ಕನ್ನಡಪ್ರಭ ವಾರ್ತೆ ಮಂಡ್ಯ
ಗ್ರಾಮದಲ್ಲಿರುವ ಶ್ರೀಬಿಸಿಲು ಮಾರಮ್ಮ ದೇವಿಗೆ ಅದ್ಧೂರಿಯಾಗಿ ವಿವಿಧ ಹೂಗಳಿಂದ ಅಲಂಕಾರ ಮಾಡಿ, ಪೂಜಾ ಕೈಂಕರ್ಯ ನಡೆಸಿ, ದೇವರ ಬಸವಪ್ಪನಿಗೆ ಅಲಂಕಾರ ಮಾಡಿ ಪಂಜಿನ ಸೇವೆ ಮೂಲಕ ಪೂಜೆ ಮಾಡಲಾಯಿತು.
ಸುಮಾರು ೩೦ ಮೂಟೆ ಕಡ್ಲೆಪುರಿ ಸುರಿದು ರಾಶಿ ಮಾಡಿ, ರಾಶಿ ಪೂಜೆ ನೆರವೇರಿಸಲಾಯಿತು. ನೆರೆದಿದ್ದ ಭಕ್ತರು ಶ್ರೀಮಾದೇಶ್ವರ ಮತ್ತು ಶ್ರೀಮಾರಮ್ಮ ದೇವರುಗಳಿಗೆ ಘೊಷಣೆ ಕೂಗಿದರು. ನೆರೆದಿದ್ದ ಅಪಾರ ಸಂಖ್ಯೆಯ ಭಕ್ತ ಸಮೂಹಕ್ಕೆ ಪಂಚಾಮೃತ ವಿನಿಯೋಗದೊಂದಿಗೆ ಕಡ್ಲೆಪುರಿ ಪರಷೆ ನಡೆಸಿ, ವಿತರಣೆ ಮಾಡಲಾಯಿತು. ಹೊಸಹಳ್ಳಿ ಮತ್ತು ರಾಮನಹಳ್ಳಿ ಯಜಮಾನರು-ಗ್ರಾಮದ ಮುಖಂಡರು ಹಾಜರಿದ್ದರು.ನ.15, 16 ರಂದು ರಾಜ್ಯ ಮಟ್ಟದ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿ
ದಿ.ಡಿ.ಎಂ.ಮಂಜೇಗೌಡರ ಸ್ಮರಣಾರ್ಥ, ಕನ್ನಡ ರಾಜ್ಯೋತ್ಸವದ ಪ್ರಯುಕ್ತ ನ.15ಮತ್ತು 16 ರಂದು ತಾಲೂಕಿನ ದೊಡ್ಡರಸಿನಕೆರೆ ಗ್ರಾಮದಲ್ಲಿ 14ನೇ ವರ್ಷದ ರಾಜ್ಯ ಮಟ್ಟದ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿ ಆಯೋಜಿಸಲಾಗಿದೆ.
ಪಂದ್ಯಾವಳಿ ವಿಜೇತ ತಂಡಕ್ಕೆ ಪ್ರಥಮ ಬಹುಮಾನ 30 ಸಾವಿರ ರು. ನಗದು, ದ್ವಿತೀಯ 20 ಸಾವಿರ ರು., ತೃತೀಯ 10 ಸಾವಿರ ರು. ನಗದು ಹಾಗೂ ಸಮಾಧಾನಕರ ಬಹುಮಾನ 7.500 ರು. ನೀಡಲಾಗುವುದು.
ಪ್ರತಿ ತಂಡಗಳಿಗೆ ಊಟ-ವಸತಿ ವ್ಯವಸ್ಥೆ, ರಾತ್ರಿ ಬಂದ ತಂಡಗಳಿಗೆ ಮಾತ್ರ ಪ್ರವೇಶವಿದೆ. ಹೆಚ್ಚಿನ ಮಾಹಿತಿಗೆ ಮೊ-8123750342, ಮೊ-9035906040, ಮೊ-9916718066, ಮೊ-9886381010 ಸಂಪರ್ಕಿಸಬಹುದು.