ಧರ್ಮಸ್ಥಳ ಬೆಂಬಲಿಸಿ ಜಯಕರ್ನಾಟಕ ಕಾರ್‌ ರ್ಯಾಲಿ

KannadaprabhaNewsNetwork |  
Published : Aug 24, 2025, 02:00 AM IST
23ಎಚ್ಎಸ್ಎನ್3 :  | Kannada Prabha

ಸಾರಾಂಶ

ಧರ್ಮಸ್ಥಳದಲ್ಲಿನ ಘಟನೆಗಳು ಹಾಗೂ ಅಪಪ್ರಚಾರ ಹೋಗಲಾಡಿಸುವ ನಿಟ್ಟಿನಲ್ಲಿ ಜಯ ಕರ್ನಾಟಕ ಸಂಘಟನೆಯಿಂದ ಬೆಂಗಳೂರಿನಿಂದ ಧರ್ಮಸ್ಥಳದವರೆಗೆ ಹೊರಟ ಕಾರುಗಳ ರ್‍ಯಾಲಿ ಹಾಸನ ಮೂಲಕ ಬೇಲೂರಿಗೆ ಆಗಮಿಸಿದ ಸಂದರ್ಭ ಒಕ್ಕಲಿಗರ ಕಲ್ಯಾಣ ಮಂಟಪದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಇತ್ತೀಚಿನ ದಿನಗಳಲ್ಲಿ ಧಾರ್ಮಿಕ ಕ್ಷೇತ್ರ ಧರ್ಮಸ್ಥಳದ ಬಗ್ಗೆ ಆರೋಪ, ಅಪಸ್ವರಗಳಂತಹ ಘಟನೆಗಳನ್ನ ಸೃಷ್ಠಿಸುವಂತಹ ಸಂದರ್ಭಗಳನ್ನು ನೋಡಿದಾಗ ಆಘಾತವಾಯಿತು. ಇಳಿ ವಯಸ್ಸಿನ ಮಹಿಳೆಯೊಬ್ಬರು ಸುಳ್ಳು ಹೇಳಿದ್ದೇನೆ ಎಂಬುದನ್ನು ಆಕೆಯೇ ಒಪ್ಪಿಕೊಂಡಿರುವುದು ಮಾಧ್ಯಮದಲ್ಲಿ ನೋಡಿದ್ದೇವೆ. ಇದಕ್ಕೆಲ್ಲ ಯಾರೂ ಕಾರಣ, ಈ ಚಿತ್ರಕತೆ ಬರೆದವರ್‍ಯಾರು, ನಿರ್ಮಾಪಕ ಯಾರು ತಿಳಿಯುತ್ತಿಲ್ಲ ಎಂದರು.

