ಎಣಿಕೆ ಕಾರ್ಯದಲ್ಲಿ ಸ್ತ್ರೀ ಶಕ್ತಿ ಸ್ವಸಹಾಯ ಸಂಘಗಳ ಮಹಿಳೆಯರು ಭಾಗಿ
ಕನ್ನಡಪ್ರಭ ವಾರ್ತೆ ನಂಜನಗೂಡುಶ್ರೀಕಂಠೇಶ್ವರಸ್ವಾಮಿಯ ಹುಂಡಿಯಲ್ಲಿ 1 ಕೋಟಿ 84 ಲಕ್ಷ , 47 ಸಾವಿರ ನಗದು, 63 ಗ್ರಾಂ ಚಿನ್ನ, 2 ಕೆಜಿ 100 ಗ್ರಾಂ ಬೆಳ್ಳಿ ಸಂಗ್ರಹಗೊಂಡಿದೆ ಎಂದು ದೇವಾಲಯದ ಕಾರ್ಯನಿರ್ವಹಣಾಧಿಕಾರಿ ಜಗದೀಶ್ ಕುಮಾರ್ ಹೇಳಿದರು.
ದೇವಾಲಯದ ದಾಸೋಹ ಭವನದಲ್ಲಿ ಗುರುವಾರ ದೇವಾಲಯದ ಹುಂಡಿಗಳ ಪರ್ಕಾವಣಿ ಕಾರ್ಯ ನಡೆಯಿತು. ಹುಂಡಿಯಲ್ಲಿ 1 ಕೋಟಿ 84 ಲಕ್ಷ, 47 ಸಾವಿರ ನಗದು, 63 ಗ್ರಾಂ ಚಿನ್ನ, 2 ಕೆಜಿ 100 ಗ್ರಾಂ ಬೆಳ್ಳಿ, ಅಮೆರಿಕಾ ದೇಶದ 332 ಡಾಲರ್, 25 ಯುರೋ, ಎರಡು ಸಾವಿರ ವಿಯೆಟ್ ನಾರ್ವೆ ಕರೆನ್ಸಿ, 5 ಯಾನ್, 10 ಆಸ್ಟ್ರೇಲಿಯಾ ದೇಶದ ಕರೆನ್ಸಿ, 5 ಸಿಂಗಾಪುರ್ ಡಾಲರ್, 50 ಫಿಲಿಪೈನ್ ಕರೆನ್ಸಿ ಸಂಗ್ರಹಗೊಂಡಿದೆ ಎಂದು ಮಾಹಿತಿ ನೀಡಿದರು.
ಎಣಿಕೆ ಕಾರ್ಯದಲ್ಲಿ ಸ್ತ್ರೀ ಶಕ್ತಿ ಸ್ವಸಹಾಯ ಸಂಘಗಳ ಮಹಿಳೆಯರು ಭಾಗಿಯಾಗಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.