ಕೆ.ಎಸ್.ಪುಟ್ಟಣ್ಣಯ್ಯ ಆದರ್ಶ ಎಲ್ಲಾ ಕಾಲಕ್ಕೂ ಮಾದರಿ, ಅನುಸರಣೀಯ: ನಾಗತಿಹಳ್ಳಿ ಚಂದ್ರಶೇಖರ್

KannadaprabhaNewsNetwork |  
Published : Dec 22, 2025, 02:00 AM IST
21ಕೆಎಂಎನ್ ಡಿ33 | Kannada Prabha

ಸಾರಾಂಶ

ನಾಟಕಗಳು ಸಮಾಜಮುಖಿ ಚಿಂತನಗಳಿಗೆ ಹುಟ್ಟು ಹಾಕುತ್ತದೆ. ನಾಟಕ ಆಡುವುದು, ಹೆಣ್ಣುಮಕ್ಕಳು ಪಾಲ್ಗೊಳ್ಳುವುದು ಕೀಳರಿಮೆ ಎಂಬ ಭಾವನೆ ಗ್ರಾಮೀಣ ಭಾಗದಲ್ಲಿದೆ. ಆದರೆ, ಹೆಣ್ಣುಮಕ್ಕಳು ಸಹ ನಾಟಕಗಳಲ್ಲಿ ತೊಡಗಿಸಿಕೊಳ್ಳು ವಂತಾಗಬೇಕು.

ಕನ್ನಡಪ್ರಭ ವಾರ್ತೆ ಮೇಲುಕೋಟೆ

ರೈತನಾಯಕ ದಿ.ಕೆ.ಎಸ್.ಪುಟ್ಟಣ್ಣಯ್ಯರ ಆದರ್ಶಗಳು ಎಲ್ಲ ಕಾಲಕ್ಕೂ ಮಾದರಿ ಹಾಗೂ ಅನುಸರಣೀಯವಾಗಿದೆ ಎಂದು ಸಾಹಿತಿ ಚಲನಚಿತ್ರ ನಿರ್ದೇಶಕ ನಾಗತಿಹಳ್ಳಿ ಡಾ.ಚಂದ್ರಶೇಖರ್ ತಿಳಿಸಿದರು.

ಕೆಎಸ್‌ಪಿ ಹುಟ್ಟುಬ್ಬದ ಅಂಗವಾಗಿ ಮೇಲುಕೋಟೆ ಪುತಿನ ಕಲಾಮಂದಿರದಲ್ಲಿ ಹಸಿರು ಭೂಮಿ ಟ್ರಸ್ಟ್, ದೃಶ್ಯ ಟ್ರಸ್ಟ್, ಕನ್ನಡ ಸಂಸ್ಕೃತಿ ಇಲಾಖೆ ಹಾಗೂ ಪುತಿನ ಟ್ರಸ್ಟ್ ಜಂಟಿಯಾಗಿ ಹಮ್ಮಿಕೊಂಡಿದ್ದ ಪುಟ್ಟಣ್ಣಯ್ಯರಿಗೆ ರಂಗನಮನ ಹೊಂಬಾಳೆ ನಾಟಕೋತ್ಸವವನ್ನು ಭಾನುವಾರ ರಾತ್ರಿ ಉದ್ಘಾಟಿಸಿ ಮಾತನಾಡಿದರು.

