ಮಲೇರಿಯಾ ರೋಗ ಹರಡದಂತೆ ಮುಂಜಾಗ್ರತೆ ವಹಿಸುವುದು ಅವಶ್ಯ

KannadaprabhaNewsNetwork |  
Published : Jun 27, 2025, 12:48 AM IST
ಪೊಟೋ-ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ  ಮಲೇರಿಯಾ ರೋಗದ ಕುರಿತ ಮುಂಜಾಗ್ರತಾ ಸಭೆಯ ಉದ್ಘಾಟನೆಯನ್ನು ಡಾ.ಪಿ.ಡಿ,ತೋಟದ ನೀರು ಹಾಕುವ ಮೂಲಕ ಉದ್ಘಾಟಿಸಿದರು.  | Kannada Prabha

ಸಾರಾಂಶ

ಅಡ್ಡೋಕೇಸಿ ಸಭೆಯನ್ನು ಲಕ್ಷ್ಮೇಶ್ವರ ಸಮುದಾಯ ಆರೋಗ್ಯ ಕೇಂದ್ರ, ಲಕ್ಷ್ಮೇಶ್ವರ ಖಾಸಗಿ ವೈದ್ಯರು ಹಾಗೂ ಪ್ರಯೋಗ ಶಾಲಾ ತಂತ್ರಜ್ಞರಿಗೆ ಬುಧವಾರ ನಡೆಸಲಾಯಿತು.

ಲಕ್ಷ್ಮೇಶ್ವರ: ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಗದಗ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್, ರಾಷ್ಟ್ರೀಯ ಆರೋಗ್ಯ ಅಭಿಯಾನ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಅಧಿಕಾರಿಗಳ ಕಾರ್ಯಾಲಯ, ತಾಲೂಕು ಆರೋಗ್ಯಧಿಕಾರಿಗಳ ಕಾರ್ಯಾಲಯ ಆಶ್ರಯದಲ್ಲಿ ಮಲೇರಿಯಾ ವಿರೋಧಿ ಮಾಸಾಚರಣೆ ಅಂಗವಾಗಿ ಅಡ್ಡೋಕೇಸಿ ಸಭೆಯನ್ನು ಲಕ್ಷ್ಮೇಶ್ವರ ಸಮುದಾಯ ಆರೋಗ್ಯ ಕೇಂದ್ರ, ಲಕ್ಷ್ಮೇಶ್ವರ ಖಾಸಗಿ ವೈದ್ಯರು ಹಾಗೂ ಪ್ರಯೋಗ ಶಾಲಾ ತಂತ್ರಜ್ಞರಿಗೆ ಬುಧವಾರ ನಡೆಸಲಾಯಿತು.

ಈ ವೇಳೆ ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಅಧಿಕಾರಿ ಡಾ.ಎಚ್.ಎಲ್. ಗಿರಡ್ಡಿ ಮಾತನಾಡಿ, ಮಲೇರಿಯಾ ರೋಗವು ಮಳೆಗಾಲದಲ್ಲಿ ಹರಡುವ ಸಾಮಾನ್ಯ ರೋಗ. ಇದು ಸಾಂಕ್ರಾಮಿಕ ರೋಗ. ಮಲೇರಿಯಾ ಮುಕ್ತ ಭಾರತ ಮಾಡುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಮಲೇರಿಯಾ, ಡೆಂಘೀ, ಚಿಕೂನ್ ಗುನ್ಯ, ಮೆದುಳು ಜ್ವರ, ಆನೇಕಲ್ ರೋಗವು ಮಲೇರಿಯಾ ಸೋ೦ಕಿತ ಹೆಣ್ಣು ಸೊಳ್ಳೆ ಕಚ್ಚುವುದರಿಂದ ಒಬ್ಬರಿಂದ ಮತ್ತೊಬ್ಬರಿಗೆ ಬರುತ್ತದೆ. ರೋಗದ ಚಿಕಿತ್ಸೆ ಹಾಗೂ ಮುಂಜಾಗ್ರತೆ ಬಗ್ಗೆ ಮಾಹಿತಿ ನೀಡಿದರು. ಖಾಸಗಿ ವೈದ್ಯರು ತಮ್ಮ ಆಸ್ಪತ್ರೆಗಳಿಗೆ ಮಲೇರಿಯಾ ರೋಗದ ಲಕ್ಷಣ ಕಂಡು ಬರುವ ರೋಗಿಗಳು ಬಂದಾಗ ರೋಗದ ಲಕ್ಷಣ ತಿಳಿಸಿ. ಖಾಸಗಿ ವೈದ್ಯರು ಮಲೇರಿಯಾ ಹರಡದಂತೆ ಆರೋಗ್ಯ ಇಲಾಖೆಗೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು. ಈ ಕಾರ್ಯಕ್ರಮದ ಬಗ್ಗೆ ಡಾಕ್ಟರ್ ಸುಭಾಷ ದೈಗೊಂಡ, ಟಿಎಚ್ಒ ಹಾಗೂ ಡಾಕ್ಟರ್ ಪಿ.ಡಿ. ತೋಟ ದ ಮಾತನಾಡಿದರು.

ಈ ವೇಳೆ ತಾಲೂಕು ವೈದ್ಯಾಧಿಕಾರಿ ಡಾ. ಸುಭಾಷ ದೈಗೊಂಡ. ಡಾ.ಪಿ.ಡಿ. ತೋಟದ ಮಾತನಾಡಿದರು.

ಸಭೆಯಲ್ಲಿ ಡಾ. ಅನ್ನಪೂರ್ಣ ಶೆಟ್ಟರ್. ಆರ್.ಡಿ. ಗೌಡನಾಯ್ಕರ್, ಡಾ. ಪ್ರವೀಣ್ ಕುಮಾರ್ ಸಜ್ಜನ, ಎಫ್.ಬಿ. ಹೂಗಾರ, ಬಿ.ಎಸ್. ಹಿರೇಮಠ, ಪ್ರಕಾಶ ಕರ್ಜಿಗಿ, ಎಫ್.ಸಿ. ಹೊಸಮಠ, ರವಿ ಕೊಪ್ಪದ ಹಾಗೂ ಖಾಸಗಿ ವೈದ್ಯರು ಹಾಗೂ ಪ್ರಯೋಗಶಾಲಾ ತಂತ್ರಜ್ಞರು, ಆರೋಗ್ಯ ಇಲಾಖೆ ಸಿಬ್ಬಂದಿ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪತ್ರಕರ್ತ ತಗಡೂರಿಗೆ ಲೋಹಿಯಾ ಪ್ರಶಸ್ತಿ ಪ್ರದಾನ
ಕನ್ನಡದಲ್ಲಿ ರೈಲ್ವೆ ಪರೀಕ್ಷೆಗೆ ಇಲಾಖೆ : ಕರವೇ