ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ನಗರದ ರೈಲು ನಿಲ್ದಾಣದ ಬಳಿಯ ಮಾರುತಿ ನಗರದ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯ ಅಂಗನವಾಡಿ ಕೇಂದ್ರದಲ್ಲಿ ನಡೆದ ಲಸಿಕಾ ಅಧಿವೇಶನಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ ಬಳಿಕ ಅವರು ತಾಯಂದಿರಿಗೆ ಜಾಗೃತಿ ಮೂಡಿಸಿ ಮಾತನಾಡಿದರು.
ಪೋಲಿಯೋ, ಹೆಪಟೈಟಿಸ್ ಬಿ, ಗಂಟಲುಮಾರಿ, ನಾಯಿಕೆಮ್ಮು, ಧನುರ್ವಾಯು, ನ್ಯುಮೋನಿಯಾ, ವೈರಲ್ ಭೇದಿ, ಮೆದುಳು ಜ್ವರ ಹಾಗೂ ದಡಾರ ಸೇರಿದಂತೆ 12 ಮಾರಕ ರೋಗಗಳು ಮಕ್ಕಳ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಲಿದ್ದು, ಮಾರಣಾಂತಿಕವಾಗಬಹುದು. ಶಿಶು ಮರಣ ಪ್ರಮಾಣ ತಡಗಟ್ಟಿ, ಮಗುವಿನ ಸಶಕ್ತ ಬೆಳವಣಿಗೆಗೆ ಆರೋಗ್ಯ ಇಲಾಖೆಯೊಂದಿಗೆ ಪಾಲಕರು ಕೈಜೋಡಿಸಬೇಕು. ಪ್ರಸ್ತುತ ನೀಡಲಾಗುತ್ತಿರುವ ಲಸಿಕೆ, ಅದರ ಪ್ರಯೋಜನ ಹಾಗೂ ಮುಂದಿನ ಡೋಸ್ನ ಸಮಯದ ಬಗ್ಗೆ ತಾಯಂದಿರು ಮಾಹಿತಿ ಹೊಂದಿರಬೇಕು. ಲಸಿಕೆ ಹಾಕಿಸಲು ಬರುವಾಗ ತಾಯಿ ಕಾರ್ಡ್ ತರುವುದು ಕಡ್ಡಾಯ ಎಂದರು.ಮಗು ಜನಿಸಿದ ಅರ್ಧ ಗಂಟೆಯೊಳಗೆ ತಪ್ಪದೇ ಎದೆ ಹಾಲು ಕೊಡಬೇಕು. ಇದು ಮಗುವಿನಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಆರು ತಿಂಗಳವರೆಗೆ ಕೇವಲ ಎದೆಹಾಲು ಹಾಗೂ ಆರು ತಿಂಗಳ ನಂತರ ಪೂರಕ ಆಹಾರದ ಜೊತೆಗೆ ಕನಿಷ್ಠ ಎರಡು ವರ್ಷಗಳವರೆಗೆ ಎದೆಹಾಲು ನೀಡುವುದು ಅಗತ್ಯ. ಮಗು ಜನಿಸಿದ ತಕ್ಷಣ ಜೇನುತುಪ್ಪ ಅಥವಾ ಸಕ್ಕರೆ ನೀರು ನೀಡಬಾರದು ಎಂದು ಸಲಹೆ ನೀಡಿದರು.