ಡಂಬಳ: ಹೋಬಳಿಯ ಹಿರೇವಡ್ಡಟ್ಟಿ ಗ್ರಾಮದಲ್ಲಿ ನಿರಂಜನ ಜ್ಯೋತಿ ಮೃತ್ಯುಂಜಯ ಮಹಾಸ್ವಾಮಿಗಳಗಳ ಜಯಂತ್ಯುತ್ಸವ ಹಾಗೂ ಆಧ್ಯಾತ್ಮಿಕ ಪ್ರವಚನ ನ. 10ರಿಂದ 17ರ ವರೆಗೆ ಪ್ರತಿ ದಿನ ಸಂಜೆ 7 ಗಂಟೆಯಿಂದ 8ರ ವರೆಗೆ ಜಗದ್ಗುರು ಅನ್ನದಾನೀಶ್ವರ ವಿದ್ಯಾ ಸಂಸ್ಥೆಯ ಕೆ.ಕೆ. ನಂದಿಕೋಲ ಪ್ರೌಢಶಾಲಾ ಆವರಣದಲ್ಲಿ ಅಭಿನವ ಮೃತ್ಯುಂಜಯ ಮಹಾಸ್ವಾಮಿಗಳಿಂದ ಜರುಗುವುದು.
ನ.10ರಂದು ನಡೆಯುವ ಪ್ರವಚನ ಪ್ರಾರಂಭದ ಸಾನ್ನಿಧ್ಯ ಹಾಗೂ ಉದ್ಘಾಟನೆಯನ್ನು ನಾಡೋಜ ಜಗದ್ಗುರು ಡಾ.ಅನ್ನದಾನೇಶ್ವರ ಮಹಾಸ್ವಾಮೀಜಿ ನೆರವೇರಿಸುವರು.ಹಿರೇವಡ್ಡಟ್ಟಿ ಗ್ರಾಮದ ಅಭಿನವ ಮೃತ್ಯುಂಜಯ ಮಹಾಸ್ವಾಮಿಗಳು ಪ್ರವಚನ ಮಾಡುವರು, ಹಿರೇವಡ್ಡಟ್ಟಿಯ ವೀರೇಶ್ವರ ಶಿವಾಚಾರ್ಯ ಶ್ರೀಗಳು ಸಮ್ಮುಖ ವಹಿಸುವರು.
ಗದಗ ಆಧ್ಯಾತ್ಮ ವಿದ್ಯಾಶ್ರಮದ ಶಿವಶರಣೆ ಡಾ.ನೀಲಮ್ಮ ತಾಯಿ ನೇತೃತ್ವ ವಹಿಸುವರು, ಮುಖ್ಯ ಅತಿಥಿಗಳಾಗಿ ಡಾ. ಎ.ಸಿ. ಚಾಕಲಬ್ಬಿ, ಡಾ. ಉಮೇಶ ಪುರದ, ಗೌಸುಸಾಬ್ ದೊಟಿಹಾಳ, ಮಹೇಶ ನರಿಬೋಳ, ತೋಟೆಂದ್ರಕುಮಾರ ಕರಡಕರ್, ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷ, ಸದಸ್ಯರು ಆಗಮಿಸಲಿದ್ದಾರೆ.ನ.16ರಂದು ನಡೆಯುವ ಉಡಿ ತುಂಬುವ ಕಾರ್ಯಕ್ರಮದ ಸಾನ್ನಿಧ್ಯ ಪ್ರಭುಶಾಂತ ಶ್ರೀಗಳು ವಹಿಸುವರು, ಅತಿಥಿಗಳಾಗಿ ಉದ್ಯಮಿ ಆನಂದಸ್ವಾಮಿ ಗಡ್ಡದೇವರಮಠ, ಟಿ.ಈಶ್ವರ, ಸಂಯುಕ್ತ ಬಂಡಿ, ಶಶಿಕಲಾ ಪಾಟೀಲ್, ಶೋಭಾ ಮೇಟಿ, ಗ್ರಾಪಂ ಅಧ್ಯಕ್ಷೆ ನಾಗವ್ವ.ವೆಂ.ಬಳ್ಳಾರಿ, ಕೆ.ವಿ. ಹಂಚಿನಾಳ, ನಾಗೇಶ ಹುಬ್ಬಳ್ಳಿ, ಹೇಮಂತಗೌಡ ಪಾಟೀಲ್, ಆನಂದಗೌಡ ಪಾಟೀಲ್, ಡಿ.ಡಿ.ಮೋರನಾಳ, ಹೇಮಗಿರಿಶ ಹಾವಿನಾಳ, ರವಿ ಕರಿಗಾರ, ರಾಜು ಕುರಡಗಿ, ಸದಾಶಿವಯ್ಯ ಮದರಿಮಠ, ಎಸ್.ಎಚ್. ಶಿವನಗೌಡರ, ಕಿರಣ ಪ್ರಕಾಶ ಬೂಮಾ, ಶರಣಪ್ಪ ಸಾಸನೂರ, ಸುರೇಶ ನಾಯ್ಕರ, ಸೋಮರಡ್ಡಿ ನಡೂರ, ಮದರಸಾಬ್ ಸಿಂಗನಮಲ್ಲಿ ಆಗಮಿಸುವರು.
