ವೃದ್ಧರ ಸೇವೆ ಮಾಡುವುದು ನಾಗರಿಕ ಸಮಾಜದ ಹೊಣೆ

KannadaprabhaNewsNetwork |  
Published : Feb 16, 2025, 01:47 AM IST
15ಎಚ್ಎಸ್ಎನ್10 : ಅರಕಲಗೂಡು ತಾಲೂಕು ಜೆ.ಹೊಸಹಳ್ಳಿ- ಗಂಗೂರು ಗ್ರಾಮದಲ್ಲಿ ಶುಕ್ರವಾರ ಬೆಳಕು ವೃದ್ಧಾಶ್ರಮದ ವೃದ್ಧರಿಗೆ ಸಮಾಜ ಸೇವಕ ಕಮಲೇಶ್ ಬೆಳಗಿನ ಉಪಹಾರ ನೀಡಿ ಮಾನವೀಯತೆ ಮೆರೆದರು. | Kannada Prabha

ಸಾರಾಂಶ

ಮುಪ್ಪಿನಲ್ಲಿ ಹಿರಿಯರು ಮತ್ತು ವೃದ್ಧರ ಸೇವೆ ಮಾಡಿ ಸಮಾಜದಲ್ಲಿ ಅವರನ್ನು ಗೌರವಯುತವಾಗಿ ನೋಡಿಕೊಳ್ಳುವುದು ನಾಗರಿಕ ಸಮಾಜದ ಜವಾಬ್ದಾರಿಯಾಗಿದೆ ಎಂದು ಸಮಾಜ ಸೇವಕ ಕಮಲೇಶ್ ಅಭಿಪ್ರಾಯ ವ್ಯಕ್ತಪಡಿಸಿದರು. ದಾನಿಗಳು ವೃದ್ಧಾಶ್ರಮಗಳಿಗೆ ಕೈಲಾದ ಸಹಾಯ ಮಾಡಬೇಕು. ಈ ದಿನ ನಾನು ಉಪಹಾರ ನೀಡಿ ಕಿರು ಸಹಾಯ ಮಾಡಿದ್ದು ಮುಂದಿನ ದಿನಗಳಲ್ಲಿ ಮತ್ತಷ್ಟು ಸಹಾಯ ಮಾಡುತ್ತೇನೆ. ವೃದ್ಧರ ಆರೋಗ್ಯದ ಹಿತದೃಷ್ಟಿಯಿಂದ ಆರೋಗ್ಯ ತಪಾಸಣೆಗೆ ಸಹಾಯ ಮಾಡುವುದಾಗಿ ತಿಳಿಸಿದರು.

ಕನ್ನಡಪ್ರಭ ವಾರ್ತೆ ಅರಕಲಗೂಡು

ಮುಪ್ಪಿನಲ್ಲಿ ಹಿರಿಯರು ಮತ್ತು ವೃದ್ಧರ ಸೇವೆ ಮಾಡಿ ಸಮಾಜದಲ್ಲಿ ಅವರನ್ನು ಗೌರವಯುತವಾಗಿ ನೋಡಿಕೊಳ್ಳುವುದು ನಾಗರಿಕ ಸಮಾಜದ ಜವಾಬ್ದಾರಿಯಾಗಿದೆ ಎಂದು ಸಮಾಜ ಸೇವಕ ಕಮಲೇಶ್ ಅಭಿಪ್ರಾಯ ವ್ಯಕ್ತಪಡಿಸಿದರು.

ತಾಲೂಕಿನ ಜೆ.ಹೊಸಹಳ್ಳಿ- ಗಂಗೂರು ಗ್ರಾಮದಲ್ಲಿ ಶುಕ್ರವಾರ ಬೆಳಕು ವೃದ್ಧಾಶ್ರಮದಲ್ಲಿರುವ ವೃದ್ಧರಿಗೆ ಬೆಳಗಿನ ಉಪಹಾರ ನೀಡಿ ಮಾತನಾಡಿದ ಅವರು, ನಿವೃತ್ತ ಶಿಕ್ಷಕಿ ಗೀತಾ ಅವರು ವೃದ್ಧಾಶ್ರಮ ತೆರೆದು ಅಂಗವಿಕಲತೆ ಹೊಂದಿರುವ ಹಾಗೂ ವೃದ್ಧರ ಆರೈಕೆ ಮಾಡುತ್ತಿರುವುದು ಪುಣ್ಯದ ಕಾಯಕವಾಗಿದೆ. ದಾನಿಗಳು ವೃದ್ಧಾಶ್ರಮಗಳಿಗೆ ಕೈಲಾದ ಸಹಾಯ ಮಾಡಬೇಕು. ಈ ದಿನ ನಾನು ಉಪಹಾರ ನೀಡಿ ಕಿರು ಸಹಾಯ ಮಾಡಿದ್ದು ಮುಂದಿನ ದಿನಗಳಲ್ಲಿ ಮತ್ತಷ್ಟು ಸಹಾಯ ಮಾಡುತ್ತೇನೆ. ವೃದ್ಧರ ಆರೋಗ್ಯದ ಹಿತದೃಷ್ಟಿಯಿಂದ ಆರೋಗ್ಯ ತಪಾಸಣೆಗೆ ಸಹಾಯ ಮಾಡುವುದಾಗಿ ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!