ಅಗಲಿದ ನಾಯಕರಿಗೆ ಹಲವು ರೀತಿಯ ನಮನ ಸಲ್ಲಿಸಲಾಗುತ್ತದೆ. ಆದರೆ, ಪುಟ್ಟಣ್ಣ ಅವರಿಗೆ ರಂಗನಮನ ಸಲ್ಲಿಸುತ್ತಿರುವುದು ವಿಶೇಷವಾಗಿದೆ. ರಂಗ ಚಟುವಟಿಕೆಗೆ ಗ್ರಾಮೀಣ ಪ್ರದೇಶಗಳಲ್ಲಿ ಪ್ರೋತ್ಸಾಹ ದೊರೆಯುತ್ತಿಲ್ಲ. ಸಮುದಾಯದ ವಿಚಾರಧಾರೆಗಳನ್ನು ತರೆದಿಟ್ಟು, ಚಿಂತನೆಗೆ ಪ್ರೇರೇಪಿಸುವ ಕೆಲಸವನ್ನು ನಾಟಕಗಳು ಮಾಡುತ್ತದೆ ಎಂದರು.

ನಾಟಕಗಳು ಸಮಾಜಮುಖಿ ಚಿಂತನಗಳಿಗೆ ಹುಟ್ಟು ಹಾಕುತ್ತದೆ. ನಾಟಕ ಆಡುವುದು, ಹೆಣ್ಣುಮಕ್ಕಳು ಪಾಲ್ಗೊಳ್ಳುವುದು ಕೀಳರಿಮೆ ಎಂಬ ಭಾವನೆ ಗ್ರಾಮೀಣ ಭಾಗದಲ್ಲಿದೆ. ಆದರೆ, ಹೆಣ್ಣುಮಕ್ಕಳು ಸಹ ನಾಟಕಗಳಲ್ಲಿ ತೊಡಗಿಸಿಕೊಳ್ಳು ವಂತಾಗಬೇಕು. ಮೂಲಕ ಗ್ರಾಮೀಣ ಪ್ರತಿಭೆಗಳು ಅನಾವರಣಗೊಳ್ಳಲು ರಂಗಚಟುವಟಿಕೆ ಸರಳ ವೇದಿಕೆಯಾಗಿದೆ ಎಂದರು.

ದಕ್ಷಿಣಕನ್ನಡಲ್ಲಿ ಅಲ್ಲಿನ ಗ್ರಾಮೀಣ ಜನ ಯಕ್ಷಗಾನಕ್ಕೆ ನೀಡುವ ಪ್ರೋತ್ಸಾಹ ನಮ್ಮಲ್ಲಿ ನಾಟಕಗಳಿಗೆ ದೊರೆಯಬೇಕು. ನಾಟಕ ಚಿಂತನೆಗೆ ಪ್ರೇರೇಪಿಸಿ ವ್ಯಕ್ತಿತ್ವ ರೂಪಿಸುತ್ತದೆ. ಹೊರಗಿನ ಕಲಾವಿದರನ್ನು ಕರೆತಂದು ನಾಟಕ ಮಾಡುವ ಬದಲು ಸ್ಥಳೀಯ ಯುವಕರೇ ರಂಗ ತರಬೇತಿ ಪಡೆದು ನಾಟಕ ಪ್ರದರ್ಶನ ನೀಡುವಂತಾಗಬೇಕು ಎಂದರು.

ಪು.ತಿ.ನ ಕಲಾಮಂದಿರ ರಂಗ ಚಟುವಟಿಕೆಗಾಗಿ ರೂಪುಗೊಂಡಿದೆ. ಇದನ್ನು ರಂಗಾಸಕ್ತರು ಬಳಸಿಕೊಳ್ಳಬೇಕು. ಧಾರವಾಹಿಗಳಾಗಲಿ ಸಿನಿಮಾಗಳಾಗಲಿ ವ್ಯಕ್ತಿತ್ವವನ್ನು ರೂಪಿಸುವುದಿಲ್ಲ. ಹೊಸ ಚಿಂತನೆಗಳನ್ನು ಹುಟ್ಟು ಹಾಕುವುದಿಲ್ಲ. ಆದರೆ, ನಾಟಕಕ್ಕೆ ವ್ಯಕ್ತಿತ್ವ ರೂಪಿಸುವ ಶಕ್ತಿ ಇದೆ ಎಂದರು.

