ಸಹಕಾರ ಆಂದೋಲನದ ಏಳ್ಗೆಗೆ ಕೈಜೋಡಿಸಿ: ಮಂಜನಗೌಡ ಪಾಟೀಲ

KannadaprabhaNewsNetwork |  
Published : Sep 16, 2025, 12:04 AM IST
ಹಾವೇರಿಯ ಹೆಸ್ಕಾಂ ಆವರಣದಲ್ಲಿರುವ ವಿದ್ಯುತ್ ಪ್ರಸರಣ ನಿಗಮ ಮತ್ತು ಹುಬ್ಬಳ್ಳಿ ಸರಬರಾಜು ಕಂಪನಿ ಸಹಕಾರ ಸಂಘದ 47ನೇ ಸರ್ವಸದಸ್ಯರ ಮಹಾಸಭೆಯನ್ನು ಉದ್ಘಾಟಿಸಲಾಯಿತು. | Kannada Prabha

ಸಾರಾಂಶ

ಕವಿಪ್ರನಿ ನೌಕರರ ಸಂಘದ ನಿಕಟಪೂರ್ವ ಕಾರ್ಯಾಧ್ಯಕ್ಷ ವಿಜಯಕುಮಾರ ಮುದಕಣ್ಣನವರ ಮಾತನಾಡಿ, ಐದು ದಶಕಗಳಿಂದಲೂ ಕೆಲಸ ನಿರ್ವಹಿಸುತ್ತಿರುವ ನಮ್ಮ ಸಹಕಾರಿ ಪತ್ತಿನ ಸಂಘದ ಎಂದೂ ನಷ್ಟ ಅನುಭವಿಸಿಲ್ಲ. ಇಂತಹ ಸಂಸ್ಥೆ ಕಟ್ಟಿದ ಹಿರಿಯರನ್ನು ಸ್ಮರಿಸಬೇಕು ಎಂದರು.

