ಪತ್ರಕರ್ತರು ಸಮಾಜದ ಸಮಸ್ಯೆ ಬಿಂಬಿಸುವ ವರದಿ ಮಾಡಲಿ: ಸಚಿವ ಎಚ್.ಕೆ. ಪಾಟೀಲ

KannadaprabhaNewsNetwork |  
Published : Nov 20, 2025, 01:15 AM IST
ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ.ಪಾಟೀಲ ಉದ್ಘಾಟಿಸಿದರು.  | Kannada Prabha

ಸಾರಾಂಶ

ಗ್ರಾಮೀಣ ಪ್ರದೇಶದ ಪತ್ರಕರ್ತರಿಗೆ ರಾಜ್ಯ ಮಟ್ಟದ ಗೌರವ ನೀಡುವ ಕೆಲಸವನ್ನು ರಾಜ್ಯ ಸರ್ಕಾರ ಮುಂದಿನ ದಿನಗಳಲ್ಲಿ ಮಾಡಲಾಗುತ್ತದೆ ಎಂದು ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ತಿಳಿಸಿದರು.

ಗದಗ: ಗದಗ ಜಿಲ್ಲಾ ಪತ್ರಕರ್ತರ ಸಂಘವು ರಚನಾತ್ಮಕ ಕೆಲಸ ಮಾಡುವ ಮೂಲಕ ರಾಜ್ಯದ ಪತ್ರಕರ್ತರಿಗೆ ಮಾದರಿಯಾಗಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ತಿಳಿಸಿದರು.

ಇತ್ತೀಚೆಗೆ ನಗರದ ಮುಳಗುಂದ ರಸ್ತೆಯಲ್ಲಿರುವ ಪತ್ರಿಕಾ ಭವನದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ 2025- 28ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಹಾಗೂ ಪ್ರಮಾಣಪತ್ರ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸಮಾಜದಲ್ಲಿರುವ ಸಮಸ್ಯೆಗಳನ್ನು ನೈಜವಾಗಿ ಪ್ರತಿಬಿಂಬಿಸುವ ಕೆಲಸವನ್ನು ಯುವ ಪತ್ರಕರ್ತರು ಮಾಡಬೇಕು. ಜನಜಾಗೃತಿಗಾಗಿ ಪತ್ರಿಕೋದ್ಯಮ ಆರಂಭವಾಗಿತ್ತು. ಆದರೆ ಇಂದಿನ ದಿನಗಳಲ್ಲಿ ಜನರ ಜಾಗೃತಿ ಮೂಡಿಸುವ ಕೆಲಸವು ಪತ್ರಿಕೋದ್ಯಮದಲ್ಲಿ ಉಳಿದಿಲ್ಲ. ನೈಜ ಸಮಾಜವನ್ನು ಪ್ರತಿನಿಧಿಸುವ ಕೆಲಸವನ್ನು ಮಾಡಬೇಕು. ಯುವ ಪತ್ರಕರ್ತರಲ್ಲಿ ಭಾಷೆಯ ಕೊರತೆ ಕಂಡುಬರುತ್ತಿದ್ದು, ಅದನ್ನು ನೀಗಿಸುವ ಕೆಲಸವನ್ನು ಎಐ ಕ್ಷಣಾರ್ಧದಲ್ಲಿ ಮಾಡುತ್ತದೆ. ಗ್ರಾಮೀಣ ಪ್ರದೇಶದ ಪತ್ರಕರ್ತರಿಗೆ ರಾಜ್ಯ ಮಟ್ಟದ ಗೌರವ ನೀಡುವ ಕೆಲಸವನ್ನು ರಾಜ್ಯ ಸರ್ಕಾರ ಮುಂದಿನ ದಿನಗಳಲ್ಲಿ ಮಾಡಲಾಗುತ್ತದೆ. ಹಿರಿಯರ ಪತ್ರಕರ್ತರಿಗೆ ಪಿಂಚಣಿ ನೀಡುವ ಕೆಲಸ, ಜಿಲ್ಲೆಯಲ್ಲಿ ಇರುವ ಹಿರಿಯ ಪತ್ರಕರ್ತರ ಮಾಹಿತಿ ನೀಡಿದರೆ ಅವುಗಳನ್ನು ಕೊಡಿಸುವ ಕೆಲಸವನ್ನು ಮಾಡಲಾಗುವುದು ಎಂದರು. ವಿಧಾನಪರಿಷತ್ ಸದಸ್ಯ ಎಸ್.ವಿ. ಸಂಕನೂರ ಮಾತನಾಡಿ, ರಾಜ್ಯ ದೇಶದ ಪ್ರಗತಿಯಲ್ಲಿ ಪತ್ರಕರ್ತರ ಪಾತ್ರ ಪ್ರಮುಖವಾಗಿದೆ. ಆದ್ದರಿಂದ ಪತ್ರಕರ್ತರು ಜವಾಬ್ದಾರಿಯಿಂದ ಕೆಲಸವನ್ನು ಮಾಡಬೇಕು. ಗ್ರಾಮೀಣ ಪ್ರದೇಶಗಳಲ್ಲಿ ಇರುವ ಸಮಸ್ಯೆಗಳ ಕುರಿತು ವರದಿ ಮಾಡಬೇಕು ಎಂದರು.

