ಕನ್ನಡಪ್ರಭ ವಾರ್ತೆ ಚಾಮರಾಜನಗರ
ಭೀಮ ಜ್ಯೋತಿ ರ್ಯಾಲಿಗೆ ಚಾಲನೆ ನೀಡಿದ ಬೌದ್ಧಭಿಕ್ಕು ಸುಗತಪಾಲ ಮಾತನಾಡಿ, ಬುದ್ಧ, ಅಂಬೇಡ್ಕರ್ ಅವರ ಸಂದೇಶಗಳ ಅರಿವು ಮೂಡಿಸಲು ಭಾರತೀಯ ಬೌದ್ಧ ಮಹಾಸಭಾದ ಜಿಲ್ಲಾ ಶಾಖೆ ಆಯೋಜಿಸಿರುವ ಭೀಮ ಜ್ಯೋತಿ ರ್ಯಾಲಿಯು ಪ್ರತಿ ಗ್ರಾಮಗಳಿಗೂ ತೆರಳಿ ಪ್ರತಿ ಮನೆಗೂ ಪಸರಿಸಲಿ. ಬುದ್ಧ ಧಮ್ಮವನ್ನು ಹಳ್ಳಿಹಳ್ಳಿಗೂ ಮುಟ್ಟಿಸುವುದು ನಮ್ಮೆಲ್ಲರ ಕರ್ತವ್ಯ ಎಂದರು.ಅಧ್ಯಕ್ಷತೆ ವಹಿಸಿದ್ದ ಭಾರತೀಯ ಬೌದ್ಧ ಮಹಾಸಭಾ ಜಿಲ್ಲಾಧ್ಯಕ್ಷ ಆರ್. ಬಸವರಾಜು ಮಾತನಾಡಿ, ಬುದ್ಧ, ಅಂಬೇಡ್ಕರ್ ಅವರ ಆಶಯಗಳನ್ನು ಜಿಲ್ಲೆಯ ಲುಂಬಿನಿ ಬುದ್ಧವಿಹಾರದಿಂದಲೇ ಜಾಗೃತಿ ಮೂಡಿಸುವ ಸಲುವಾಗಿ ಭಾರತೀಯ ಬೌದ್ಧ ಮಹಾಸಭಾದ ವತಿಯಿಂದ ಭೀಮ ಜ್ಯೋತಿ ರ್ಯಾಲಿ ಹಮ್ಮಿಕೊಂಡಿದ್ದು, ಇಲ್ಲಿಂದ ನಾಗವಳ್ಳಿ, ಚಂದಕವಾಡಿ, ದಡದಹಳ್ಳಿ, ಸಿದ್ದಯ್ಯನಪುರ, ಕೋಡಿಉಗನೆ, ಮಲ್ಲಯ್ಯನಪುರ, ಯಡಪುರ, ರಾಮಸಮುದ್ರ, ಸಾರನಾಥ ಬೌದ್ಧ ವಿಹಾರಕ್ಕೆ ಸಂಜೆ ತೆರಳಿ ಮುಕ್ತಾಯಗೊಳ್ಳಲಿದೆ ಎಂದರು.
ಈ ವೇಳೆ ಭಾರತೀಯ ಬೌದ್ಧ ಮಹಾಸಭಾದ ಜಿಲ್ಲಾ ಉಪಾಧ್ಯಕ್ಷ ಮಲ್ಲಿಕ್, ಉಮೇಶ್, ನಿವೃತ ಪ್ರಾಂಶುಪಾಲ ಶಿವಣ್ಣ, ಕಾರ್ಯದರ್ಶಿ ನಂಜುಂಡಯ್ಯ ಜ್ಯೋತಿಗೌಡನಪುರದ ಯಜಮಾನರಾದ ಕೇಶವಮೂರ್ತಿ, ಸಿದ್ದಯ್ಯ, ಕೆಂಪ, ಮಾದಯ್ಯನವರ ಕುಟುಂಬ ವರ್ಗ ಹಾಗೂ ಭಾರತೀಯ ಬೌದ್ಧ ಮಹಾಸಭಾದ ಪದಾಧಿಕಾರಿಗಳು ಹಾಜರಿದ್ದರು.