ಕನ್ನಡಪ್ರಭ ವಾರ್ತೆ ಅಮೀನಗಡ
ನಾವು, ರವೀಂದ್ರ ಕಲಬುರ್ಗಿ ಹಾಗೂ ಗ್ರಾಮದ ಹಿರಿಯರು ಈ ಸಂಘದ ಹಿತೈಷಿಗಳಾಗಿ ಮಧ್ಯೆ ಪ್ರವೇಶಿಸಿ, ಕೂಲಂಕಶವಾಗಿ ಪರಿಶೀಲಿಸಿದಾಗ ಸಂಘಕ್ಕೆ ನಾಲ್ಕು ತಿಂಗಳ ಹಿಂದೆ ನೂತನ ಅಧ್ಯಕ್ಷ, ಪದಾಧಿಕಾರಿಗಳು ಆಯ್ಕೆಗೊಂಡಿದ್ದಾರೆ. ಈ ಹಿಂದಿನ ಅಧ್ಯಕ್ಷರು ಸರಿಯಾಗಿ ವ್ಯವಹಾರ ನೋಡಿಕೊಳ್ಳಬೇಕಿತ್ತು. ಕಾರ್ಯದರ್ಶಿ ಸರಿಯಾಗಿ ಮಾಡಿರುತ್ತಾರೆಂಬ ನಂಬಿಕೆ ಮೇಲೆ ಬಿಟ್ಟು ನಿರ್ಲಕ್ಷಿಸಿದ್ದಾರೆ. ಕಾರ್ಯದರ್ಶಿ ಬಿ.ಎನ್.ರಾಮದುರ್ಗ ಅವರು ₹1.18 ಕೋಟಿ ಮಿತವ್ಯಯ ಹಣ ದುರುಪಯೋಗ ಪಡಿಸಿಕೊಂಡಿದ್ದು, ವ್ಯಾಪಾರ ವಹಿವಾಟಿನ ಖಾತೆಯಲ್ಲಿ ₹ 30 ಲಕ್ಷ ಸದಸ್ಯರಿಗೆ ಸಾಲದ ರೂಪದಲ್ಲಿ ನೀಡಿರುವುದು ಕಂಡು ಬಂದಿದೆ ಎಂದರು.
ಇದರ ಬಗ್ಗೆ ನಾವು ಹಿರಿಯರು, ಪದಾಧಿಕಾರಿಗಳನ್ನು ವಿಚಾರಿಸಿದಾಗ, ಸಂಘದ ವ್ಯವಹಾರ ಖಾತೆಯಲ್ಲಿ ಸದಸ್ಯರು ತೆಗೆದುಕೊಂಡಿರುವ ಹಣ ಸತ್ಯವಾಗಿದೆ. ₹1.18 ಕೋಟಿ ಮಿತವ್ಯಯ ಹಣವನ್ನು ಕಾರ್ಯದರ್ಶಿ ದುರ್ಬಳಕೆ ಮಾಡಿಕೊಂಡಿರುವುದು ಒಪ್ಪಿಕೊಂಡಿದ್ದಾನೆ.₹1.18 ಕೋಟಿ ಹಣವನ್ನು ಪ್ಲಾಟ್, ಮನೆ ಮಾರಿ ಹಿಂತಿರುಗಿಸುವುದಾಗಿ ಬಾಂಡ್ನಲ್ಲಿ ಲಿಖಿತ ಬರೆದುಕೊಟ್ಟಿದ್ದಾನೆ. ಈಗಾಗಲೇ ₹10 ಲಕ್ಷ ವಸೂಲಿಯಾಗಿದ್ದು, ಕಾರ್ಯದರ್ಶಿಯ ಆಸ್ತಿಯನ್ನು ಬೇರೆಯವರಿಗೆ ವರ್ಗಾಯಿಸಿ ಕೊಡಬೇಕಾಗಿರುವುದರಿಂದ ಅದಕ್ಕೆ ಬೇಕಾದ ಪೂರಕ ದಾಖಲಾತಿಗಳ ಸಂಗ್ರಹಕ್ಕೆ ತಾಂತ್ರಿಕ ಅಡಚಣೆಗಳಿದ್ದು, ಅತಿ ಶೀಘ್ರವಾಗಿ ಎಂದರೂ 4-5 ತಿಂಗಳಲ್ಲಿ ಸಂಪೂರ್ಣ ವಸೂಲಾತಿ ಮಾಡಿ ಸಂಘಕ್ಕೆ ಭರಿಸಲಾಗುವುದು. ನೇಕಾರರು ಯಾವುದೇ ಆತಂಕಪಡಬೇಕಾಗಿಲ್ಲ. ಇನ್ನು ಮುಂದೆ ಈ ರೀತಿ ಆಗದಂತೆ ಎಚ್ಚರವಹಿಸಲಾಗುವುದು ಎಂದು ಭರವಸೆ ನೀಡಿದರು.ಸುದ್ದಿಗೋಷ್ಠಿಯಲ್ಲಿ ರವೀಂದ್ರ ಕಲಬುರ್ಗಿ, ಸಂಘದ ಅಧ್ಯಕ್ಷ ಪ್ರವೀಣ ರಾಮದುರ್ಗ, ಹಿಂದಿನ ಅಧ್ಯಕ್ಷ ಕೆ.ಎಸ್.ರಾಮದುರ್ಗ, ಪದಾಧಿಕಾರಿಗಳು ಇದ್ದರು.