ಚುನಾವಣೆಯಲ್ಲಿ ಬಹುಮತದಿಂದ ಆನಂದ್ ಗೆಲುವು: ಚುನಾವಣಾಧಿಕಾರಿ ನಟರಾಜ್ ಘೋಷಣೆ
ಕೆಲವು ವರ್ಷಗಳ ಹಿಂದೆ ದೇಶದ ಯಾವುದೇ ಗ್ರಾಮ ಪಂಚಾಯ್ತಿ ಸದಸ್ಯರಿಗೆ ಗೌರವ ಮತ್ತು ಬೆಲೆ ಇರಲಿಲ್ಲ. ಆದರೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಗ್ರಾಮ ಪಂಚಾಯ್ತಿಯಲ್ಲಿ ಜಾರಿ ಮಾಡಿದ ಮಹಾತ್ಮಗಾಂಧಿ ಗ್ರಾಮೀಣ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಿಂದ ಗ್ರಾಮದ ಪ್ರತಿ ಕುಟುಂಬದ ವ್ಯಕ್ತಿಗೆ ವರ್ಷಕ್ಕೆ 100 ದಿನಗಳ ಉದ್ಯೋಗ ದ ಕಾನೂನು ಗ್ರಾಮೀಣರು, ರೈತರು ಹಾಗೂ ಗ್ರಾಪಂ ಸದಸ್ಯರನ್ನು ಗೌರವಯುತವಾಗಿ ಕಾಣಲು ಕಾರಣವಾಯಿತು. ಸಾಕಷ್ಟು ಸವಾಲು ಗಳಿರುವ ಈ ಗ್ರಾ.ಪಂ.ವ್ಯಾಪ್ತಿಯ ಹಳ್ಳಿಗಳಿಗೆ ನೂತನ ಅಧ್ಯಕ್ಷರು ಭೇಟಿ ನೀಡಿ ಸಮಸ್ಯೆ ಬಗೆಹರಿಸುವಂತೆ ಕೋರಿದರು.ಸನ್ಮಾನ ಸ್ವೀಕರಿಸಿ ಮಾತನಾಡಿದ ಅಧ್ಯಕ್ಷ ಜಿ.ಎಲ್.ಆನಂದ್ , ಕಳೆದ 15 ವರ್ಷಗಳಿಂದಲೂ ಗ್ರಾ.ಪಂ. ಸದಸ್ಯನಾಗಿರುವ ನನಗೆ ಅಧಿಕಾರದ ವ್ಯಾಮೋಹ ಇರಲಿಲ್ಲ. ಆದರೆ ಇಂದು ನನಗೆ ಅದಾಗಿಯೇ ಒದಗಿ ಬಂದಿದೆ. ಕ್ಷೇತ್ರದ ಶಾಸಕರು, ಗ್ರಾ.ಪಂ ನ ಎಲ್ಲಾ ಸದಸ್ಯರು, ಸಿಬ್ಬಂದಿ ಸಹಕಾರ ಪಡೆದು ಗ್ರಾಮಗಳ ಅಭಿವೃದ್ದಿಗೆ ಬದ್ಧನಾಗಿದ್ದು, ಮುಂದಿನ ದಿನಗಳಲ್ಲಿ ಪಂಚಾಯ್ತಿ ವ್ಯಾಪ್ತಿಯ ಎಲ್ಲಾ ಗ್ರಾಮಗಳಿಗೆ ಭೇಟಿ ನೀಡಿ ಕಳೆದ ಸಾಲಿನಲ್ಲಿ ಗ್ರಾಪಂ ಪಡೆದ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಪೂರಕವಾಗಿ ಉತ್ತಮ ಆಡಳಿತ ನೀಡುವ ಮೂಲಕ ಹಗಲು ರಾತ್ರಿ ದುಡಿಯುತ್ತೇನೆ. ಮಾದರಿ ಗ್ರಾಪಂ. ಮಾಡಲು ನಿಮ್ಮೆಲ್ಲರ ಸಹಕಾರ ಅಗತ್ಯ ಎಂದರು.ನೂತನ ಅಧ್ಯಕ್ಷರಿಗೆ ತೆಲುಗುಗೌಡ ಸಮಾಜ, ಗ್ರಾಮಸ್ಥರು ಹಾಗೂ ಸದಸ್ಯರು ಅಭಿನಂದಿಸಿದರು. ಪಿಡಿಒ ದಯಾನಂದ್, ಉಪಾಧ್ಯಕ್ಷೆ ನೀಲಮ್ಮ, ಸದಸ್ಯರಾದ ಶಾಂತಮ್ಮ, ಕುಮಾರಸ್ವಾಮಿ, ಗೌರಮ್ಮ, ವೆಂಕಟೇಶ್, ಅನ್ನಪೂರ್ಣ, ಗೋವಿಂದಪ್ಪ, ಬಸಮ್ಮ, ಹಾಗೂ ತೆಲುಗುಗೌಡ ಸಮಾಜದ ಅಧ್ಯಕ್ಷ ಲೋಕೇಶ್, ರಾಜು, ಬೀರೂರು ಪುರಸಭಾ ಸದಸ್ಯ ಶಶಿಧರ್, ಬಿ.ಜಿ.ಬಸಣ್ಣ, ಮೂರ್ತಣ್ಣ, ನರಸಿಂಹಮೂರ್ತಿ, ಸೇರಿದಂತೆ ಮತ್ತಿತರು ನೂತನ ಅಧ್ಯಕ್ಷರನ್ನು ಸನ್ಮಾನಿಸಿ ಗೌರವಿಸಿ ಸಿಹಿ ಹಂಚಿದರು.
12 ಬೀರೂರು 1ಬೀರೂರು ಸಮೀಪದ ಜೋಡಿತಿಮ್ಮಾಪುರ ಗ್ರಾ.ಪಂ.ಅಧ್ಯಕ್ಷರ ಚುನಾವಣೆಯಲ್ಲಿ ಗಾಳಿಹಳ್ಳಿ ಆನಂದ್ ಅತಿಹೆಚ್ಚು ಮತ ಪಡೆಯುವ ಮೂಲಕ ನೂತನ ಅಧ್ಯಕ್ಷರಾಗಿ ಆಯ್ಕೆಯಾದರು. ತೆಲುಗುಗೌಡ ಸಮಾಜದ ಅಧ್ಯಕ್ಷ ಲೋಕೇಶ್, ರಾಜು, ಬೀರೂರು ಪುರಸಭಾ ಸದಸ್ಯ ಶಶಿಧರ್, ಬಿ.ಜಿ.ಬಸಣ್ಣ, ಮೂರ್ತಣ್ಣ, ನರಸಿಂಹಮೂರ್ತಿ ಇದ್ದರು.