ಕನ್ನಡಪ್ರಭವಾರ್ತೆ ಚಾಮರಾಜನಗರ
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ೮ ವರ್ಷಗಳಿಂದ ಜೆಡಿಎಸ್ ಪಕ್ಷದಲ್ಲಿ ನಿಷ್ಠಾವಂತ ಕಾರ್ಯಕರ್ತನಾಗಿ, ಪಕ್ಷ ವಹಿಸಿದ ಜವಾಬ್ದಾರಿಯನ್ನು ನಿಷ್ಠೆಯಿಂದ ನಿರ್ವಹಿಸಿದ್ದೇನೆ ಎಂದರು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಚಾಮರಾಜನಗರ ಕ್ಷೇತ್ರದಿಂದ ಕೊನೆಯವರೆಗೂ ನಿನಗೆ ಟಿಕೆಟ್ ಕೊಡುತ್ತೇನೆ ಎಂದು ಹೇಳಿ ಕೊನೆಗಳಿಗೆಯಲ್ಲಿ ಬಿಜೆಪಿಯಿಂದ ಆಗ ತಾನೇ ಬಂದ ಆಲೂರು ಮಲ್ಲು ಅವರಿಗೆ ಟಿಕೆಟ್ ನೀಡಿ ನನಗೆ ನಿರಾಶೆ ಮಾಡಿದರು. ನನಗೆ ಟಿಕೆಟ್ ತಪ್ಪಲು ಜಿಲ್ಲಾಧ್ಯಕ್ಷ ಎಂ.ಆರ್.ಮಂಜುನಾಥ್ ಅವರೇ ಕಾರಣ ಎಂದರು.
ಬಿಎಸ್ಪಿಯಲ್ಲಿದ್ದಾಗ ಕೊಳ್ಳೇಗಾಲದಲ್ಲಿ ಎನ್.ಮಹೇಶ್ ಅವರ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದೇ, ಜೆಡಿಎಸ್ನ ಸಂಘಟನೆಗೆ ಹೆಚ್ಚು ಒತ್ತು ನೀಡಿದ್ದೆ, ಆದರೆ ಪಕ್ಷ ನನಗೆ ನಿರಾಶೆ ಮಾಡಿತು. ಜಿಲ್ಲೆಯಲ್ಲಿ ಹನೂರು ಬಿಟ್ಟರೆ ಜೆಡಿಎಸ್ಗೆ ನೆಲೆಯಿಲ್ಲ. ಆದ್ದರಿಂದ ಜನಪರವಾದ ಗ್ಯಾರಂಟಿಗಳನ್ನು ನೀಡಿ ಉತ್ತಮ ಸಿಎಂ ಆಗಿರುವ ಸಿದ್ದರಾಮಯ್ಯನವರ ನೇತೃತ್ವದಲ್ಲಿ ಯಾವುದೆ ಷರತ್ತು ಇಲ್ಲದೇ ಕಾಂಗ್ರೆಸ್ ಸೇರಬೇಕೆಂದು ತೀರ್ಮಾನಿಸಿದ್ದೇನೆ ಎಂದರು. ರಾಜ್ಯದಲ್ಲಿ ೪೦ ಲಕ್ಷ ದಷ್ಟಿರುವ ಉಪ್ಪಾರರನ್ನು ಗುರುತಿಸಿರುವುದೇ ಕಾಂಗ್ರೆಸ್ ಆದ್ದರಿಂದ ನನ್ನ ನೂರಕ್ಕೂ ಹೆಚ್ಚು ಬೆಂಬಲಿಗರೊಂದಿಗೆ ಕಾಂಗ್ರೆಸ್ ಸೇರುವುದಾಗಿ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಧನಂಜಯ, ವರದರಾಜು, ಪುಟ್ಟಸ್ವಾಮಿ, ಸಿದ್ದರಾಜು, ಮಹೇಶ್, ಶ್ರೀಕಂಠು ಇದ್ದರು.