ನರಗುಂದ ಶಾಸಕ ಸಿ.ಸಿ. ಪಾಟೀಲ ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪತ್ರಿಕಾ ರಂಗಕ್ಕೆ ತನ್ನದೇ ಆದ ಜವಾಬ್ದಾರಿ ಇರುತ್ತದೆ. ಪತ್ರಕರ್ತರು ಅದನ್ನು ಅರಿತು ಕೆಲಸ ಮಾಡಬೇಕು, ಸ್ವಾತಂತ್ರ್ಯವಿದೆ ಎಂದು ಯಾರದ್ದೋ ತೇಜೋವಧೆ ಮಾಡುವುದು ಒಳ್ಳೆಯ ಬೆಳವಣಿಗೆಯಲ್ಲ ಎಂದರು. ಜಗದೀಶ್ ಕುಲಕರ್ಣಿ ಪ್ರಾಸ್ತಾವಿಕವಾಗಿ, ಅನಂತ ಕಾರ್ಕಳ ಸಂಘ ನಡೆದುಬಂದ ದಾರಿ ಕುರಿತು ಮಾತನಾಡಿದರು. ಜಿಲ್ಲಾ ಚುನಾವಣಾಧಿಕಾರಿ ಶಿವಾನಂದ ಹಿರೇಮಠ, ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಕಾರ್ಯದರ್ಶಿ ನಿಂಗಪ್ಪ ಚವಡಿ, ಅನಂತ ಕಾರ್ಕಳ, ಬಸವರಾಜ ದಂಡಿನ, ಎಸ್.ವಿ. ಶಿವಪ್ಪಯ್ಯನಮಠ, ಆನಂದ ಸಾಲಿಗ್ರಾಮ, ಎಂ.ಜಿ. ಕುಲಕರ್ಣಿ, ಐ.ಕೆ. ಕಮ್ಮಾರ, ವಸಂತ ಮಹೇಂದ್ರಕರ, ಸಿ.ಬಿ. ಸುಬೇದಾರ, ವೀರಯ್ಯ ಲಕ್ಕುಂಡಿಮಠ, ಸಿ.ಕೆ. ಗಣಪ್ಪನವರ, ಅಶೋಕ ಸೊರಟೂರ ಅವರನ್ನು ಸನ್ಮಾನಿಸಲಾಯಿತು. ರಾಜ್ಯ ಕಾರ್ಯಕಾರಿಣಿ ಸದಸ್ಯ ಅರುಣಕುಮಾರ ಹಿರೇಮಠ, ಪ್ರಧಾನ ಕಾರ್ಯದರ್ಶಿ ಶರಣು ದೊಡ್ಡೂರ, ಉಪಾಧ್ಯಕ್ಷರಾದ ಅನೀಲ ತೆಂಬದಮನಿ, ಪ್ರಭುಸ್ವಾಮಿ ಅರವಟಗಿಮಠ, ವಿ.ಡಿ. ಕಣವಿ, ಕಾರ್ಯದರ್ಶಿ ಸಂಗಪ್ಪ ವ್ಯಾಪಾರಿ, ಕಾರ್ಯದರ್ಶಿಗಳಾದ ಬನೇಶ ಕುಲಕರ್ಣಿ, ಚಂದ್ರಶೇಖರ ಕುಸ್ಲಾಪೂರ, ಖಜಾಂಚಿ ರಾಮಣ್ಣ ವಗ್ಗಿ, ಜಿಲ್ಲಾ ಕಾರ್ಯಾಕಾರಿಣಿ ಸದಸ್ಯರಾದ ವೆಂಕಟೇಶ ಇಮರಾಪೂರ, ರುದ್ರಗೌಡ ಪಾಟೀಲ, ಸಂತೋಷ ಮುರಡಿ, ಆದರ್ಶ ಕುಲಕರ್ಣಿ, ಮಲ್ಲು ಕಳಸಾಪೂರ, ಶಿವಕುಮಾರ ಶಶಿಮಠ, ಮಹಾಲಿಂಗಯ್ಯ ಹಿರೇಮಠ, ಮಂಜುನಾಥ ಪತ್ತಾರ, ಗಿರೀಶ ಕಮ್ಮಾರ, ಮೌನೇಶ ಬಡಿಗೇರ, ಅಜಿತಕುಮಾರ ಹೊಂಬಾಳಿ, ಸಂತೋಷ ಕೊಣ್ಣೂರ, ಆನಂದಯ್ಯ ವಿರಕ್ತಮಠ, ಯಲ್ಲಪ್ಪ ತಳವಾರ, ವಿವಿಧ ತಾಲೂಕಿನ ಪತ್ರಕರ್ತರು ಇದ್ದರು. ಖಾಜಹುಸೇನ್ ಮುಧೋಳ ಪ್ರಾರ್ಥಿಸಿದರು. ಬಾಹುಬಲಿ ಜೈನರ್ ನಿರೂಪಿಸಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶರಣು ವಂದಿಸಿದರು.

PREV

Recommended Stories

ಪರಿಶುದ್ಧ ಬದುಕಿನಿಂದ ಜೀವನ ಉಜ್ವಲ: ಡಾ. ವೀರಸೋಮೇಶ್ವರ ಸ್ವಾಮೀಜಿ
ಜಿಲ್ಲೆಯಲ್ಲಿ ಶೇ.100ರಷ್ಟು ಕನ್ನಡ ಅನುಷ್ಠಾನವಾಗಲಿ: ಸಾಜೀದ್ ಮುಲ್ಲಾ.