ಕೆ.ಎಸ್.ಪುಟ್ಟಣ್ಣಯ್ಯನವರು ಯಾರನ್ನೇ ಆಗಲಿ ಪ್ರಶ್ನಿಸಿ ಸತ್ಯವನ್ನು ಬಯಲಿಗೆಳೆಯುವ ಶಕ್ತಿ ಹೊಂದಿದ್ದರು. ಸಮಾಜಮುಖಿ ಚಿಂತನೆ ಹೊಂದಿದ್ದರು. ಅವರ ಮೇಲಿನ ಅಭಿಮಾನಕ್ಕಾಗಿ ಸಮಾರಂಭದಲ್ಲಿ ಭಾಗವಹಿಸಿದ್ದೇನೆ ಎಂದರು.

ರೈತನಾಯಕಿ ಸುನೀತಪುಟ್ಟಣ್ಣಯ್ಯ ಮಾತನಾಡಿ, ಪುಟ್ಟಣ್ಣಯ್ಯರ ವಿಚಾರಧಾರೆಗಳನ್ನು ನಮಗೆ ಆದರ್ಶವಾಗಿವೆ. ಅವರಿಗೆ ನಾಟಕೋತ್ಸವ ಮೂಲಕ ರಂಗನಮನ ಸಲ್ಲಿಸುತ್ತಿರುವ ಕಲಾವಿದರನ್ನು ಪ್ರೋತ್ಸಾಹಿಸುತ್ತಿರುವುದು ಸಂತೋಷವಾಗಿದೆ ಎಂದರು.

ವೇದಿಕೆಯಲ್ಲಿ ಪರಿಸರ ತಜ್ಞ ಸಂತೋಷ್ ಕೌಲಗಿ, ಸಾಹಿತಿ ಹರವು ದೇವೇಗೌಡ, ಪಾಂಡವಪುರ ತಾಲೂಕು ರೈತಸಂಘದ ಅಧ್ಯಕ್ಷ ವಿಜಯಕುಮಾರ್, ಪಂಚಾಯತ್ ರಾಜ್ ಇಲಾಖೆ ನಿವೃತ್ತ ಅಧಿಕಾರಿ ಎಂ.ಕೆ.ಕೆಂಪೇಗೌಡ, ದೃಶ್ಯಟ್ರಸ್ಟ್ ಗಿರೀಶ್, ಹಸಿರುಭೂಮಿ ಟ್ರಸ್ಟ್ ಜ್ಞಾನೇಶ್ ಭಾಗವಹಿಸಿದ್ದರು.

ಇದೇ ವೇಳೆ ನಿವೃತ್ತ ಪಂಚಾಯತ್ ಅಧಿಕಾರಿ ಎಂ.ಕೆ.ಕೆಂಪೇಗೌಡರಿಗೆ ರೈತ ನಾಯಕ ಕೆ.ಎಸ್‌.ಪುಟ್ಟಣ್ಣಯ್ಯ ಹೆಸರಿನಲ್ಲಿ ಹಸಿರು ಪುರಸ್ಕಾರ ನೀಡಿ ಗೌರವಿಸಲಾಯಿತು. ಮೊದಲದಿನ ಪೂರ್ಣಚಂದ್ರತೇಜಸ್ವಿ ಜೀವನಾಧಾರಿತ ನನ್ನ ತೇಜಸ್ವಿನಾಟಕ ಪ್ರದರ್ಶನಗೊಂಡಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮೇಲುಕೋಟೆ: ಶ್ರೀದೇವಿ ಭೂದೇವಿಯರಿಗೆ ನೂರ್ ತಡಾ ಉತ್ಸವ
ಪ್ರತಿಯೊಬ್ಬರೂ ಜೀವನದಲ್ಲಿ ಮಾನವೀಯ ಮೌಲ್ಯ ರೂಢಿಸಿಕೊಳ್ಳಬೇಕು: ಸುತ್ತೂರು ಶ್ರೀ