ಕನ್ನಡಪ್ರಭ ವಾರ್ತೆ ವಿಜಯಪುರಹೆತ್ತವರನ್ನು, ಹುಟ್ಟಿದ ಊರನ್ನು ತೊರೆದು ದೇಶ ಸೇವೆಯೇ ಈಶ ಸೇವೆ ಎಂದು ಪ್ರಾಣ ಒತ್ತೆ ಇಟ್ಟು ದೇಶಕ್ಕಾಗಿ ಹೋರಾಡಲು ಸಿದ್ದನಿರುವವನೇ ಭಾರತ ಮಾತೆಯ ಹೆಮ್ಮೆಯ ಪುತ್ರ ಎಂದು ಇಂಡಿ ತಾಲೂಕಿನ ಶಿರಕನಹಳ್ಳಿಯ ನಿವೃತ್ತ ಯೋಧ ಜಟ್ಟೆಪ್ಪ ನಾವಿ ಹೇಳಿದರು.
ಶ್ರೀ ಸಿದ್ದೇಶ್ವರ ಕೋಚಿಂಗ್ ಕ್ಲಾಸಸ್ ಸಂಸ್ಥಾಪಕ ಅಧ್ಯಕ್ಷ ಸುರೇಶ ಜತ್ತಿ ಮಾತನಾಡಿ, ಪ್ರತಿಷ್ಠಿತ ಸೈನಿಕ ಶಾಲೆಗಳಲ್ಲಿ ಕಲಿತು ಸೈನಿಕರಾಗಲು ಇಂದು ವಿಫುಲ ಅವಕಾಶಗಳಿವೆ. ಅಲ್ಲದೇ, ಪರೀಕ್ಷೆಗಳನ್ನು ಎದುರಿಸಿ ಸೇನೆಯಲ್ಲಿ ಉನ್ನತ ಹುದ್ದೆ ಅಲಂಕರಿಸಲು ವ್ಯವಸ್ಥೆ ಇದೆ. ಅದಕ್ಕಾಗಿ ಇಂದಿನ ಮಕ್ಕಳು ದೇಶ ಸೇವೆ ಮಾಡುವ ಗಟ್ಟಿ ಮನಸು ಮಾಡಬೇಕು ಎಂದು ಹೇಳಿದರು.
ಮುಖ್ಯ ಅತಿಥಿಯಾಗಿದ್ದ ನಿವೃತ್ತ ಕರ್ನಲ್ ಸಂಗಪ್ಪ ಮಾತನಾಡಿ, ತ್ಯಾಗ ಬಲಿದಾನದಿಂದ ನಮಗೆ ಸ್ವಾತಂತ್ರ್ಯ ಸಿಕ್ಕಿದೆ. ಮಳೆ, ಗಾಳಿ, ಚಳಿ, ಬಿಸಿಲಿನಲ್ಲೂ ವೈರಿಗಳೊಂದಿಗೆ ಹೋರಾಡುವುದೇ ದೊಡ್ಡ ಸವಾಲು. ಸೈನಿಕ ನಿವೃತ್ತಿ ಹೊಂದಿ ಮರಳಿ ತಾಯ್ನಾಡಿಗೆ ಬಂದರೆ ಅದು ಅವರ ಪುನರ್ಜನ್ಮ. ದೇಶ ರಕ್ಷಣೆಗೆ ಯಾರೂ ಹಿಂಜರಿಯಬಾರದು, ದೇಶ ಸೇವೆ ಮಾಡುವುದು ಅದೃಷ್ಟ ಎಂದು ಹೇಳಿದರು.ಸಾಹಿತಿ ರೇವಣಸಿದ್ದಪ್ಪ ಪಟ್ಟಣಶೆಟ್ಟಿ ಮಾತನಾಡಿ, ಹೆತ್ತ ತಾಯಿ ಹೊತ್ತ ನಾಡು ಸ್ವರ್ಗಕ್ಕಿಂತ ಮಿಗಿಲು ಎಂಬಂತೆ ಪ್ರತಿಯೊಬ್ಬರೂ ದೇಶ ಹಾಗೂ ಯೋಧರನ್ನು ಅತ್ಯಂತ ಗೌರವದಿಂದ ಕಾಣಬೇಕು. ಯಾವುದೋ ಸಿನಿಮಾ ನೋಡಿ ಯಾರನ್ನೋ ಹೀರೋ ಮಾಡಿ ನಮ್ಮತನ ಬಿಟ್ಟು ಬದುಕುವುದಲ್ಲ. ನಾವು ನೆಮ್ಮದಿಯಿಂದ ನಿದ್ದೆ ಮಾಡಬೇಕಾದರೆ ತಮ್ಮೆಲ್ಲ ಸರ್ವಸ್ವವನ್ನೂ ತ್ಯಾಗ ಮಾಡಿ, ಭಾರತ ಮಾತೆಯ ರಕ್ಷಣೆ ಮಾಡುವವರು ನಮ್ಮ ಹೆಮ್ಮೆಯ ಯೋಧರು ಎಂದರು.
ಕಾರ್ಯಕ್ರಮದಲ್ಲಿ ನೀಲಾ ಜತ್ತಿ, ಶಿವಕುಮಾರ ನಾವಿ, ಜ್ಯೋತಿಪ್ರಕಾಶ, ಸಂಗೊಂಡ ಕೋರಿ, ಮಂಜು, ಸೇರಿದಂತೆ ಶಿರಕನಹಳ್ಳಿ ಗ್ರಾಮದ ಗೆಳೆಯರ ಬಳಗದ ಸದಸ್ಯರು ಹಾಗೂ ಗುರುಹಿರಿಯರು ಉಪಸ್ಥಿತರಿದ್ದರು.
ಕೋಟ್.....
- ಸುರೇಶ ಜತ್ತಿ, ಶ್ರೀ ಸಿದ್ದೇಶ್ವರ ಕೋಚಿಂಗ್ ಕ್ಲಾಸಸ್ ಸಂಸ್ಥಾಪಕ ಅಧ್ಯಕ್ಷ