ಕನ್ನಡಪ್ರಭ ವಾರ್ತೆ ಬೀದರ್
ಬೀದರ್ ನಗರದ ಡಾ. ಪಟ್ಟದೇವರ ಪ್ರಸಾದ ನಿಲಯದಲ್ಲಿ ಭಾನುವಾರ ಮಧ್ಯಾಹ್ನ ಬಸವ ಸಂಸ್ಕೃತಿ ಅಭಿಯಾನದ ಪೂರ್ವಭಾವಿ ಸಭೆಯ ಸಾನಿಧ್ಯ ವಹಿಸಿ ಮಾತನಾಡಿ, 12ನೇ ಶತಮಾನದ ಬಸವಾದಿ ತತ್ವದ ಸಂದೇಶವು ಜಗತ್ತಿಗೆ ತಲುಪಬೇಕಾಗಿದೆ. ಈ ಅಭಿಯಾನವು ಇತಿಹಾಸದಲ್ಲಿ ಎಂದೆಂದಿಗೂ ಆಗದೆ ಇರದೆ ಹಿಂದೆ ಆಗಿಲ್ಲ ಭವಿಷ್ಯದಲ್ಲಿ ಆಗದೆ ಸೆಪ್ಟೆಂಬರ್ ನಲ್ಲಿ ನಡೆಯುವ ಬಸವ ಸಂಸ್ಕೃತಿ ಅಭಿಯಾನವು ಐತಿಹಾಸಿಕವಾಗಿ ನಡೆಯಬೇಕಾಗಿದೆ ಎಂದರು.
ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸುವುದರ ಜೊತೆಗೆ ಬಸವಭಕ್ತರು ಸಹಾಯ, ಸಹಕಾರ ತನು. ಮನ. ಧನದಿಂದ ಈಗಾಗಲೇ ಸಹಾಯ ಮತ್ತು ಸಹಕಾರ ಮಾಡಿರುತ್ತಾರೆ ಎಂದರು.ಸ್ವಾಗತ ಸಮಿತಿ ಅಧ್ಯಕ್ಷರಾಗಿ ಧನ್ನೂರ ಆಯ್ಕೆ: ಇದೇ ಸಂದರ್ಭದಲ್ಲಿ ಬಸವ ಸಂಸ್ಕೃತಿ ಅಭಿಯಾನದ ಸ್ವಾಗತ ಸಮಿತಿಯ ಅಧ್ಯಕ್ಷರನ್ನಾಗಿ ಅಪ್ಪಟ ಬಸವ ತತ್ವ ನಿಷ್ಠರಾದ ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾ ಅಧ್ಯಕ್ಷರಾದ ಬಸವರಾಜ ಧನ್ನೂರ್ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
12ನೇ ಶತಮಾನದ ಬಸವಾದಿ ಶರಣರ ಬಹು ಮೌಲ್ಯ ತತ್ವಗಳನ್ನು ಈ ಸಮಾವೇಶದಿಂದ ಅರಿತುಕೊಳ್ಳಬಹುದು ಅದರಂತೆ ಜಿಲ್ಲೆಯ ಎಲ್ಲಾ ಹಳ್ಳಿಗಳಿಂದ ಬಸವಾದಿ ಭಕ್ತರು ಸಮಾವೇಶಕ್ಕೆ ಆಗಮಿಸಬೇಕಾಗಿ ಕೋರಿದರು.
ಗುರುಬಸವ ಪಟ್ಟದೇವರು ನೇತೃತ್ವ ವಹಿಸಿ ಮಾತನಾಡಿ, ಬಸವ ಸಂಸ್ಕೃತಿ ಅಭಿಯಾನವು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಒಳ್ಳೆಯ ರೀತಿಯ ಸಿದ್ಧತೆ ಮಾಡುತ್ತಿದ್ದಾರೆ ಸುಮಾರು 300ಕ್ಕೂ ಹೆಚ್ಚು ಬಸವ ತತ್ವದ ಮಠಾಧೀಶರು ಬಸವ ಸಂಸ್ಕೃತಿ ಅಭಿಯಾನದಲ್ಲಿ ಭಾಗವಹಿಸುವವರಿದ್ದಾರೆ.
ಈ ಅಭಿಯಾನದಲ್ಲಿ ಕಾಲೇಜು ವಿದ್ಯಾರ್ಥಿಗಳಿಗಾಗಿ ಸಂವಾದ ಕಾರ್ಯಕ್ರಮವು ನಗರದ ಚನ್ನಬಸವ ಪಟ್ಟದೇವರ ರಂಗಮಂದಿರದಲ್ಲಿ ನಡೆಸಲಾಗುವುದು. ಅದೇ ರೀತಿ ಬಸವ ಸಂಸ್ಕೃತಿ ಅಭಿಯಾನದ ಬಹಿರಂಗ ಸಭೆಯು ಭೂಮರೆಡ್ಡಿ ಕಾಲೇಜು ಬೀದರಿನಲ್ಲಿ ನಡೆಸಲಾಗುವುದು ಮತ್ತು ಬಸವೇಶ್ವರ ವೃತ್ತದಿಂದ ಜಾಥಾ ಪ್ರಾರಂಭವಾಗಿ ಭೂಮರೆಡ್ಡಿ ಕಾಲೇಜಿನಲ್ಲಿ ಸಮಾವೇಶವಾಗಲಿದೆ ಎಂದು ಪೂಜ್ಯರು ಮಾಹಿತಿ ನೀಡಿದರು.ಪೂಜ್ಯರಾದ ಪ್ರಭುದೇವರು ಲಿಂಗಾಯತ ಮಹಾಮಠ ಬೀದರ್ ಮತ್ತು ಬಸವಕಲ್ಯಾಣದ ಪೂಜ್ಯರಾದ ಸಿದ್ದರಾಮೇಶ್ವರ ಸ್ವಾಮಿಗಳು, ಬಸವಗಿರಿಯ ಅಕ್ಕ ಡಾ. ಗಂಗಾಂಬಿಕೆ ಮಾತನಾಡಿದರು.
ಉಮಕಾಂತ ಮೀಸೆ ಸ್ವಾಗತಿಸಿದರು. ಯೋಗೇಂದ್ರ ಯದ್ಲಾಪುರೆ ನಿರೂಪಿಸಿದರು.