ಕನ್ನಡಪ್ರಭ ವಾರ್ತೆ ಬೇಲೂರು ಭಾರತಾದ್ಯಂತ ಹೆಸರುವಾಸಿಯಾಗಿರುವ ಪುಣ್ಯಸ್ಥಳವೆಂದರೆ ಅದು ಧರ್ಮಸ್ಥಳ. ಆ ಕ್ಷೇತ್ರದ ಮೇಲಿನ ಆರೋಪ, ಅಪಸ್ವರ ಖಂಡಿಸಿ ಜಯ ಕರ್ನಾಟಕ ಸಂಘಟನೆಯಿಂದ ಕಾರುಗಳ ರ್‍ಯಾಲಿ ಮೂಲಕ ಧರ್ಮಸ್ಥಳಕ್ಕೆ ಬೆಂಬಲ ವ್ಯಕ್ತಪಡಿಸಿ ಎಸ್‌ಐಟಿಗೆ ಮನವಿ ಸಲ್ಲಿಸಲು ತೆರಳುತಿದ್ದೇವೆ ಎಂದು ಜಯ ಕರ್ನಾಟಕ ಸಂಘಟನೆ ರಾಜ್ಯಾಧ್ಯಕ್ಷ ಬಿ.ಎನ್. ಜಗದೀಶ್ ಹೇಳಿದರು.ಧರ್ಮಸ್ಥಳದಲ್ಲಿನ ಘಟನೆಗಳು ಹಾಗೂ ಅಪಪ್ರಚಾರ ಹೋಗಲಾಡಿಸುವ ನಿಟ್ಟಿನಲ್ಲಿ ಜಯ ಕರ್ನಾಟಕ ಸಂಘಟನೆಯಿಂದ ಬೆಂಗಳೂರಿನಿಂದ ಧರ್ಮಸ್ಥಳದವರೆಗೆ ಹೊರಟ ಕಾರುಗಳ ರ್‍ಯಾಲಿ ಹಾಸನ ಮೂಲಕ ಬೇಲೂರಿಗೆ ಆಗಮಿಸಿದ ಸಂದರ್ಭ ಒಕ್ಕಲಿಗರ ಕಲ್ಯಾಣ ಮಂಟಪದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಇತ್ತೀಚಿನ ದಿನಗಳಲ್ಲಿ ಧಾರ್ಮಿಕ ಕ್ಷೇತ್ರ ಧರ್ಮಸ್ಥಳದ ಬಗ್ಗೆ ಆರೋಪ, ಅಪಸ್ವರಗಳಂತಹ ಘಟನೆಗಳನ್ನ ಸೃಷ್ಠಿಸುವಂತಹ ಸಂದರ್ಭಗಳನ್ನು ನೋಡಿದಾಗ ಆಘಾತವಾಯಿತು. ಮತ್ತು ಅಲ್ಲಿನ ಘಟನೆಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಯೂಟ್ಯೂಬರ್‌ಗಳು ಬಿಂಬಿಸುವ ಕೆಲಸ ಮಾಡಿದ್ದನ್ನು ನೋಡಿದ ಜನಸಾಮಾನ್ಯರಿಗೆ ಇದು ನಿಜವೇನೋ ಎಂಬ ಅನುಮಾನದಲ್ಲಿ ನೋಡುವ ಪ್ರಕ್ರಿಯೆ ಚಾಲನೆಯಲ್ಲಿತ್ತು. ಅಂತಹ ಸಂದರ್ಭದಲ್ಲಿ ಪೊಲೀಸ್‌ ತನಿಖೆ ನಡೆಸುತ್ತಿದ್ದಾರೆ. ಇನ್ನೊಂದು ಕಡೆ ಆರೋಪ ಪ್ರತ್ಯಾರೋಪ ಬರುತಿದ್ದವು. ಅಲ್ಲದೆ ಇಳಿ ವಯಸ್ಸಿನ ಮಹಿಳೆಯೊಬ್ಬರು ಸುಳ್ಳು ಹೇಳಿದ್ದೇನೆ ಎಂಬುದನ್ನು ಆಕೆಯೇ ಒಪ್ಪಿಕೊಂಡಿರುವುದು ಮಾಧ್ಯಮದಲ್ಲಿ ನೋಡಿದ್ದೇವೆ. ಇದಕ್ಕೆಲ್ಲ ಯಾರೂ ಕಾರಣ, ಈ ಚಿತ್ರಕತೆ ಬರೆದವರ್‍ಯಾರು, ನಿರ್ಮಾಪಕ ಯಾರು ತಿಳಿಯುತ್ತಿಲ್ಲ ಎಂದರು.

