ಟೈಮ್ಸ್‌ ಎಜುಕೇಷನ್‌ ರ್ಯಾಕಿಂಗ್ಸ್‌ನಲ್ಲಿ ಜೆಎಸ್‌ಎಸ್‌ ಸಾಧನೆ

KannadaprabhaNewsNetwork |  
Published : Jun 19, 2025, 11:51 PM IST
36 | Kannada Prabha

ಸಾರಾಂಶ

ಮೈಸೂರು: ಟೈಮ್ಸ್‌ ಎಜುಕೇಷನ್‌ ಇಂಪ್ಯಾಕ್ಟ್‌ ರ್‍ಯಾಂಕಿಂಗ್ಸ್‌ 2025ರಲ್ಲಿ ಜೆಎಸ್‌ಎಸ್‌ ಉನ್ನತ ಶಿಕ್ಷಣ ಅಕಾಡೆಮಿ ಮತ್ತು ಸಂಶೋಧನಾ ಸಂಸ್ಥೆಯು ಉತ್ತಮ ಸಾಧನೆ ಮಾಡಿದೆ.

ಮೈಸೂರು: ಟೈಮ್ಸ್‌ ಎಜುಕೇಷನ್‌ ಇಂಪ್ಯಾಕ್ಟ್‌ ರ್‍ಯಾಂಕಿಂಗ್ಸ್‌ 2025ರಲ್ಲಿ ಜೆಎಸ್‌ಎಸ್‌ ಉನ್ನತ ಶಿಕ್ಷಣ ಅಕಾಡೆಮಿ ಮತ್ತು ಸಂಶೋಧನಾ ಸಂಸ್ಥೆಯು ಉತ್ತಮ ಸಾಧನೆ ಮಾಡಿದೆ.

ಸಂಸ್ಥೆಯು ಜಾಗತಿಕ ಮಟ್ಟದಲ್ಲಿ 56ನೇ ರ್‍ಯಾಂಕ್‌ ಮತ್ತು ಭಾರತದಲ್ಲಿ 3ನೇ ಸ್ಥಾನ ಪಡೆದಿದೆ. ಸಂಯುಕ್ತ ರಾಷ್ಟ್ರದ ಸ್ಥಿರಾಭಿವೃದ್ಧಿಯ ಗುರಿಗಳನ್ನು ಮುನ್ನಡೆಸುತ್ತಿರುವ ವಿಶ್ವದ ಶ್ರೇಷ್ಠ ವಿದ್ಯಾಸಂಸ್ಥೆಗಳಲ್ಲಿ ಒಂದಾಗಿದೆ.

ಟರ್ಕಿಯ ಇಸ್ತಾನ್‌ ಬುಲ್‌ ನಲ್ಲಿ ಜೂ. 18 ರಂದು ನಡೆದ ಗ್ಲೋಬಲ್ಸ್‌ ಸ್ಪೈನಬಲ್‌ ಡೆವಲಪ್ಮೆಂಟ್‌ ಕಾಂಗ್ರೆಸ್‌ ನಲ್ಲಿ ಈ ರ್‍ಯಾಂಕಿಂಗ್‌ ಅನ್ನು ಬಿಡುಗಡೆಗೊಳಿಸಲಾಯಿತು.

ಈ ಗೌರವವು ಪರಿಸರ ರಕ್ಷಣೆ ಮತ್ತು ಸಾಮಾಜಿಕ ನ್ಯಾಯದ ನಿಜವಾದ ಬದ್ಧತೆಯ ಪ್ರತೀಕ. ಇಂದು ವಿಶ್ವವಿದ್ಯಾಲಯಗಳು ಎಸ್‌.ಡಿ.ಜಿ.ಎಸ್‌ ಗಳನ್ನು ಮುನ್ನಡೆಸುವಲ್ಲಿ ಪ್ರಮುಖ ಪಾತ್ರವಹಿಸುತ್ತಿವೆ. ಕೇವಲ ಸಂಶೋಧನೆ ಮೂಲಕವಲ್ಲದೇ, ಸಮುದಾಯಕ್ಕೆ ಸಂಬಂಧಿಸಿದ ವಿಶೇಷವಾಗಿ ಶುದ್ಧ ಇಂಧನ, ನೀರು, ಆರೋಗ್ಯ ಮತ್ತು ದಾರಿದ್ರ್ಯ ನಿವಾರಣೆಯಂತಹ ಮುಖ್ಯ ಕ್ಷೇತ್ರಗಳಲ್ಲಿ ರ್‍ಯಾಂಕಿಂಗ್‌ ಪಡೆದಿದೆ.

ಒಟ್ಟು 91.9 ಅಂಕಗಳೊಂದಿಗೆ ಜೆಎಸ್‌ಎಸ್‌ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿಯು ಎಸ್‌.ಡಿಜಿಗಳಲ್ಲಿ ಶ್ರೇಷ್ಠ ಸಾಧನೆ ಮಾಡಿದೆ.

