ಅಡೆತಡೆಗಳ ನಡುವೆಯೂ ಸಂಚಾರದ ಕೊಂಡಿಯಾಗಿದ್ದ ಕಾಳಿ ಸೇತುವೆ

KannadaprabhaNewsNetwork |  
Published : Aug 08, 2024, 01:34 AM IST
ಕಾಳಿ ಸೇತುವೆಯನ್ನು ಲೋಕೋಪಯೋಗಿ ಸಚಿವರಾಗಿದ್ದ ದೇವೇಗೌಡ ಅವರು 1984ರಲ್ಲಿ ಉದ್ಘಾಟಿಸಿದ್ದರು. | Kannada Prabha

ಸಾರಾಂಶ

ಕಾಳಿ ನದಿ ಸೇತುವೆಯನ್ನು 1984- 85ರಲ್ಲಿ ಲೋಕೋಪಯೋಗಿ ಸಚಿವರಾಗಿದ್ದ ಎಚ್.ಡಿ. ದೇವೇಗೌಡ ಉದ್ಘಾಟನೆ ನೆರವೇರಿಸಿದ್ದರು.

ಕಾರವಾರ: ಕಾಳಿ ನದಿ ಸೇತುವೆ ಶಿಲಾನ್ಯಾಸದಿಂದ ಹಿಡಿದು ಉದ್ಘಾಟನೆ ಹಾಗೂ ಈ ತನಕ ನಡೆದು ಬಂದ ದಾರಿ ಸುಗಮವೇನೂ ಅಲ್ಲ. ತೊಡಕುಗಳ ನಡುವೆಯೂ ವಾಹನಗಳು ಸಂಚರಿಸುತ್ತಿದ್ದ ಸೇತುವೆ ಈಗ ಕುಸಿದು ಬೀಳುವ ಮೂಲಕ ಬೆಚ್ಚಿ ಬೀಳಿಸಿದೆ. 1984- 85ರಲ್ಲಿ ಲೋಕೋಪಯೋಗಿ ಸಚಿವರಾಗಿದ್ದ ಎಚ್.ಡಿ. ದೇವೇಗೌಡ ಉದ್ಘಾಟನೆ ನೆರವೇರಿಸಿದ್ದರು. ರಾಜ್ಯ ಲೋಕೋಪಯೋಗಿ ಇಲಾಖೆಗೆ ಹೆದ್ದಾರಿ ವಿಭಾಗವು 1965ರಲ್ಲಿ ಈ ನಿರ್ಮಾಣ ಕೆಲಸ ವಹಿಸಿತ್ತು. ಆರಂಭದಲ್ಲಿ ₹1 ಕೋಟಿ ಟೆಂಡರ್‌ಗೆ ಗ್ಯಾನನ್ ಡಂಕರ್ಲಿ ಕಂಪನಿಗೆ ಕಾಮಗಾರಿ ವಹಿಸಲಾಗಿತ್ತು. ಸೇತುವೆ 1968ರ ಹೊತ್ತಿಗೆ ಪೂರ್ಣಗೊಳ್ಳಬೇಕಿತ್ತು. ಆದರೆ ಅಡಿಪಾಯದ ಕೆಲಸ ಪ್ರಾರಂಭವಾದಾಗ ಆರ್ಥಿಕ ಸಮಸ್ಯೆ ಎದುರಾಯಿತು. ನಂತರ ಉದನಿ ಎಂಜಿನಿಯರಿಂಗ್ ಕಂಪನಿ ಟೆಂಡರ್ ಪಡೆಯುವವರೆಗೆ 4 ವರ್ಷಗಳ ಕಾಲ ಕಾಮಗಾರಿ ಸ್ಥಗಿತಗೊಂಡಿತ್ತು.ಒಂದು ವರ್ಷದ ನಂತರ ಹೊಸದಾಗಿ ಟೆಂಡರ್‌ ಆಹ್ವಾನಿಸಿದಾಗ ಗ್ಯಾಮನ್ ಇಂಡಿಯಾ ಲಿಮಿಟೆಡ್ ಕಾಮಗಾರಿ ವಹಿಸಿಕೊಂಡು ₹1.4 ಕೋಟಿ ವೆಚ್ಚದಲ್ಲಿ ನಿರ್ಮಿಸಲು ಮುಂದೆ ಬಂದಿತ್ತು. ಗ್ಯಾಮನ್ 1975ರ ವೇಳೆಗೆ ಸೇತುವೆಯನ್ನು ಪೂರ್ಣಗೊಳಿಸಬೇಕಿತ್ತು. ಆದರೆ ಈ ಕಂಪನಿಯೂ ಆರ್ಥಿಕ ಹಾಗೂ ತಾಂತ್ರಿಕ ಸಮಸ್ಯೆಯಿಂದಾಗಿ 6 ವರ್ಷಗಳ ಅವದಿ ವಿಸ್ತರಣೆಯ ನಂತರವೂ ಸೇತುವೆ ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ.1982ರ ವೇಳೆಗೆ ಸೇತುವೆಯನ್ನು ಪೂರ್ಣಗೊಳಿಸಲು ರಾಷ್ಟ್ರೀಯ ಹೆದ್ದಾರಿಯ ಅಧಿಕಾರಿಗಳು ತೀರ್ಮಾನಿಸಿದರೂ, 665.5 ಮೀಟರ್ ಉದ್ದದ ಸೇತುವೆ ನಿರ್ಮಾಣಕ್ಕೆ ಅಡಿಪಾಯ ಹಾಕುವುದು ಸಮಸ್ಯೆಯಾಗಿತ್ತು. 80 ಅಡಿಗಳಷ್ಟು ಆಳಕ್ಕೆ ಬೆಡ್ ಹಾಕಲು ಒಪನ್‌- ಗ್ರಾಬಿಂಗ್ ವಿಧಾನ ಅಳವಡಿಸಲಾಯಿತು. ನಂತರ ನ್ಯೂಮ್ಯಾಟಿಕ್ ಸಿಂಕಿಂಗ್ ವಿಧಾನಕ್ಕೆ ಸೇತುವೆ ನಿರ್ಮಾಣ ಕಾರ್ಯ ಬದಲಾಯಿತು. ಈ ಕಾಮಗಾರಿ ವೇಳೆ ಅಂದು ಏಳು ಕಾರ್ಮಿಕರು ಪ್ರಾಣ ಕಳೆದುಕೊಂಡಿದ್ದರು.

