸಂಜೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸ್ವಾಮಿ ಉತ್ಸವ ವಿಜೃಂಭಣೆಯಿಂದ ನೆರವೇರಿತು. ಈ ಸಂದರ್ಭದಲ್ಲಿ ಪುರಸಭಾ ಸದಸ್ಯ ಮರುಗುದ್ದಿ ಮನು, ಮುಖಂಡ ಪಂಗ್ಲಿ ಮಂಜುನಾಥ್,

ದೇವಸ್ಥಾನ ಸಮಿತಿ ಅಧ್ಯಕ್ಷ ಕೆ.ಜಿ.ರವಿಕುಮಾರ್, ಶ್ರೀಧರ್, ಎಂ.ಸೋಮಶೇಖರ್, ನಾಗು, ನಿರಂಜನ್ ದಳವಾಯಿ, ಕೆ.ಎಸ್. ಚೇತನ್, ಪ್ರದೀಪ್(ಪದ್ದು), ಪೇಟೆ ಕುಮಾರ್, ಚಿನ್ಮಯ್, ಆಟೋಚಂದ್ರು ಮತ್ತಿತರಿದ್ದರು.

-- ಬಾಕ್ಸ್ --

ಶ್ರೀ ರಾಮನವಮಿ‌ ಅಂಗವಾಗಿ ಪಟ್ಟಣದ ಕೋಟೆ ಶ್ರೀ ಪಾತಾಳಾಂಜನೇಯ ಸ್ವಾಮಿ‌ ದೇವಾಲಯದಲ್ಲಿ ಹೋಮಾದಿ ಕಾರ್ಯಕ್ರಮಗಳು ಜರುಗಿದವು. ದೇವರಿಗೆ ಬೆಳ್ಳಿ ಕವಚ ಸಮರ್ಪಿಸಲಾಯಿತು.

ದೇವಾಲಯ ಸಮಿತಿಯ ಪದಾಧಿಕಾರಿಗಳು ಇದ್ದರು. ಪೇಟೆಯ ಶ್ರೀಅಭಯ ವೀರಾಂಜನೇಯಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜಾ ಕಾರ್ಯಕ್ರಮ ನಡೆವ ಮೂಲಕ ಭಕ್ತಾದಿಗಳಿಗೆ ಪಾನಕ ಕೊಸುಂಬರಿಯ ಪ್ರಸಾದ ವಿತರಿಸಲಾಯಿತು. ಶ್ರೀ ರಾಮನ ಹಾಗೂ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜಾ ಕೈಂಕರ್ಯ ನೆರವೇರಿದವು.

6ಕೆಕೆಡಿಯು2

ಕಡೂರು ಪಟ್ಟಣದ ಪೇಟೆ ಶ್ರೀ ರಾಮದೇವರ ದೇವಾಲಯದಲ್ಲಿ ಪಂಚಲೋಹದ ಮೂರ್ತಿಗಳ ಪ್ರತಿಷ್ಟಾಪನೆ ಮಹೋತ್ಸವದಲ್ಲಿ ಶಾಸಕ ಕೆ.ಎಸ್. ಆನಂದ್, ಪುರಸಭಾ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಗೆ ದೇವಸ್ಥಾನ ಸಮಿತಿ ಪದಾಧಿಕಾರಿಗಳು ಅಭಿನಂದಿಸಿದರು.

PREV

Recommended Stories

ರಾಹುಲ್‌ ಗಾಂಧಿ ಧರಣಿಗೆ 4500 ಪೊಲೀಸರ ಭದ್ರತೆ
ಹಳಿತಪ್ಪಿದ ಬೆಂಗಳೂರು ಉಪನಗರ ರೈಲು ಯೋಜನೆ : ಕೆ-ರೈಡ್ ಜತೆಗಿನ ಎಲ್‌ ಆ್ಯಂಡ್‌ ಟಿ ಗುತ್ತಿಗೆ ರದ್ದು