ಕನ್ನಡಪ್ರಭ ವಾರ್ತೆ ಮಂಡ್ಯ
ಪ್ರೀತಮ್ಗೌಡ ಅವರು ಪಾಂಡವಪುರ ತಾಲೂಕಿನ ಈರೇಗೌಡನಕೊಪ್ಪಲು ಗ್ರಾಮದ ಇ.ವಿ.ಶಿವಸ್ವಾಮಿ ಮತ್ತು ಜಿ.ಎಸ್.ಭವ್ಯಶ್ರೀ ದಂಪತಿ ಪುತ್ರ. ಪ್ರೌಢಶಾಲಾ ಶಿಕ್ಷಣವನ್ನು ಕೆರೆತೊಣ್ಣೂರಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಮುಗಿಸಿ ಎಸೆಸ್ಸೆಲ್ಸಿಯಲ್ಲಿ ಶೇ.೮೬ ರಷ್ಟು ಮತ್ತು ಪಿಯುಸಿಯಲ್ಲಿ ಶೇ.೮೮ರಷ್ಟು ಅಂಕ ಗಳಿಸಿದ್ದಾರೆ.
ಎಸ್ಬಿಇಟಿ ಅಧ್ಯಕ್ಷ ಡಾ.ಬಿ.ಶಿವಲಿಂಗಯ್ಯ ಅವರು ಪ್ರೀತಮ್ಗೌಡ ಅವರನ್ನು ಅಭಿನಂದಿಸಿ ಮಾತನಾಡಿ, ಮಾಂಡವ್ಯ ಎಕ್ಸಲೆನ್ಸ್ ಪಿಯು ಕಾಲೇಜಿನಲ್ಲಿ ೨೦೨೫-೨೬ನೇ ಸಾಲಿನಲ್ಲಿ ಓದಿದ ವಿದ್ಯಾರ್ಥಿ ಪ್ರೀತಮ್ಗೌಡ ಅವರು ಜೆಇಇನಲ್ಲಿ ಉತ್ತಮ ಅಂಕ ಗಳಿಸಿ ಮದ್ರಾಸ್ನಲ್ಲಿರುವ ಐಐಟಿ ಕಾಲೇಜಿನಲ್ಲಿ ಪ್ರವೇಶಾತಿ ಪಡೆದು ಕಾಲೇಜು ಹಾಗೂ ಜಿಲ್ಲೆಗೆ ಹೆಸರು ತಂದುಕೊಟ್ಟಿದ್ದಾರೆ ಎಂದು ಪ್ರಶಂಸಿಸಿದರು.ಪ್ರೀತಮ್ ಗೌಡ ಅವರು ಮುಂದಿನ ದಿನಗಳಲ್ಲಿ ಹೆಚ್ಚಿನ ವಿದ್ಯಾಭ್ಯಾಸ ಮಾಡಿ ಉನ್ನತ ಶಿಕ್ಷಣಕ್ಕಾಗಿ ಹೊರದೇಶಕ್ಕೆ ಹೋಗಿ ಅಲ್ಲಿಯ ತಾಂತ್ರಿಕ ವಿಷಯಗಳನ್ನು ತಿಳಿದುಕೊಂಡು ಭಾರತ ದೇಶಕ್ಕೆ ಬಂದು ಒಳ್ಳೆಯ ಇಂಜಿನಿಯರ್ ಆಗಿ ಸಂಶೋಧನಾ ಕ್ಷೇತ್ರದಲ್ಲಿ ಬೆಳವಣಿಗೆ ಸಾಧಿಸಲಿ ಎಂದು ಆಶಯ ವ್ಯಕ್ತಪಡಿಸಿದರು.