ಹಳಿಯಾಳ-ದಾಂಡೇಲಿ ಕುಡಿಯುವ ನೀರು, ಬಹುಗ್ರಾಮ ಕುಡಿಯುವ ನೀರು ಯೋಜನೆ ಅಂತಿಮ ಹಂತಕ್ಕೆಕನ್ನಡಪ್ರಭ ವಾರ್ತೆ ಹಳಿಯಾಳ
ಸೋಮವಾರ ಪಟ್ಟಣದ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಹಳಿಯಾಳ ವಿಧಾನಸಭಾ ಕ್ಷೇತ್ರಕ್ಕೆ ಮಂಜೂರಾಗಿರುವ ಕಾಮಗಾರಿಗಳು, ಲೋಕಾರ್ಪಣೆಗೆ ಸಿದ್ಧವಾಗಿರುವ ಕುಡಿಯುವ ನೀರಿನ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.
ಕಾಳಿನದಿ ನೀರಾವರಿ ಯೋಜನೆ:ಕಾಳಿನದಿ ನೀರಾವರಿ ಯೋಜನೆ ಯಾವತ್ತೋ ಆರಂಭವಾಗಬೇಕಾಗಿತ್ತು ಎಂದ ದೇಶಪಾಂಡೆ, ಯೋಜನೆಯ ಅನುಷ್ಠಾನದಲ್ಲಿ ಎದುರಾದ ಆಡಳಿತಾತ್ಮಕ ತೊಡಕುಗಳು, ಲಾಕ್ ಡೌನ್ ಸೇರಿದಂತೆ ಇತರ ಕಾರಣಗಳಿಂದ ಯೋಜನೆ ಕಾಮಗಾರಿ ನಿರೀಕ್ಷಿತ ಪ್ರಮಾಣದಲ್ಲಿ ನಡೆಯದಿರುವುದನ್ನು ಕಂಡು ಬೆಂಗಳೂರು ಮತ್ತು ಬೆಳಗಾವಿಯಲ್ಲಿ ಉನ್ನತ ಮಟ್ಟದ ಅಧಿಕಾರಿಗಳ ಸಭೆ ನಡೆಸಿ ಈ ಯೋಜನೆಯ ಗುತ್ತಿಗೆದಾರರ ಹಾಗೂ ಅಧಿಕಾರಿಗಳ ಬೆನ್ನ ಹಿಂದೇ ನಾನು ಬಿದ್ದ ಪರಿಣಾಮ ಯೋಜನೆಯ ಕಾಮಗಾರಿ ಅಂತಿಮ ಹಂತಕ್ಕೆ ತಲುಪಿದೆ ಎಂದರು. ₹ 220 ಕೋಟಿ ವೆಚ್ಚದ ಈ ಯೋಜನೆಯಡಿಯಲ್ಲಿ 46 ಕೆರೆಗಳನ್ನು, 19 ಬಾಂದಾರು ತುಂಬಿಸಿ 7 ಸಾವಿರ ಹೆಕ್ಟರ್ (18 ಸಾವಿರ ಎಕರೆ) ಕೃಷಿ ಭೂಮಿಗೆ ನೀರಾವರಿಯ ಸೌಲಭ್ಯ ದೊರೆಯಲಿದೆ ಎಂದರು.
₹116 ಕೋಟಿ ವೆಚ್ಚದ ಈ ಯೋಜನೆಯಲ್ಲಿ 113 ಗ್ರಾಮಗಳಿಗೆ ದಾಂಡೇಲಿಯ ಕಾಳಿನದಿಯಿಂದ ಕುಡಿಯುವ ನೀರನ್ನು ಪೂರೈಸಲಾಗುವ ಬಹುಗ್ರಾಮ ಯೋಜನೆ ಕಾಮಗಾರಿಯು ಅಂತೀಮ ಹಂತಕ್ಕೆ ತಲುಪಿದೆ. ಅಮೃತ ಯೋಜನೆಯಲ್ಲಿ ಹಳಿಯಾಳ ಪಟ್ಟಣಕ್ಕೆ ₹59.31 ಕೋಟಿ ಹಾಗೂ ದಾಂಡೇಲಿ ನಗರಕ್ಕೆ ₹60.90 ಕೋಟಿ ವೆಚ್ಚದ ಕಾಳಿನದಿಯಿಂದ ನಿರಂತರ ಕುಡಿಯುವ ನೀರು ಪೂರೈಸುವ ಯೋಜನೆಯ ಕಾಮಗಾರಿ ಪ್ರಗತಿಯಲ್ಲಿದ್ದು, ಮುಂದಿನ ವರ್ಷ ಯೋಜನೆ ಕಾರ್ಯಾರಂಭಿಸಲಿದೆ ಎಂದರು.ಜೋಯಿಡಾಕ್ಕೆ 3 ಸೇತುವೆ:
ಕಾವಲವಾಡ ಗ್ರಾಮಸ್ಥರ ಬೇಡಿಕೆಯಂತೆ ಸರ್ಕಾರಿ ಉರ್ದುಶಾಲೆಯನ್ನು 9ನೇ ತರಗತಿಯವರೆಗೆ ವಿಸ್ತರಿಸಿ, ಪ್ರೌಢಶಾಲೆಯನ್ನಾಗಿ ಉನ್ನತಿಕರಿಸಲು ಸರ್ಕಾರ ಮಂಜೂರಾತಿ ನೀಡಿದೆ. ಮುಖ್ಯಮಂತ್ರಿಗಳ ಆರೋಗ್ಯ ಸಹಾಯ ಪರಿಹಾರ ನಿಧಿಯಲ್ಲಿ ಅನುದಾನ ಬಿಡುಗಡೆಯಾಗಿದೆ ಎಂದರು.ಶೀಘ್ರ ರೈಲು ಸಂಚಾರ ಪುನರಾರಂಭ:
ಅಗತ್ಯವಾದ ಪ್ರಮಾಣದಲ್ಲಿ ಪ್ರಯಾಣಿಕರ ಲಭ್ಯವಾಗದೇ ಇರುವುದರಿಂದ ಅಳ್ನಾವರ-ದಾಂಡೇಲಿ ರೈಲು ಸಂಚಾರ ಸ್ಥಗಿತಗೊಂಡಿತು ಮತ್ತೇ ಹೀಗಾಗದಂತೆ ಸಾರ್ವಜನಿಕರು ನೋಡಿಕೊಳ್ಳಬೇಕು ಎಂದರು.