ಕನ್ನಡಪ್ರಭ ವಾರ್ತೆ ಗಂಗಾವತಿ
ತಾಲೂಕ ಕಸಾಪ ಭವನದಲ್ಲಿ ಫೆ. 16ರಂದು ವೇದವ್ಯಾಸರಾವ್ ನವಲಿ ಸ್ಮರಣಾರ್ಥ ಕಾವ್ಯಲೋಕದ 108ನೇ ಕವಿಗೋಷ್ಠಿ ಜರುಗಲಿದ್ದು, ಇದೇ ವೇಳೆ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಸಾಧಕರಿಗೆ ಶ್ರೀ ಕೃಷ್ಣದೇವರಾಯ ರಾಜ್ಯಮಟ್ಟದ ಪ್ರಶಸ್ತಿ ಪ್ರದಾನ ಸಮಾರಂಭ ಜರುಗಲಿದೆ ಎಂದು ಪ್ರಕಾಶನದ ಎಂ. ಪರಶುರಾಮ ಪ್ರಿಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅರಳಿಹಳ್ಳಿಯ ರೇವಣಸಿದ್ದಯ್ಯ ತಾತನವರು ಸಾನಿಧ್ಯ ವಹಿಸಲಿದ್ದಾರೆ. ಶಾಸಕ ಗಾಲಿ ಜನಾರ್ದನ ರೆಡ್ಡಿ ಉದ್ಘಾಟಿಸುವುರು. ಮಾಜಿ ಶಾಸಕ ಪರಣ್ಣ ಮುನವಳ್ಳಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.ನಿವೃತ್ತ ಪ್ರಾಚಾರ್ಯ ಬಸವರಾಜ ಐಗೋಳ ಕವಿಗೋಷ್ಠಿ ಅಧ್ಯಕ್ಷತೆ ವಹಿಸಲಿದ್ದಾರೆ.
ಪ್ರಶಸ್ತಿಗೆ ಆಯ್ಕೆಯಾದವರು:
ಹಿರಿಯ ಪತ್ರಕರ್ತರಾದ ಎಸ್.ಎಂ. ಪಟೇಲ್, ರಾಮಮೂರ್ತಿ ನವಲಿ, ಪ್ರಮುಖರಾದ ಡಾ. ಶಿವಕುಮಾರ ಮಾಲಿಪಾಟೀಲ್, ಡಾ. ಸಿ. ಮಹಾಲಕ್ಷ್ಮೀ, ಹನುಮಂತಪ್ಪ ಗೂಗಿಬಂಡಿ, ಮಲ್ಲಮ್ಮ ವಡ್ಡರ, ಮಾರುತಿ ಐಲಿ, ಚನ್ನಬಸಪ್ಪ ಬಳಗಾರ, ಗಿರಿಯಪ್ಪ ಕೆ., ಕೆ. ಪಂಪಣ್ಣ, ಕಳಕಪ್ಪ ತಳವಾರ, ಶೇಖಪ್ಪ ಕಿನ್ನೂರಿ, ಎನ್.ಆರ್. ರಾಯಬಾಗಿ, ಬಸವರಾಜ ಐಗೋಳ, ಚನ್ನಬಸ ಜೇಕಿನ್, ಮಹಾದೇವಿ ಪಾಟೀಲ್, ಪಂಚಾಕ್ಷರಕುಮಾರ, ಡಾ. ಬಸವರಾಜ ಪೂಜಾರ, ಭಾಗ್ಯಶ್ರೀ ಹುರಕಡ್ಲಿ, ವಿಷ್ಣುತೀರ್ಥ ಜೋಶಿ, ಸುನೀತಾ, ಮಂಜುನಾಥ ಹೊಸಕೇರಿ, ಹನುಮಂತಪ್ಪ ನಾಯಕ, ರಿಜ್ವಾನ್ ಮುದ್ದಾಬಳ್ಳಿ, ವಿರುಪಾಕ್ಷಪ್ಪ ಶಿರವಾರ, ಹನುಮೇಶ ಮಹಿಪತಿ, ಮಲ್ಲೇಶ ಸಣಾಪುರ, ಪಂಪನಗೌಡ ಬನ್ನಿಮರದ ಇವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ.