ಹೂವಿನಹಡಗಲಿ: ಇಲ್ಲಿನ ಸಾರ್ವಜನಿಕ ಆಸ್ಪತ್ರೆ, ತಾಲೂಕು ಆರೋಗ್ಯ ಅಧಿಕಾರಿಗಳ ಕಚೇರಿ ಹಾಗೂ ಪತಂಜಲಿ ಯೋಗ ಚಾರಿಟೇಬಲ್ ಟ್ರಸ್ಟ್, ಮಲ್ಲಿಗೆ ಯೋಗಾ ಚಾರಿಟೇಬಲ್ ಟ್ರಸ್ಟ್, ಜೆಸಿಐ ಹಡಗಲಿ, ಬೀಚಿ ಬೆಂಬಲಿಗರ ಬಳಗದ ಸಹಯೋಗದಲ್ಲಿ ವಿಶ್ವ ಹೃದಯ ದಿನಾಚರಣೆ ಕುರಿತು ಪಟ್ಟಣದ ಪ್ರಮುಖ ರಸ್ತೆಗಳ ಮೂಲಕ ಘೋಷ ವಾಕ್ಯಗಳೊಂದಿಗೆ ಜಾಗೃತಿ ಮೂಡಿಸುತ್ತಾ, ಮ್ಯಾರಥಾನ್ ಮಾಡಲಾಯಿತು.ಪಟ್ಟಣದ ಲಾಲ್ ಬಹದ್ಧೂರ್ ಶಾಸ್ತ್ರಿ ವೃತ್ತದಲ್ಲಿ, ಮಾನವ ಸರಪಳಿ ಮಾಡಿ, ಹೃದಯದ ಕಾಳಜಿಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲಾಯಿತು.
ವೈದ್ಯ ಡಾ.ಲಕ್ಷ್ಮಣ ಲಮಾಣಿ ಮಾತನಾಡಿ, ದೇಶದ ಆಸ್ತಿಯಾಗಿರುವ ಯುವಕರು ಪ್ರಸ್ತುತ ದಿನಗಳಲ್ಲಿ ಅತಿ ಹೆಚ್ಚಾಗಿ ಹೃದಯ ಸಂಬಂಧಿ ಕಾಯಿಲೆಗಳಿಗೆ ಬಲಿಯಾಗುತ್ತಿದ್ದಾರೆ. ಹಾಗಾಗಿ ಯುವಕರು ಹೆಚ್ಚಾಗಿ ತಮ್ಮ ಆರೋಗ್ಯದ ಬಗ್ಗೆ ಗಮನಹರಿಸಬೇಕೆಂದು ಹೇಳಿದರು.
ವೈದ್ಯ ಡಾ.ಪ್ರಕಾಶ ಅಟವಾಳಗಿ, ವೈದ್ಯ ಡಾ.ವೀರೇಶ, ಇಂದುಮತಿ ಮಾತನಾಡಿದರು.ಎಸ್.ಬಿ. ಪಾಟೀಲ್, ಡಾ.ಸೋಮಶೇಖರ, ಡಾ.ಉಮೇಶ ಜೆ.ಡಿ., ಡಾ.ವೀರೇಶ್, ಡಾ.ಕವಿತಾ, ಡಾ.ಕೀರ್ತಿ, ರಫಿನಾ, ಕೋಡಿಹಳ್ಳಿ ಕೊಟ್ರೇಶ, ಹಿರಿಯ ಆರೋಗ್ಯ ನಿರೀಕ್ಷಕ ಶಿವಕುಮಾರ, ಬಸವರಾಜ, ಶಿವಪ್ಪ, ವಿರೂಪಾಕ್ಷಪ್ಪ, ಶ್ರೀನಿವಾಸಲು ಸೇರಿದಂತೆ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.