ಸತ್ಯಕ್ಕಾಗಿ ಹೋರಾಡುವ ವೃತ್ತಿ ಪತ್ರಿಕೋದ್ಯಮ: ಡಾ.ಚಿಕ್ಕಪ್ಪ ನಾಯಕ

KannadaprabhaNewsNetwork |  
Published : Sep 10, 2025, 01:04 AM IST
ಭಟ್ಕಳ ತಾಲೂಕಿನ ಹಿರಿಯ ವರದಿಗಾರ ಎಂ.ಆರ್.ಮಾನ್ವಿ ಅವರಿಗೆ ಬಾರ್ಡೋಲಿ ಗೌರವ ಮತ್ತು ನಿಟ್ ಪರೀಕ್ಷೆಯಲ್ಲಿ ಸಾಧನೆಗೈದ ಮಾನ್ಯ ಮಂಜುನಾಥ್ ನಾಯ್ಕರಿಗೆ ಸನ್ಮಾನಿಸಲಾಯಿತು. | Kannada Prabha

ಸಾರಾಂಶ

ಪತ್ರಕರ್ತರೆಂದರೆ ನಮ್ಮ ದೇಶದ ಬೆನ್ನೆಲುಬು, ಸಾಮಾಜಿಕ ಸಮಸ್ಯೆಗಳನ್ನು ಮುನ್ನೆಲೆಗೆ ತಂದು ಅದನ್ನು ಶೀಘ್ರದಲ್ಲೇ ಬಗೆಹರಿಸುವಲ್ಲಿ ಪತ್ರಿಕಾರಂಗದ ಕಾರ್ಯ ಮಹತ್ವದ್ದಾಗಿದೆ

ಅಂಕೋಲಾ: ಮಾಧ್ಯಮಗಳ ಪ್ರಾಮಾಣಿಕತೆ, ನಿಷ್ಠೆ ಮತ್ತು ಧೈರ್ಯವೇ ಪ್ರಜಾಪ್ರಭುತ್ವದ ಬಲವಾದ ಸ್ತಂಭ. ಪತ್ರಕರ್ತರಿಲ್ಲದ ಸಮಾಜದಲ್ಲಿ ಜನರಿಗೆ ಸತ್ಯ ತಿಳಿಯುವುದೇ ಕಷ್ಟ. ಈ ಹೊಣೆಗಾರಿಕೆಯನ್ನು ತಮ್ಮ ಜೀವದ ಹಂಗು ತೊರೆದು ನಿರ್ವಹಿಸುತ್ತಿರುವ ಪತ್ರಕರ್ತರ ನಿಷ್ಕಾಮ ಸೇವೆ ಅಗ್ರಗಣ್ಯ ಎಂದು ಎಂದು ತಹಶೀಲ್ದಾರ್ ಡಾ.ಚಿಕ್ಕಪ್ಪ ನಾಯಕ ಹೇಳಿದರು.

ಅವರು ಸೋಮವಾರ ಕಾರ್ಯನಿರತ ಪತ್ರಕರ್ತರ ಸಂಘ ಅಂಕೋಲಾ ವತಿಯಿಂದ ಪಟ್ಟಣದ ಜಿ.ಸಿ. ಕಾಲೇಜಿನಲ್ಲಿ ಹಮ್ಮಿಕೊಂಡ ಪತ್ರಿಕಾ ದಿನಾಚರಣೆ ಹಾಗೂ ಬಾರ್ಡೋಲಿ ಗೌರವ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ವಿಧಾನ ಪರಿಷತ್ ಸದಸ್ಯ ಗಣಪತಿ ಉಳ್ವೆಕರ್ ಮಾತನಾಡಿ, ಪತ್ರಕರ್ತರೆಂದರೆ ನಮ್ಮ ದೇಶದ ಬೆನ್ನೆಲುಬು, ಸಾಮಾಜಿಕ ಸಮಸ್ಯೆಗಳನ್ನು ಮುನ್ನೆಲೆಗೆ ತಂದು ಅದನ್ನು ಶೀಘ್ರದಲ್ಲೇ ಬಗೆಹರಿಸುವಲ್ಲಿ ಪತ್ರಿಕಾರಂಗದ ಕಾರ್ಯ ಮಹತ್ವದ್ದಾಗಿದೆ ಎಂದರು.

ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಅರುಣ ಶೆಟ್ಟಿ ಅಧ್ಯಕ್ಷತೆವಹಿಸಿ ಮಾತನಾಡಿ ತಂತ್ರಜ್ಞಾನ, ಸಾಮಾಜಿಕ ಜಾಲತಾಣ, ಡಿಜಿಟಲ್ ಮಾಧ್ಯಮ ಈ ಎಲ್ಲ ಸವಾಲುಗಳ ನಡುವೆ ನಿಜವನ್ನು ಹುಡುಕುವ, ಜನರ ಹಿತವನ್ನು ಕಾಪಾಡುವ ಜವಬ್ದಾರಿ ಪತ್ರಕರ್ತರದ್ದಾಗಿದೆ ಎಂದರು.

ಈಸಿ ಕಾಲೇಜಿನ ಪ್ರಾಚಾರ್ಯ ಎಸ್.ವಿ.ವಸ್ತ್ರದ, ಕೆನರಾ ವೇಲ್ಪರ್ ಟ್ರಸ್ಟಿನ ಆಡಳಿತಾಧಿಕಾರಿ ಆರ್.. ಕೇಣಿ ವೇದಿಕೆಯಲ್ಲಿದ್ದರು.

ಭಟ್ಕಳ ತಾಲೂಕಿನ ಹಿರಿಯ ವರದಿಗಾರ ಎಂ.ಆರ್.ಮಾನ್ವಿ ಅವರಿಗೆ ಬಾರ್ಡೋಲಿ ಗೌರವ ಪುರಸ್ಕಾರ ನೀಡಲಾಯಿತು. ಹಾಗೆಯೇ ವೈದ್ಯಕೀಯ ವಿಭಾಗದ ನಿಟ್ ಪರೀಕ್ಷೆಯಲ್ಲಿ ಸಾಧನೆಗೈದ ಪತ್ರಕರ್ತ ಮಂಜುನಾಥ ನಾಯ್ಕ ಅವರ ಪುತ್ರಿ ಮಾನ್ಯ ಮಂಜುನಾಥ್ ನಾಯ್ಕ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಪತ್ರಕರ್ತ ವಾಸುದೇವ ಗುನಗಾ ಸ್ವಾಗತಿಸಿದರು. ಮೋಹನ್ ದುರ್ಗೆಕರ್ ಸನ್ಮಾನ ಪತ್ರ ವಾಚಿಸಿದರು, ಸುಭಾಷ್ ಕಾರೇಬೈಲ್ ನಿರೂಪಿಸಿದರು. ನಾಗರಾಜ್ ಜಾಂಬಳೆಕರ್ ವಂದಿಸಿದರು.

ಈ ಸಂದರ್ಭದಲ್ಲಿ ಪತ್ರಕರ್ತರಾದ ರಾಘು ಕಾಕರಮಠ, ನಾಗರಾಜ್ ಮಂಜುಗುಣಿ, ಕೆ ರಮೇಶ್, ಅಕ್ಷಯ ನಾಯ್ಕ, ಅನೂಪ ಗುನಗಾ ಮುಂತಾದವರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

‘ಕನ್ನಡಪ್ರಭ, ಏಷ್ಯಾನೆಟ್‌ ಸುವರ್ಣ ನ್ಯೂಸ್‌’ನ ಸಹಯೋಗದಲ್ಲಿ ಆಯೋಜಿಸಿದ್ದ ‘ಕೆಂಗೇರಿ ಸಂಭ್ರಮ’ಕ್ಕೆ ವಿದ್ಯುಕ್ತ ತೆರೆ
ಸರ್ವಾಧ್ಯಕ್ಷರಾಗಿ ಸೋಮಲಿಂಗ ಗೆಣ್ಣೂರ ಆಯ್ಕೆ