ನಾವು ಧರ್ಮಸ್ಥಳದ ಮಂಜುನಾಥನಲ್ಲಿ ಯಾರಿಗೂ ಇಂತಹ ತೊಂದರೆಯಾಗಬಾರದು ಎಂಬ ವಾತಾವರಣ ಸೃಷ್ಠಿಸಬೇಕೆಂದು ಕೇಳಿಕೊಳ್ಳುತ್ತೇವೆ. ಜತೆಗೆ ರಾಜಕಾರಣಿಗಳ ಹೇಳಿಕೆಗೆ ನಾವು ಪ್ರತಿಕ್ರಿಯಿಸುವುದಿಲ್ಲ. ಅವರು ವೈಯಕ್ತಿಕ ಲಾಭಕ್ಕೆ ಅವರವರ ಪಕ್ಷದ ಪರವಾಗಿ ಹೇಳುತ್ತಾರೆ. ಆದರೆ ನಾವು ಸಾಮಾಜಿಕ ಬದ್ಧತೆ ಕಳಕಳಿ ಇರುವವರು, ಜವಾಬ್ದಾರಿಯಿಂದ ಮಾತನಾಡಬೇಕು. ಈಗಾಗಲೇ ತನಿಖೆ ನಡೆಯುತಿದ್ದು ಇದರ ಹಿಂದೆ ಯಾರಿದ್ದಾರೆ ಏನು ಕಾರಣ ಎಂಬುದನ್ನು ತನಿಖಾ ತಂಡ ಸಾರ್ವಜನಿಕವಾಗಿ ತೆರೆದಿಡಲಿದೆ. ಅಲ್ಲದೆ ಕ್ರಿಸ್ತಪೂರ್ವದಲ್ಲೆ ನಮ್ಮ ಮೇಲೆ ದಾಳಿಗಳು ನಡೆದು ನಮ್ಮ ಸಂಸ್ಕಾರ, ಸಂಸ್ಕೃತಿ ನಾಶಕ್ಕೆ ಮುಂದಾದರೂ ಸಹ ಏನು ಮಾಡಲು ಸಾಧ್ಯವಾಗಲಿಲ್ಲ. ಕರ್ನಾಟಕದ ಜನತೆ ವಿಷಾಲ ಹೃದಯದವರು. ಪ್ರಥಮ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟ ವಿಶ್ವ ಮಾನವ ಕುವೆಂಪುರವರ ಸಂದೇಶದಂತೆ "ಸಿಲುಕದಿರು ಮತವೆಂಬ ಮೋಹ ಅಜ್ಞಾನಕ್ಕೆ ದುಡಿಯಿರಿ ಲೋಕದ ಹಿತಕ್ಕೆ. ಆ ಮತದ ಈ ಮತದ ಸಹವಾಸ ಸಾಕಿನ್ನು ಸೇರಿರಿ ಮನುಜ ಮತಕ್ಕೆ. ದುಡಿಯಿರಿ ವಿಶ್ವಪಥಕೆ. ನಮಗೆ ಧರ್ಮದ ಸೋಂಕು ಬೇಡ. ನಾವೆಲ್ಲರೂ ಭಾರತೀಯರು "ಎಂಬುದನ್ನು ಅರಿತು ಮುನ್ನಡೆಯಬೇಕು ಎಂದರು.

ಜಯ ಕರ್ನಾಟಕ ಸಂಘಟ ರಾಜ್ಯ ಕಾರ್ಯಾಧ್ಯಕ್ಷ ಪ್ರಕಾಶ್ ರೈ, ಹಿರಿಯ ಉಪಾಧ್ಯಕ್ಷ ಮುನಿಸ್ವಾಮಣ್ಣ, ಉಪಾಧ್ಯಕ್ಷ ಹರೀಶ್, ಪ್ರಧಾನ ಕಾರ್ಯದರ್ಶಿ ಗಗನರಾಜ್, ಸಂಘಟನಾ ಕಾರ್ಯದರ್ಶಿ ಅಂಬರೀಶ್, ಮಂಜುಳಾ, ಜಿಲ್ಲಾಧ್ಯಕ್ಷ ಎಂ.ಕೆ.ಆರ್. ಸೋಮೇಶ್, ಉಪಾಧ್ಯಕ್ಷ ಶ್ರೇಯಸ್, ತಾಲೂಕು ಅಧ್ಯಕ್ಷ ಎಸ್.ಎಂ.ರಾಜು. ಕಾರ್ಯಾಧ್ಯಕ್ಷ ಲಕ್ಷ್ಮಣ್, ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಸೇರಿದಂತೆ ಇತರರಿದ್ದರು.

-------

ಫೋಟೋ:

ಧರ್ಮಸ್ಥಳದ ಮೇಲಿನ ಅಪಪ್ರಚಾರದ ವಿರುದ್ಧ ಜಯ ಕರ್ನಾಟಕ ಸಂಘಟನೆ ಬೆಂಗಳೂರಿನಿಂದ ಧರ್ಮಸ್ಥಳದವರೆಗೆ ಕಾರುಗಳ ರ್‍ಯಾಲಿ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ಜಯ ಕರ್ನಾಟಕ ಸಂಘಟನೆ ರಾಜ್ಯಾಧ್ಯಕ್ಷ ಬಿ.ಎನ್.ಜಗದೀಶ್.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮೆಕ್ಕೆಜೋಳ ಖರೀದಿಯ ಮಿತಿ 50 ಕ್ವಿಂಟಲ್‌ಗೇರಿಕೆ
ಥಾಯ್ಲೆಂಡ್‌ನಿಂದ ರಾಜ್ಯಕ್ಕೆ ಹೆಚ್ಚು ಹೈಡ್ರೋ ಗಾಂಜಾ!