ಬಳಿಕ ಸಂಸ್ಥೆಯು ಹೆಚ್ಚುವರಿ ₹1.25 ಕೋಟಿಗೆ ಬೇಡಿಕೆಯಿಟ್ಟಿದ್ದು, ರಾಜ್ಯ ಸರ್ಕಾರ ಕೂಡಾ ಬೇಡಿಕೆಯನ್ನು ಪರಿಗಣಿಸಿತ್ತು. ಕೊನೆಗೂ ಈ ಸೇತುವೆ 1984- 85ರಲ್ಲಿ ಪೂರ್ಣಗೊಂಡು ಸಂಚಾರಕ್ಕೆ ತೆರೆದುಕೊಂಡಿತ್ತು.ಸೇತುವೆ ಉದ್ಘಾಟನೆಯಾದ ಬಳಿಕ ದುರಸ್ತಿ ಕಾರ್ಯ ನಡೆಸಬೇಕಾಯಿತು. ನಂತರ 2009ರಲ್ಲಿ ಸೇತುವೆಯಲ್ಲಿ ವಾಹನ ಸಂಚಾರ ಸ್ಥಗಿತಗೊಳಿಸಿ ಬೇರಿಂಗ್ ಅಳವಡಿಕೆ ಕಾರ್ಯ ನಡೆಯಿತು. ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ 10 ವರ್ಷಗಳ ಹಿಂದೆ ಈ ಸೇತುವೆ ವಹಿಸಿಕೊಳ್ಳುವಾಗ ಮತ್ತೆ ದುರಸ್ತಿ ಮಾಡಿತ್ತು. ಕೊನೆಗೂ ಸೇತುವೆ ಈಗ ನೀರುಪಾಲಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಮಲಾಕರ ಭಟ್‌ಗೆ ಸುಚಿತ್ರಾಳಿಂದ ಹನಿಟ್ರ್ಯಾಪ್‌! - ಖಾಸಗಿ ಕ್ಷಣಗಳ ವಿಡಿಯೋ ಮಾಡಿ ಬ್ಲ್ಯಾಕ್‌ ಮೇಲ್‌
ರಾಜಧಾನಿಯಲ್ಲಿ ಡ್ರಗ್ಸ್ ಬೇಟೆ : ಸಾವಿರ ವ್ಯಸನಿಗಳ ಸೆರೆ