ಕನ್ನಡಪ್ರಭ ವಾರ್ತೆ ಅರಕಲಗೂಡು
ತಾಲೂಕಿನ ಜೆ.ಹೊಸಹಳ್ಳಿ- ಗಂಗೂರು ಗ್ರಾಮದಲ್ಲಿ ಶುಕ್ರವಾರ ಬೆಳಕು ವೃದ್ಧಾಶ್ರಮದಲ್ಲಿರುವ ವೃದ್ಧರಿಗೆ ಬೆಳಗಿನ ಉಪಹಾರ ನೀಡಿ ಮಾತನಾಡಿದ ಅವರು, ನಿವೃತ್ತ ಶಿಕ್ಷಕಿ ಗೀತಾ ಅವರು ವೃದ್ಧಾಶ್ರಮ ತೆರೆದು ಅಂಗವಿಕಲತೆ ಹೊಂದಿರುವ ಹಾಗೂ ವೃದ್ಧರ ಆರೈಕೆ ಮಾಡುತ್ತಿರುವುದು ಪುಣ್ಯದ ಕಾಯಕವಾಗಿದೆ. ದಾನಿಗಳು ವೃದ್ಧಾಶ್ರಮಗಳಿಗೆ ಕೈಲಾದ ಸಹಾಯ ಮಾಡಬೇಕು. ಈ ದಿನ ನಾನು ಉಪಹಾರ ನೀಡಿ ಕಿರು ಸಹಾಯ ಮಾಡಿದ್ದು ಮುಂದಿನ ದಿನಗಳಲ್ಲಿ ಮತ್ತಷ್ಟು ಸಹಾಯ ಮಾಡುತ್ತೇನೆ. ವೃದ್ಧರ ಆರೋಗ್ಯದ ಹಿತದೃಷ್ಟಿಯಿಂದ ಆರೋಗ್ಯ ತಪಾಸಣೆಗೆ ಸಹಾಯ ಮಾಡುವುದಾಗಿ ತಿಳಿಸಿದರು.