ನ.17ರಂದು ಜಯಂತ್ಯುತ್ಸವ ಹಾಗೂ ಪ್ರವಚನ ಮುಕ್ತಾಯದ ಸಮಾರಂಭದ ಸಾನ್ನಿಧ್ಯ ಹುಕ್ಕೇರಿಮಠದ ಸದಾಶಿವ ಮಹಾಸ್ವಾಮಿ, ಹುಬ್ಬಳ್ಳಿಯ ಸದ್ಗುರು ಅಭಿನವ ಸಿದ್ಧಾರೂಢ ಮಹಾಸ್ವಾಮಿಗಳು ವಹಿಸುವರು, ಮಹೇಶ್ವರ ಶಿವಾಚಾರ್ಯ ಶ್ರೀ ಹಾಗೂ ಚನ್ನಬಸವ ದೇವರು ಮಲ್ಲಿಕಾರ್ಜುನಸ್ವಾಮಿ ಸಮ್ಮುಖ ವಹಿಸುವರು, ರೋಣ ಶಾಸಕ ಜಿ.ಎಸ್.ಪಾಟೀಲ್ ಅಧ್ಯಕ್ಷತೆ ವಹಿಸುವರು, ಮುಖ್ಯ ಅತಿಥಿಗಳಾಗಿ ಸಂಸದ ಬಸವರಾಜ ಬೊಮ್ಮಾಯಿ, ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ.ಪಾಟೀಲ್, ನವಲಗುಂದ ಶಾಸಕ ಎನ್.ಎಚ್. ಕೊನರಡ್ಡಿ, ಮಾಜಿ ಸಚಿವ ಕಳಕಪ್ಪ ಬಂಡಿ, ಶಾಸಕ ಚಂದ್ರ ಲಮಾಣಿ, ವಿಪ್ ಸದಸ್ಯ ಎಸ್.ವಿ. ಸಂಕನೂರ, ಕೆಸಿಸಿ ಬ್ಯಾಂಕ್ ಅಧ್ಯಕ್ಷ ಶಿವಕುಮಾರಗೌಡ ಪಾಟೀಲ್, ಮಾಜಿ ಜಿಪಂ ಅಧ್ಯಕ್ಷ ವಾಸಣ್ಣ ಕುರಡಗಿ, ಉದ್ದಿಮೇದಾರರು ಮಂಜುನಾಥ ಹರ್ಲಾಪುರ, ರಾಜೇಶ ಹರ್ಲಾಪುರ, ಹಿರೇವಡ್ಡಟ್ಟಿ ಮಣಕವಾಡ ಮತ್ತು ಸುತ್ತಮುತ್ತಲಿನ ಗ್ರಾಮಗಳ ಹಿರಿಯರು, ಅಪಾರ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಳ್ಳಲಿದ್ದಾರೆ.ನ. 17ರಂದು ಮಹನ್ಯಾ ಗುರು ಪಾಟೀಲ್ ಅವರಿಂದ ಸಂಗೀತ ಸಂಜೆ ನಡೆಯಲಿದೆ ಎಂದು ಜಯಂತ್ಯುತ್ಸವ ಹಾಗೂ ಆಧ್ಯಾತ್ಮಿಕ ಪ್ರವಚನ ಸಮಿತಿ ಪತ್ರಿಕಾ ಪ್ರಕಟಣೆಗೆ ತಿಳಿಸಿದ್ದಾರೆ.