₹150 ಕೋಟಿ ವೆಚ್ಚ, 3 ವರ್ಷಗಳಲ್ಲಿ ಸೇತುವೆ ಸಿದ್ಧ
ಇಲ್ಲಿನ ಕಾಳಿ ಸೇತುವೆಗೆ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಶಿಲಾನ್ಯಾಸ ನೆರವೇರಿಸಿ, ₹150 ಕೋಟಿ ವೆಚ್ಚದಲ್ಲಿ ಮೂರು ವರ್ಷಗಳೊಳಗೆ ಸೇತುವೆ ನಿರ್ಮಾಣವಾಗಲಿದೆ ಎಂದು ತಿಳಿಸಿದರು.
2024ರ ಆಗಸ್ಟ್ನಲ್ಲಿ ಸೇತುವೆ ಕುಸಿದಿತ್ತು. ನಂತರ ಕುಸಿದ ಸೇತುವೆಯ ಅವಶೇಷಗಳನ್ನು ದಾಖಲೆ ಅವಧಿಯಲ್ಲಿ ತೆರವುಗೊಳಿಸಿ ಈಗ ಹೊಸ ಸೇತುವೆ ನಿರ್ಮಾಣ ಕಾಮಗಾರಿ ಆರಂಭವಾಗಲಿದೆ ಎಂದು ತಿಳಿಸಿದರು.ಇದು ಶಿಷ್ಟಾಚಾರದ ಕಾರ್ಯಕ್ರಮ ಅಲ್ಲ. ಸೇತುವೆ ಸ್ಥಳ ವೀಕ್ಷಣೆಗೆ ಆಗಮಿಸಿದ ಸಂದರ್ಭದಲ್ಲಿ ಪೂಜೆ ನೆರವೇರಿಸಿದ್ದೇನೆ. ಸೇತುವೆ ನೂರಕ್ಕೆ ನೂರರಷ್ಟು ಕೇಂದ್ರ ಸರ್ಕಾರದ ಹಣದಿಂದ ಆಗುತ್ತಿದೆ. ಎಲ್ಲರನ್ನೂ ವಿಶ್ವಾಸಕ್ಕೆ ಪಡೆದು ಕಾಮಗಾರಿ ನಡೆಸುತ್ತೇವೆ. ಐಆರ್ಬಿ ಅಡಿಯಲ್ಲಿ ಪೋದ್ದಾರ ಇನ್ಫ್ರಾಸ್ಟ್ರಕ್ಚರ್ ಕಂಪನಿ ಸೇತುವೆ ನಿರ್ಮಿಸಲಿದೆ. 122 ಮೀ. ಉದ್ದದ ಈ ಸೇತುವೆಗೆ 6 ಕಂಬಗಳನ್ನು ಅಳಡಿಸಲಾಗುವುದು. ಒಂದೊಂದು ಕಂಬ 12 ಮೀಟರ್ ಅಗಲ ಇರಲಿದೆ ಎಂದು ವಿವರಿಸಿದರು.
ಪೋದ್ದಾರ್ ಕಂಪನಿಯ ವಿಜಯ ಮದನಕರ ಸೇತುವೆಯ ಬಗ್ಗೆ ಮಾಹಿತಿ ನೀಡಿದರು. ಬಿಜೆಪಿ ರಾಜ್ಯ ಉಪಾಧ್ಯಕ್ಷೆ, ಮಾಜಿ ಶಾಸಕಿ ರೂಪಾಲಿ ನಾಯ್ಕ, ನಗರಸಭೆ ಅಧ್ಯಕ್ಷ ರವಿರಾಜ ಅಂಕೋಲೆಕರ, ನಗರಸಭೆ ಸದಸ್ಯರು ಇದ್ದರು.ಶಿಷ್ಟಾಚಾರ ಪಾಲಿಸಲಾಗಿಲ್ಲ
ಕಾಮಗಾರಿ ಗುತ್ತಿಗೆ ಪಡೆದ ಕಂಪನಿ ಅಧಿಕಾರಿಗಳನ್ನೂ ತರಾಟೆಗೆ ತೆಗೆದುಕೊಂಡ ಸೈಲ್, ಒಂದು ಹಂತದಲ್ಲಿ ಶಿಲಾನ್ಯಾಸ ಮಾಡಿದನ್ನು ತೆಗೆಯುವುದಾಗಿ ಹೇಳಿದರು.