ಕನ್ನಡಪ್ರಭ ವಾರ್ತೆ ಬ್ಯಾಡಗಿ
ಗಜೇಂದ್ರಗಡ-ಸೊರಬ ರಾಜ್ಯ ಹೆದ್ದಾರಿ-136 (ಮುಖ್ಯರಸ್ತೆ) ಅಗಲೀಕರಣ ವಿಳಂಬ ನೀತಿ ಖಂಡಿಸಿ ಮುಖ್ಯರಸ್ತೆ ಅಗಲೀಕರಣ ಹೋರಾಟ ಸಮಿತಿ ನಡೆಸುತ್ತಿರುವ ಆಮರಣಾಂತ ಉಪವಾಸ ಸತ್ಯಾಗ್ರಹದ ಸ್ಥಳಕ್ಕೆ ಆಗಮಿಸಿದ್ದ ಉಪವಿಭಾಗಾಧಿಕಾರಿ ಮತ್ತು ಪುರಸಭೆ ಮುಖ್ಯಾಧಿಕಾರಿಗಳೊಂದಿಗೆ ಮಾತನಾಡಿದರು.
ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಲು ನಿಮಗೇನು ತೊಂದರೆಯಾಗಿದೆ. ನಿತ್ಯವೂ ಲಕ್ಷಾಂತರ ಜನರು ತೊಂದರೆ ಅನುಭವಿಸುತ್ತಿದ್ದಾರೆ. ಇದನ್ನು ನೋಡಿಯೂ ಅಧಿಕಾರಿಗಳು ಮಾತ್ರ ಸುಮ್ಮನಿರುತ್ತೀರಿ ಎಂದರು.ನ್ಯಾಯವಾದಿ ಎನ್.ಎಸ್. ಬಟ್ಟಲಕಟ್ಟಿ ಮಾತನಾಡಿ, ನಿಗದಿತ ಸಮಯಕ್ಕೆ ನೋಟಿಫಿಕೇಶನ್ ಮಾಡದೇ ನಿಮ್ಮಿಂದಾದ ತಪ್ಪಿಗೆ ಮತ್ತೆ ಹೆಚ್ಚುವರಿ ಸಮಯ ಪಡೆದುಕೊಳ್ಳಬೇಕಾಯಿತು. 60 ದಿನದಲ್ಲಿ ಮಾಡುವ ಕೆಲಸಕ್ಕೆ 1 ವರ್ಷ ಕಾಲಾವಕಾಶ ಕೇಳಿದ್ದೀರಿ ಫೈನಲ್ ನೋಟಿಫಿಕೇಶನ್ ಮಾಡಲು ವಿಳಂಬವೇಕೆ..? ಯಾವುದೇ ನ್ಯಾಯಾಲಯ ಅಗಲೀಕರಣ ಮಾಡಬೇಡ ಎಂದಿಲ್ಲ ಆದರೆ ಅಧಿಕಾರಿಗಳು ಮಾತ್ರ ಇಲ್ಲಸಲ್ಲದ ಸುಳ್ಳು ಹೇಳಿಕೊಂಡು ತಿರುಗಾಡುತ್ತಿದ್ದಾರೆ ಎಂದು ಆರೋಪಿಸಿದರು.
ಈ ವೇಳೆ ಪುರಸಭೆ ಸದಸ್ಯರಾದ ರಾಮಣ್ಣ ಕೋಡಿಹಳ್ಳಿ, ಫಕ್ಕೀರಮ್ಮ ಛಲವಾದಿ, ಕಲಾವತಿ ಬಡಿಗೇರ, ಸರೋಜಾ ಉಳ್ಳಾಗಡ್ಡಿ, ಮಲ್ಲಮ್ಮ ಪಾಟೀಲ, ಗಣೇಶ ಅಚಲಕರ, ಬಿಜೆಪಿ ತಾಲೂಕಾಧ್ಯಕ್ಷ ಹಾಲೇಶ ಜಾಧವ, ಪಿ.ಎಲ್.ಡಿ. ಬ್ಯಾಂಕ್ ಮಾಜಿ ಅಧ್ಯಕ್ಷ ಶಿವಯೋಗಿ ಶಿರೂರ, ಡಾ. ಪ್ರಕಾಶ ಭಸ್ಮೆ, ವಿಜಯ್ ವಾಲಿಶೆಟ್ಟರ, ಪ್ರಕಾಶ ಪಟ್ಟಣಶೆಟ್ಟಿ, ಪ್ರಕಾಶ ಅಂಕಲಕೋಟಿ, ಪಾಂಡುರಂಗ ಸುತಾರ, ಎಂ.ಎಲ್. ಕಿರಣ, ಮಂಜುನಾಥ ಜಾಧವ, ಪ್ರದೀಪ್ ಜಾಧವ, ಗುತ್ತೆಮ್ಮ ಮಾಳಗಿ, ಫರೀದಾಬಾನು ನದೀಮುಲ್ಲಾ, ಪೀರಾಂಬಿ ವರ್ಧಿ ಸೇರಿದಂತೆ ಹಲವರಿದ್ದರು.