ಕನ್ನಡಪ್ರಭ ವಾರ್ತೆ ಕಲಬುರಗಿ
ನ್ಯಾಯ, ನೊಕರಿ ಕೊಡಿಸೋದಾಗಿ ನಂಬಿಸಿ ತನ್ನನ್ನು ರೇಪ್ ಮಾಡಿ, ಲೈಂಗಿಕವಾಗಿ ಬಳಸಿಕೊಂಡು, ಹನಿಟ್ರ್ಯಾಪ್ಗೂ ಬಳಸಿದ್ದಾರೆಂದು ಮುಂಬೈ ಮೂಲದ ಯುವತಿ ನೀಡಿದ್ದ ದೂರನ್ನಾಧರಿಸಿ ಪ್ರಕರಣ ದಾಖಲಿಸಿ ರಾಜು ಲೇಂಗಟಿ ಹಾಗೂ ಪ್ರಭು ಹಿರೇಮಠ ಇವರನ್ನ 2 ದಿನದ ಹಿಂದಷ್ಟೆ ಪೊಲೀಸರು ವಶಕ್ಕೆ ಪಡೆದಿದ್ದರು.
ಸೋಮವಾರ ಪ್ರಕರಣದಲ್ಲಿ ಪ್ರಮುಖವಾಗಿ ಹೆಸರು ಕೇಳಿ ಬಂದಿದ್ದ ದಲಿತ ಸೇನೆಯ ರಾಜ್ಯಾಧ್ಯಕ್ಷ ಹಣಮಂತ ಯಳಸಂಗಿ, ಅವರ ಸಹಚರರಾದ ಮಂಜುನಾಥ ಬಂಡಾರಿ, ಉದಯ ಖೇಣಿ, ಸೇರಿದಂತೆ 6 ಜನರನ್ನು ಸೆನ್ ಪೊಲೀಸರು ವಶಕ್ಕೆ ಪಡೆದಿದ್ದಾರೆ.ಮುಂಬೈ ಮೂಲದ ಯುವತಿ ತನ್ನನ್ನು ನಂಬಿಸಿ ಮೋಸ ಮಾಡಲಾಗಿದೆ, ಸಾಮಾಜಿಕ ಜಾಲತಾಣದಲ್ಲಿ ಸಂಪರ್ಕಕ್ಕೆ ಬಂದ ಈ ಗ್ಯಾಂಗ್ನ ಸದಸ್ಯರಲ್ಲಿ ಒಬ್ಬನಾದ ಪ್ರಭು ಹಿರೇಮಠ, ರಾಜು ಲೇಂಗಟಿ ಇವರಬ್ಬರು ಲೈಂಗಿಕವಾಗಿ ತನ್ನನ್ನು ಬಳಸಿಕೊಂಡಿದ್ದರು. ನಂತರ ವರ್ತಕರು, ಉದ್ದಿಮೆದಾರರನ್ನು ಹುಡುಕಿ ಹನಿಟ್ರ್ಯಾಪ್ಗೂ ತನ್ನನ್ನು ಬಳಸಿದ್ದಾರೆಂದು ದೂರಿದ್ದಳು.
ಇಂದು ಕಲಬುರಗಿಗೆ ಭೇಟಿ ನೀಡಿದ್ದ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆಯವರು ಹನಿಟ್ರ್ಯಾಪ್ ಕಲಬುರಗಿಗೆ ಕಪ್ಪು ಚುಕ್ಕೆ ಎಂದಿದ್ದರಲ್ಲದೆ ಇದರಲ್ಲಿ ಯಾರೇ ಒಳಗೊಂಡಿದ್ದರೂ ಕೂಡಾ ಅವರ ವಿರುದ್ಧ ಕಾನೂನು ರೀತ್ಯಾ ಕ್ರಮ ಗ್ಯಾರಂಟಿ ಎಂದು ಗುಡುಗಿದ್ದರು.
ಮಾತಲ್ಲೇ ತಮ್ಮ ವಿರೋಧಿಗಳ ಗುಂಪಿಗೆ ಟೀಕಿಸಿರುವ ಹಣಮಂತ ಯಳಸಂಗಿ ಬರೋ ದಿನಗಳಲ್ಲಿ ತಮ್ಮ ಮೇಲಿನ ಗುರುತರ ಆರೋಪಗಳನ್ನು ಮಾಡಿರುವ ಈ ಪ್ರಕರಣ ಬಿದ್ದು ಹೋಗಲಿದೆ. ತಾವು ಎಂದಿನಂತೆ ಸಮಾಜ ಸೇವೆಗೆ ಮರಳೋದಾಗಿಯೂ ಹಣಮಂತ ಯಳಸಂಗಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.