ಕನ್ನಡಪ್ರಭ ವಾರ್ತೆ, ತುರುವೇಕೆರೆ
ಈಗಾಗಲೇ ಸರ್ವೋಚ್ಛ ನ್ಯಾಯಾಲಯವು ಹೊರಡಿಸಿರುವ ತೀರ್ಪಿನಂತೆಯೇ ಸದಾಶಿವ ಆಯೋಗದ ವರದಿಯನ್ನು ಜರೂರಾಗಿ ಮಾಡುವುದರಿಂದ ಪರಿಶಿಷ್ಟ ಜಾತಿಯ ಲಕ್ಷಾಂತರ ಸಂಖ್ಯೆಯ ನೌಕರರು, ಅಧಿಕಾರಿಗಳು ಬಡ್ತಿ, ನೇಮಕ ಹೊಂದಲು ಹೆಚ್ಚು ಅನುಕೂಲವಾಗಲಿದೆ. ಆದ್ದರಿಂದ ಸಮಿತಿಯ ವರದಿಯನ್ನು ವಿಳಂಬ ಮಾಡದೇ ಅತಿ ವೇಗವಾಗಿ ಜಾರಿಗೊಳಿಸಿ ಅನುಕೂಲ ಮಾಡಿಕೊಡಬೇಕೆಂದು ಮನವಿ ಸಲ್ಲಿಸಿದರು.
ಈ ಸಂಧರ್ಭದಲ್ಲಿ ತಾಲೂಕು ಆದಿ ಜಾಂಬವ ಮಹಾಸಭಾ ಅಧ್ಯಕ್ಷರಾದ ವಿ.ಟಿ.ವೆಂಕಟರಾಮಯ್ಯ, ಗೌರವಾಧ್ಯಕ್ಷ ರಾಮಕೃಷ್ಣಯ್ಯ, ಖಜಾಂಚಿ ಬೋರಪ್ಪ, ದಸಂಸ ಹಿರಿಯ ಹೋರಾಟಗಾರ ಮಲ್ಲೂರು ತಿಮ್ಮೇಶ್, ಗುರುದತ್, ಮೇಲನಹಳ್ಳಿ ಮಂಜಣ್ಣ ಮತ್ತು ಪದಾಧಿಕಾರಿಗಳು ಭಾಗವಹಿಸಿದ್ದರು.