ಹಾವೇರಿ: ನೌಕರರ ಕಷ್ಟ- ಸುಖಗಳಿಗೆ ಸ್ಪಂದಿಸುವಂತೆ ಸಹಕಾರಿ ಸಂಘಗಳು ತಮ್ಮ ಲಾಭಾಂಶದ ಒಂದಿಷ್ಟು ಹಣವನ್ನು ಬಡ ಮಕ್ಕಳ ವಿದ್ಯಾಭ್ಯಾಸಕ್ಕೂ ವಿನಿಯೋಗಿಸುವಂತಾಗಬೇಕು. ಯಾವುದೇ ಚುನಾವಣೆ ಮುಗಿದ ನಂತರ ಪ್ರಜಾಪ್ರಭುತ್ವದ ರೀತಿಯಲ್ಲಿ ಸೋಲು- ಗೆಲುವಿನಾಚೆ ಸಹಕಾರಿ ಆಂದೋಲನದ ಏಳಿಗೆಗೆ ಕೈಜೋಡಿಸಬೇಕೆಂದು ಹಾವೇರಿ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ಅಧ್ಯಕ್ಷ ಮಂಜನಗೌಡ ಪಾಟೀಲ ತಿಳಿಸಿದರು.ನಗರದ ಹೆಸ್ಕಾಂ ಆವರಣದಲ್ಲಿರುವ ವಿದ್ಯುತ್ ಪ್ರಸರಣ ನಿಗಮ ಮತ್ತು ಹುಬ್ಬಳ್ಳಿ ಸರಬರಾಜು ಕಂಪನಿ ಸಹಕಾರ ಸಂಘದ 47ನೇ ಸರ್ವ ಸದಸ್ಯರ ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡಿದರು. ಕವಿಪ್ರನಿ ನೌಕರರ ಸಂಘದ ನಿಕಟಪೂರ್ವ ಕಾರ್ಯಾಧ್ಯಕ್ಷ ವಿಜಯಕುಮಾರ ಮುದಕಣ್ಣನವರ ಮಾತನಾಡಿ, ಐದು ದಶಕಗಳಿಂದಲೂ ಕೆಲಸ ನಿರ್ವಹಿಸುತ್ತಿರುವ ನಮ್ಮ ಸಹಕಾರಿ ಪತ್ತಿನ ಸಂಘದ ಎಂದೂ ನಷ್ಟ ಅನುಭವಿಸಿಲ್ಲ. ಇಂತಹ ಸಂಸ್ಥೆ ಕಟ್ಟಿದ ಹಿರಿಯರನ್ನು ಸ್ಮರಿಸಬೇಕು ಎಂದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿದ್ಯುತ್ ಪ್ರಸರಣ ನಿಗಮ ಮತ್ತು ಹುಬ್ಬಳ್ಳಿ ಸರಬರಾಜು ಕಂಪನಿ ಸಹಕಾರ ಸಂಘದ ಅಧ್ಯಕ್ಷ ಟಿ. ಸತೀಶ ಮಾತನಾಡಿ, ಎಲ್ಲ ಲಾಭ ನಷ್ಟಗಳಾಚೆ ನಮ್ಮ ಸಹಕಾರಿ ಪತ್ತು ಆಡಳಿತ ಮಂಡಳಿಯ ಸದಸ್ಯರ ಸಹಕಾರದೊಂದಿಗೆ ಒಳ್ಳೆಯ ಕೆಲಸ ಮಾಡುತ್ತಿದ್ದು, ಸಾಮಾಜಿಕ ಕಾಳಜಿಯೇ ನಮ್ಮ ಗುರಿಯಾಗಿದೆ ಎಂದರು.ಈ ಸಂದರ್ಭದಲ್ಲಿ ಎಸ್ಸೆಸ್ಸೆಲ್ಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವೈಷ್ಣವಿ ಘನಾತೆ, ಎಚ್. ಫತೇಮೊಹಮದ ಹಾಗೂ ಶ್ರೇಯಸ್ ಎಸ್.ಎಂ., ದ್ವಿತೀಯ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ಸಂಜನಾ ಯುತ್ತಿನಹಳ್ಳಿ, ಖುಜೆಸ್ತಾಆಲಿನ್ ನದಾಫ ಹಾಗೂ ಕುಮಾರ ಆರ್. ಹೊನ್ನಳ್ಳಿ ಅವರನ್ನು ಸನ್ಮಾನಿಸಲಾಯಿತು. ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾದ 18 ಎಸ್ಸೆಸ್ಸೆಲ್ಸಿ ಹಾಗೂ 8 ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ತಲಾ ₹5000 ಸಾವಿರ ನಗದು ನೀಡಿ ಸನ್ಮಾನಿಸಲಾಯಿತು.ಕಾರ್ಯಕ್ರಮದಲ್ಲಿ ಎಂ ಎಸ್. ಕುಮ್ಮೂರ, ಎಚ್. ಮೊಹಮದ್ ಅಮಾನುಲ್ಲಾ ಎ.ಕೆ. ಯಮನೂರ, ಸಿ.ಬಿ. ಹೊಸಮನಿ, ಶಿವಾನಂದ ಹಾದಿಮನಿ, ಎಚ್.ಎಸ್. ಬಸವರಾಜಯ್ಯ, ಎನ್.ಟಿ. ಹಾವೇರಿ, ಸಿ.ಎನ್. ಬಡ್ನಿ. ವಿ.ಎಸ್. ಮರಿಗೌಡ್ರ, ಎಂ.ಡಿ. ಕೊರವರ, ಎಂ.ಬಿ. ಸಣ್ಣಿಂಗಮ್ಮನವರ, ಕೆ.ಎನ್. ಅಗಡಿ, ಎಚ್.ಸಿ. ಮರಿದ್ಯಾಮಣ್ಣನವರ, ಹುಸೇನ್‌ಸಾಬ, ಪ್ರಭಾಕರ ಎಂ.ಎಸ್ ಹಾಗೂ ಆಡಳಿತ ಮಂಡಳಿಯ ಸದಸ್ಯರು ಇದ್ದರು. ಸಿ.ಎಂ. ದೊಡ್ಡಮನಿ ಪ್ರಾರ್ಥಿಸಿದರು. ಶಂಕರ ಕಾಳಶೆಟ್ಟಿ ಸ್ವಾಗತಿಸಿದರು. ಬಸವರಾಜ ಕೋಟಿ ನಿರೂಪಿಸಿದರು. ಎಂ.ಬಿ. ಮಿಶ್ರಿಕೋಟಿ ವಂದಿಸಿದರು.

PREV

Recommended Stories

ದ.ಕ.ದಲ್ಲಿ ಲಿಂಗತ್ವ ಅಲ್ಪಸಂಖ್ಯಾತರ ಸಮೀಕ್ಷೆಗೆ ಚಾಲನೆ
ಕದ್ರಿ ದೇವಸ್ಥಾನ ಪ್ರಾಂಗಣದಲ್ಲಿ ‘ಮುದ್ದು ಕೃಷ್ಣ’ ವೇಷ ಸ್ಪರ್ಧೆ