ಹೃದಯ ಆರೋಗ್ಯ ಹದಗೆಟ್ಟರೆ ಸುಧಾರಿಸುವುದು ಸುಲಭದ ಮಾತಲ್ಲ: ಡಾ.ಶಿವಕುಮಾರ

KannadaprabhaNewsNetwork |  
Published : Oct 02, 2024, 01:01 AM ISTUpdated : Oct 02, 2024, 01:02 AM IST
ಹೂವಿನಹಡಗಲಿಯಲ್ಲಿ ಆರೋಗ್ಯ ಇಲಾಖೆ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ವಿಶ್ವ ಹೃದಯ ದಿನಾಚರಣೆ ಆಚರಿಸಲಾಯಿತು. | Kannada Prabha

ಸಾರಾಂಶ

ಮನುಷ್ಯನ ದೇಹದ ಅಂಗಗಳಲ್ಲಿ ಪ್ರಮುಖಖವಾಗಿ ಹೃದಯವು ಒಂದು ಅಂಗವಾಗಿದೆ.

ಹೂವಿನಹಡಗಲಿ: ಇಲ್ಲಿನ ಸಾರ್ವಜನಿಕ ಆಸ್ಪತ್ರೆ, ತಾಲೂಕು ಆರೋಗ್ಯ ಅಧಿಕಾರಿಗಳ ಕಚೇರಿ ಹಾಗೂ ಪತಂಜಲಿ ಯೋಗ ಚಾರಿಟೇಬಲ್ ಟ್ರಸ್ಟ್, ಮಲ್ಲಿಗೆ ಯೋಗಾ ಚಾರಿಟೇಬಲ್ ಟ್ರಸ್ಟ್, ಜೆಸಿಐ ಹಡಗಲಿ, ಬೀಚಿ ಬೆಂಬಲಿಗರ ಬಳಗದ ಸಹಯೋಗದಲ್ಲಿ ವಿಶ್ವ ಹೃದಯ ದಿನಾಚರಣೆ ಕುರಿತು ಪಟ್ಟಣದ ಪ್ರಮುಖ ರಸ್ತೆಗಳ ಮೂಲಕ ಘೋಷ ವಾಕ್ಯಗಳೊಂದಿಗೆ ಜಾಗೃತಿ ಮೂಡಿಸುತ್ತಾ, ಮ್ಯಾರಥಾನ್ ಮಾಡಲಾಯಿತು.ಪಟ್ಟಣದ ಲಾಲ್‌ ಬಹದ್ಧೂರ್‌ ಶಾಸ್ತ್ರಿ ವೃತ್ತದಲ್ಲಿ, ಮಾನವ ಸರಪಳಿ ಮಾಡಿ, ಹೃದಯದ ಕಾಳಜಿಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲಾಯಿತು.

ಈ ಸಂದರ್ಭದಲ್ಲಿ ವೈದ್ಯ ಡಾ.ಶಿವಕುಮಾರ ಮಾತನಾಡಿ, ಮನುಷ್ಯನ ದೇಹದ ಅಂಗಗಳಲ್ಲಿ ಪ್ರಮುಖಖವಾಗಿ ಹೃದಯವು ಒಂದು ಅಂಗವಾಗಿದೆ. ಇದು ಹದಗೆಟ್ಟರೆ ಸುಧಾರಿಸುವುದು ಸುಲಭದ ಮಾತಲ್ಲ. ಹಾಗಾಗಿ ಹೃದಯವನ್ನು ಜೋಪಾನ ಮಾಡೋಣ ಎಂದರು.

ವೈದ್ಯ ಡಾ.ಲಕ್ಷ್ಮಣ ಲಮಾಣಿ ಮಾತನಾಡಿ, ದೇಶದ ಆಸ್ತಿಯಾಗಿರುವ ಯುವಕರು ಪ್ರಸ್ತುತ ದಿನಗಳಲ್ಲಿ ಅತಿ ಹೆಚ್ಚಾಗಿ ಹೃದಯ ಸಂಬಂಧಿ ಕಾಯಿಲೆಗಳಿಗೆ ಬಲಿಯಾಗುತ್ತಿದ್ದಾರೆ. ಹಾಗಾಗಿ ಯುವಕರು ಹೆಚ್ಚಾಗಿ ತಮ್ಮ ಆರೋಗ್ಯದ ಬಗ್ಗೆ ಗಮನಹರಿಸಬೇಕೆಂದು ಹೇಳಿದರು.

ವೈದ್ಯ ಡಾ.ಪ್ರಕಾಶ ಅಟವಾಳಗಿ, ವೈದ್ಯ ಡಾ.ವೀರೇಶ, ಇಂದುಮತಿ ಮಾತನಾಡಿದರು.

ಎಸ್‌.ಬಿ. ಪಾಟೀಲ್, ಡಾ.ಸೋಮಶೇಖರ, ಡಾ.ಉಮೇಶ ಜೆ.ಡಿ., ಡಾ.ವೀರೇಶ್, ಡಾ.ಕವಿತಾ, ಡಾ.ಕೀರ್ತಿ, ರಫಿನಾ, ಕೋಡಿಹಳ್ಳಿ ಕೊಟ್ರೇಶ, ಹಿರಿಯ ಆರೋಗ್ಯ ನಿರೀಕ್ಷಕ ಶಿವಕುಮಾರ, ಬಸವರಾಜ, ಶಿವಪ್ಪ, ವಿರೂಪಾಕ್ಷಪ್ಪ, ಶ್ರೀನಿವಾಸಲು ಸೇರಿದಂತೆ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಹಕಾರ ಕ್ಷೇತ್ರಕ್ಕೆ ಆರ್ಥಿಕ ಶಿಸ್ತು ಅಗತ್ಯ
ಅಧಿಕಾರಿಗಳು ಜಾತ್ಯತೀತವಾಗಿ ಕೆಲಸ ಮಾಡಿ : ಸಿಎಂ ಸಿದ್ದರಾಮಯ್ಯ