ಎಸ್‌.ಡಿ.ಜಿ 7 ರಲ್ಲಿ ಅಫೋರ್ಡಬಲ್‌ಮತ್ತು ಕ್ಲೀನ್‌ ಎನರ್ಜಿಯಲ್ಲಿ ಜಾಗಿತಕವಾಗಿ 2ನೇ ಸ್ಥಾನ, ಎಸ್‌.ಡಿ.ಜಿ 6 ಶುದ್ಧ ನೀರು ಮತ್ತು ಸ್ವಚ್ಛತೆಗೆ ಜಾಗಿತಕವಾಗಿ 11ನೇ ಸ್ಥಾನ, ಎಸ್‌.ಡಿ.ಜಿ 1- ದಾರಿದ್ರ್ಯ ನಿವಾರಣೆಯಲ್ಲಿ ಜಾಗತಿಕವಾಗಿ 20ನೇ ಸ್ಥಾನ, ಎಸ್‌.ಡಿ.ಜಿ 3- ಉತ್ತಮ ಆರೋಗ್ಯ ಮತ್ತು ಕಲ್ಯಾಣದಲ್ಲಿ ಜಾಗತಿಕವಾಗಿ 69ನೇ ಸ್ಥಾನ ದೊರಕಿದೆ.

ಈ ಸಂಬಂಧ ಅಕಾಡೆಮಿಯ ಕಲಾಧಿಪತಿ ಹಾಗೂ ಸುತ್ತೂರು ಮಠಾಧ್ಯಕ್ಷರಾದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ಶಿಕ್ಷಣದ ನಿಜವಾದ ಸಾರವು ಮಾನವೀಯತೆಯಿಂದ ಸೇವೆ ಸಲ್ಲಿಸುವ ಶಕ್ತಿಯಲ್ಲಿದೆ. ಜ್ಞಾನ ಮತ್ತು ಸಂಶೋಧನೆಯು ಶೈಕ್ಷಣಿಕ ಮಿತಿಗಳನ್ನು ಮೀರಿ ಜೀವನವನ್ನು ಸ್ಪರ್ಶಿಸಬೇಕು, ಸಮುದಾಯಗಳನ್ನು ಉನ್ನತೀಕರಿಸಬೇಕು ಮತ್ತು ಸಹಾನುಭೂತಿಯಿಂದ ಜಗತ್ತನ್ನು ಪೋಷಿಸಬೇಕು ಎಂದು ಹಾರೈಸಿದ್ದಾರೆ.

ಸಮ ಕುಲಾಧಿಪತಿ ಡಾ.ಬಿ. ಸುರೇಶ್‌ ಅವರು, ಈ ಜಾಗತಿಕ ಶ್ರೇಯಾಂಕವು ಕೇವಲ ಪ್ರಶಂಸೆಯಲ್ಲ - ಇದು ನಮ್ಮ ಮೂಲ ತತ್ವಶಾಸ್ತ್ರದ ದೃಢೀಕರಣವಾಗಿದೆ: ಶಿಕ್ಷಣವು ಸಬಲೀಕರಣಗೊಳ್ಳಬೇಕು, ಆರೋಗ್ಯವು ಎಲ್ಲರನ್ನೂ ತಲುಪಬೇಕು ಮತ್ತು ವಸುದೈವ ಕುಟುಂಬಕಂ ನಂತಹ ಭಾರತೀಯ ಮೌಲ್ಯಗಳೊಂದಿಗೆ ಹೊಂದಿಕೊಂಡಿರುವ ನಾವು ಜಾಗತಿಕ ಒಳಿತಿಗೆ ಆಳವಾಗಿ ಬದ್ಧರಾಗಿದ್ದೇವೆ ಎಂದು ತಿಳಿಸಿದರು.

ಕುಲಪತಿ ಡಾ.ಎಚ್. ಬಸವನಗೌಡಪ್ಪ ಮಾತನಾಡಿ, 2025ರ ಇಂಪ್ಯಾಕ್ಟ್‌ ರ್‍ಯಾಂಕ್‌ ಗಳಲ್ಲಿ ಜಾಗತಿಕವಾಗಿ 56ನೇ ಸ್ಥಾನ ಮತ್ತು ಭಾರತದಲ್ಲಿ 3ನೇ ಸ್ಥಾನ ಪಡೆಯುವುದು ಹೆಮ್ಮೆಯ ಸಂಗತಿಯಾಗಿದೆ. ವಿಶ್ವವಿದ್ಯಾನಿಲಯಗಳು ಸಮಾನತೆ, ಸುಸ್ಥಿರತೆ ಮತ್ತು ಪರಿವರ್ತನೆಯ ಪ್ರತೀಕಗಳಾಗಿರಬೇಕು ಎಂದು ಅವರು ಹೇಳಿದರು.

ವಿಶ್ವದಲ್ಲಿಯೇ ಶ್ರೇಷ್ಠ ಸಂಸ್ಥೆಗಳಲ್ಲೊಂದು ಎಂಬ ಗೌರವವನ್ನು ನಿರಂತರವಾಗಿ ಉಳಿಸಿಕೊಂಡಿರುವ ಜೆಎಸ್‌ಎಸ್‌ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿಯು ಪರಿಸರದ ಮೇಲೆ ನಿಜವಾದ ಪ್ರಭಾವವನ್ನು ಉಂಟುಮಾಡುವ ಉದ್ದೇಶದಿಂದ ಜಾಗತಿಕ ಶ್ರೇಷ್ಠತೆಯತ್ತ ದಾಪುಗಾಲು ಇಡುತ್ತಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜ್ಯದಲ್ಲಿ ಮದ್ಯ ಮಾರಾಟ ನಿಷೇಧವಾಗುತ್ತಾ ?
ಯಾವ ದೇವ್ರಿಗೆ ಪೂಜೆ ಮಾಡಿಸಿದ್ದೀರಿ? : ಮಧುಗೆ ರವಿ!