ಜಲಜೀವನ್‌ ಮಿಷನ್‌ ವಸ್ತು ಪ್ರದರ್ಶನ

KannadaprabhaNewsNetwork |  
Published : Jul 24, 2024, 12:23 AM IST
23ಜಿಪಿಟಿ2ಗುಂಡ್ಲುಪೇಟೆ ತಾಲೂಕಿನ ತೊಂಡವಾಡಿ ಗ್ರಾಮದಲ್ಲಿ ಜಲ ಜೀವನ್‌ ಮಿಷನ್‌ ವಸ್ತುಪ್ರದರ್ಶನವನ್ನು ಚಿಕ್ಕಾಟಿ ಗ್ರಾಪಂ ಅಧ್ಯಕ್ಷ ಅರೇಪುರ ಮಹದೇವಕುಮಾರ್‌ ಉದ್ಘಾಟಿಸಿದರು. | Kannada Prabha

ಸಾರಾಂಶ

ಗುಂಡ್ಲುಪೇಟೆ ತಾಲೂಕಿನ ತೊಂಡವಾಡಿ ಗ್ರಾಮದಲ್ಲಿ ಜಲ ಜೀವನ್‌ ಮಿಷನ್‌ ವಸ್ತು ಪ್ರದರ್ಶನವನ್ನು ಚಿಕ್ಕಾಟಿ ಗ್ರಾಪಂ ಅಧ್ಯಕ್ಷ ಅರೇಪುರ ಮಹದೇವಕುಮಾರ್‌ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ತಾಲೂಕಿನ ತೊಂಡವಾಡಿ ಗ್ರಾಮದಲ್ಲಿ ಜಿಲ್ಲಾ ಪಂಚಾಯಿತಿ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಹಾಗೂ ಅನುಷ್ಠಾನ ಬೆಂಬಲಿತ ಸಂಪನ್ಮೂಲ ಸಂಸ್ಥೆಯ ಭಗೀರಥ ಸಂಯುಕ್ತಾಶ್ರಯದಲ್ಲಿ ಜೆಜೆಎಂ ಮತ್ತು ಎಸ್‌ಬಿಎಂ ಯೋಜನೆಯ ಐಇಸಿ ಹಾಗೂ ಎಚ್‌ಆರ್‌ಡಿಸಿ ಕಾರ್ಯಕ್ರಮದಡಿ ಐಎಸ್‌ಆರ್‌ಎ ತಂಡವು ಪುರುಮಾರಮ್ಮ ಗ್ರಾಮ ದೇವತೆ ಹಬ್ಬದ ಅಂಗವಾಗಿ ವಸ್ತು ಪ್ರದರ್ಶನವನ್ನು ಚಿಕ್ಕಾಟಿ ಗ್ರಾಪಂ ಅಧ್ಯಕ್ಷ ಅರೇಪುರ ಮಹದೇವಕುಮಾರ್‌ ಉದ್ಘಾಟಿಸಿದರು.

ಕೇಂದ್ರ ಜಲಶಕ್ತಿ ಮಂತ್ರಾಲಯ ಜಾರಿಗೆ ತಂದಿರುವ ಜಲ ಜೀವನ್‌ ಮಿಷನ್‌ ಯೋಜನೆಯಲ್ಲಿ ಪ್ರತಿಯೊಂದು ಮನೆಗೆ ಕಾರ್ಯಾತ್ಮಕ ನಳ ಸಂಪರ್ಕ ಕಲ್ಪಿಸಲಾಗಿದೆ. ಅದೇ ರೀತಿ ರಾಜ್ಯ ಸರ್ಕಾರ ಮನೆ ಮನೆಗೆ ಗಂಗೆ ಎಂಬ ಘೋಷಣೆಯೊಂದಿಗೆ ಪ್ರತಿಯೊಂದು ಮನೆಗೂ ಕಾರ್ಯಾತ್ಮಕ ನಳ ಸಂಪರ್ಕ ನೀಡಿದೆ ಎಂದರು. ಈ ಒಂದು ಯೋಜನೆಯಲ್ಲಿ ಪ್ರತಿಯೊಂದು ಮನೆಗೂ ಶುದ್ಧ ಮತ್ತು ಸುರಕ್ಷಿತ ನೀರನ್ನು ನೀಡುವ ಒಂದು ಮಹತ್ವಾಕಾಂಕ್ಷೆ ಯೋಜನೆ ಇದಾಗಿದ್ದು, ಇಂಗು ಗುಂಡಿ ಮತ್ತು ಕೈ ತೋಟ ನಿರ್ಮಿಸಿಕೊಳ್ಳುವಂತೆ ಸಾರ್ವಜನಿಕರಿಗೆ ಪ್ರೇರಣೆ ಸಿಗಲಿ ಎಂದು ಗ್ರಾಮ ದೇವತೆ ಹಬ್ಬದಂದು ನಡೆಸಲಾಗಿದೆ ಎಂದರು.

ಇಂಗು ಗುಂಡಿ ಮತ್ತು ಕೈ ತೋಟ ನಿರ್ಮಿಸಿಕೊಂಡರೆ ಅಂತರ್ಜಲ ಮಟ್ಟವನ್ನು ಹೆಚ್ಚಿಸಿ ಮುಂದಿನ ಪೀಳಿಗೆಗೆ ನೀರಿನ ಉಳಿತಾಯ ಮಾಡಬಹುದಾಗಿದೆ. ಕಾರ್ಯಾತ್ಮಕ ನಳ ಸಂಪರ್ಕದಲ್ಲೂ ಸಹ ಭಾಗಿತ್ವ ಪಡೆಯಬಹುದಾಗಿದೆ ಎಂದರು.

ಗ್ರಾಪಂ ಮಾಜಿ ಅಧ್ಯಕ್ಷರಾದ ಜಿ.ಮಹೇಶ್‌, ರಾಚಪ್ಪ, ಹೊಣಕಾರನಾಯಕ, ಬಸವನಾಯಕ, ಚೈತ್ರ ಮಲ್ಲಿಕಾರ್ಜುನ, ಮುಖಂಡರಾದ ಮಹದೇವನಾಯಕ ಹಾಗೂ ಗ್ರಾಮಸ್ಥರು, ಐಎಸ್‌ಆರ್‌ಎ ತಂಡದ ಸಿಬ್ಬಂದಿ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಲ್ಲಮಾವಟಿ ಭಗವತಿ ದೇವಸ್ಥಾನದಲ್ಲಿ ಶಡಾಧರ ಪೂಜಾ ಸಂಪನ್ನ
ಕಡಿಮೆ ಬೆಳೆ ವಿಮಾ ಮೊತ್ತ ಸರಿಪಡಿಸಿ ಮರು ಪಾವತಿಗೆ ಆಗ್ರಹ