ಯುನೈಟೆಡ್ ಕ್ರಿಶ್ಚಿಯನ್ ಪೋರಂನಿಂದ ಕ್ರಿಸ್ಮಸ್ ರ್ಯಾಲಿ- 2025 ಕಾರ್ಯಕ್ರಮದಲ್ಲಿ ಕೇಕ್ ಕತ್ತರಿಸಿ ಸಂಭ್ರಮಾಚರಣೆ
ನಗರದ ಆಜಾದ್ ಪಾರ್ಕ್ ವೃತ್ತದಲ್ಲಿ ಆಲ್ ಕರ್ನಾಟಕ ಯುನೈಟೆಡ್ ಕ್ರಿಶ್ಚಿಯನ್ ಪೋರಂ ಫಾರ್ ಹ್ಯೂಮನ್ ರೈಟ್ಸ್ ಚಿಕ್ಕಮಗಳೂರು ವಲಯದಿಂದ ಆಯೋಜಿಸಿದ್ಧ ಕ್ರಿಸ್ಮಸ್ ರ್ಯಾಲಿ- 2025 ಕಾರ್ಯಕ್ರಮದಲ್ಲಿ ಕೇಕ್ ಕತ್ತರಿಸಿ ಅವರು ಮಾತನಾಡಿದರು.
ಮಾನವರಿಗೆ ಪಾಪದಿಂದ ವಿಮುಕ್ತಿಗೊಳಿಸಿ, ದೇವರ ಸ್ವರ್ಗಕ್ಕೆ ತೆರಳಲು ಯೇಸು ಕಿಸ್ತರ ಕೊಡುಗೆ ಅಪಾರ. ಮನುಷ್ಯ ಮನುಷ್ಯನ ನಡುವೆ ಅನೋನ್ಯತೆ, ಸಂತೋಷದಿಂದ ಬದುಕಲು, ಶಾಂತಿ, ಸಮಾಧಾನ ಭಿತ್ತಲು ಜಗತ್ತಿಗೆ ದೇವಮಾನವನಂತೆ ಅಪ್ಪಳಿಸಿದವರು ಯೇಸುಪ್ರಭುಗಳು ಎಂದು ಹೇಳಿದರು.ಯೇಸು ಕಿಸ್ತರು ಸಾಕಷ್ಟು ನೋವುಗಳ ನಡುವೆ ಮನುಷ್ಯನಿಗೆ ಸಾತ್ವಿಕ ಜೀವನಕ್ಕೆ ಮಾರ್ಗ ತೋರಿದವರು. ಅಲ್ಲದೇ ಸಮಾಧಿಯಿಂದ ಪುನರ್ಜೀವಿಸಿ ನಿಂತ ಯೇಸು ದೇವನಿಗೆ ಮಾನವ ಸಂಕುಲವು ಚಿರಋಣಿಯಾಗಬೇಕು. ಕ್ರಿಸ್ಮಸ್ ಇಲ್ಲದಿದ್ದರೆ, ಯೇಸುವಿಲ್ಲದಂತೆ. ಹೀಗಾಗಿ ಈ ಹಬ್ಬವನ್ನು ಸಂತೋಷದಿಂದ ಆಚರಿಸಬೇಕು ಎಂದರು.
ಧರ್ಮಗುರು ಶಾಂತರಾಜ್ ಮಾತನಾಡಿ, ಕಿಸ್ಮಸ್ ಯಾವುದೇ ಒಂದು ಜಾತಿ, ಊರಿಗೆ ಸೇರಿದ ಹಬ್ಬವಲ್ಲ, ಜಾಗತಿಕ ಹಬ್ಬ. ಜಗತ್ತಿನ ನಾನಾ ಮೂಲೆಗಳಲ್ಲಿ ಈ ಹಬ್ಬವನ್ನು ಸಂತೋಷದಿಂದ ಆಚರಿಸುತ್ತಾರೆ. ಈ ಸಂಭ್ರಮ ಕೇವಲ ಕೇಕ್ ಕತ್ತರಿಸುವುದಲ್ಲ. ಪ್ರೀತಿ, ಶಾಂತಿ ಸಾರುವ ಕಿಸ್ಮಸ್ ಒಂದು ಬೆಳಕಿನ ಹಬ್ಬವೆಂದು ಬಣ್ಣಿಸಿದರು.
ಮಾನವರು ದೇವರ ಸಂದೇಶ ಪಾಲಿಸಲು ಮತ್ತು ಪಾಪ, ಅಪರಾಧ ಹಾಗೂ ದ್ರೋಹವನ್ನು ಹೊರಹಾಕಲು ಮೊದಲು ಯೇಸುವನ್ನು ನಂಬಬೇಕು. ನಿತ್ಯಜೀವನದಲ್ಲಿ ಯೇಸುವಿನ ಸಂದೇಶವು ಬದುಕಿನ ಮಾರ್ಗಕ್ಕೆ ಸಹಾಯವಾಗುವ ಜೊತೆಗೆ ಯೇಸುವಿನ ಮಹಿಮೆ ಎಲ್ಲರಲ್ಲೂ ಸುಖ, ಶಾಂತಿ ನೆಲೆಸಲು ಕಾರಣವಾಗಲಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಹ್ಯೂಮನ್ ರೈಟ್ಸ್ನ ಕಾರ್ಯಾಧ್ಯಕ್ಷ ಫಾದರ್ ರಾಯಪ್ಪ, ಖಜಾಂಚಿ ಜೇಮ್ಸ್ ಡಿಸೋಜಾ, ಸಹ ಕಾರ್ಯದರ್ಶಿ ಜೇಮಿನಿ ಜಾರ್ಜ್, ನಿರ್ದೇಶಕ ಶ್ರೀಧರ್ ಸ್ವಾಮಿಯಲ್, ಸಂಜು ಉಪಸ್ಥಿತರಿದ್ದರು.
ಚಿಕ್ಕಮಗಳೂರಿನ ಆಜಾದ್ ಪಾರ್ಕ್ ವೃತ್ತದಲ್ಲಿ ಆಯೋಜಿಸಿದ್ಧ ಕ್ರಿಸ್ಮಸ್ ರ್ಯಾಲಿ - 2025 ಕಾರ್ಯಕ್ರಮವನ್ನು ಡಾ. ಅಂತೋಣಿಸ್ವಾಮಿ ಕೇಕ್ ಕತ್ತರಿಸುವ ಮೂಲಕ ಉದ್ಘಾಟಿಸಿದರು.