ಕನ್ನಡ ಪ್ರಭ ವಾರ್ತೆ ಕಮಲಾಪುರ
ತಾಲೂಕಿನ ಲಾಡಮುಗಳಿ, ಲೆಂಗಟಿ, ವಿಕೆ ಸಲಗರ ಮುದಡಗಾ ಸೆರಿದಂತೆ ಭಾರಿ ಮಳೆಯಾಗಿದೆ. ಕಾರಣ ರೈತರು ಹೊಲಗಳಿಗೆ ಹೋಗುವ ರಸ್ತೆ ಸಂಪೂರ್ಣ ಕೊಚ್ಚಿಹೊಗಿ ಅಪಾರ ಪ್ರಮಾಣದ ರಸ್ತೆಗಳು, ಮೂಲ ಸವಲತ್ತಿನ ಯೋಜನೆಗಳಿಗೆ ಹಾನಿಯಾಗಿದೆ.
ಶಾಸಕ ಬಸವರಾಜ ಮತ್ತಿಮಡು ಮಳೆಯಿಂದ ಹಾನಿಪೀಡಿತ ಪ್ರದೇಶಗಳಲ್ಲಿ ಗುರುವಾರ ದಿನವಿಡೀ ಸುತ್ತಾಡಿ ಪರಿಸ್ಥಿತಿ ಅವಲೋಕನ ನಡೆಸಿದ್ದರು.ರೈತರು, ಸಾರ್ವಜನಿಕರ ಜೊತೆಗೆ ಅವಲೋಕಚಿಸಿ ಹನಿ ಮಾಹಿತಿ ಪಡೆದರು.ಸಂಕಷ್ಟ ಕೊಳಗಾದ ರೈತರಿಗೆ ಸಾಂತ್ವನ ಹೇಳಿ ಧೈರ್ಯ ತುಂಬಿದ್ದರು. ಯಾವುದೇ ಕಾರಣಕ್ಕೂ ಯಾರೂ ಕೂಡ ಚಿಂತಿಸುವ ಅಗತ್ಯವಿಲ್ಲ. ನಿಮ್ಮ ಜೊತೆಗೆ ನಾನಿದ್ದೇನೆ ಎಂದು ಅಭಯ ನೀಡಿದ್ದರು. ದಾಖಲೆ ಮಳೆಯಿಂದ ಅಪಾರ ನಷ್ಟವಾದ ರೈತರು . ಸಾರ್ವಜನಿಕರು ಸಂಕಷ್ಟಕ್ಕೆಸಿಲುಕಿದ್ದಾರೆ.
ಈ ಮಧ್ಯೆ ಸಹಾಯಕ ಆಯುಕ್ತರು, ಉಪ ಕೃಷಿ ಅಧಿಕಾರಿ ಪಾರ್ವತಿ, ಹಾಗೂ ಸಹಾಯಕ ಕೃಷಿ ಅಧಿಕಾರಿ ಚಂದ್ರಕಾಂತ್ ಜಿವಣಗಿ, ಅವರು ಸಹ ವಿವಿಧಡೆ ಹನಿ ಪೀಡಿತ ಪ್ರದೇಶಗಳಿಗೆ ತೆರಳಿ ಸ್ಥಿತಿ ಪರಿಶೀಲಿಸಿದರು.
ಹಾನಿ ಕುರಿತು ಅಧಿಕಾರಿಗಳಿಂದ ಸಮಗ್ರ ಮಾಹಿತಿ ಪಡೆದು ಶೀಘ್ರದಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು. ಸಂತ್ರಸ್ತರಿಗೆ ಸೂಕ್ತ ಪರಿಹಾರ ನ್ಯಾಯ ಒದಗಿಸಲು ಪ್ರಯತ್ನಿಸುವುದಾಗಿ ಭರವಸೆ ನೀಡಿದರು.ಗ್ರಾಮೀಣ ಮಂಡಲ ಅಧ್ಯಕ್ಷ ಗಂಗಪ್ಪ ಗೌಡ, ಸತೀಶ್ ಸಿರೋಡೆ, ಹಣಮಂತ ಮಾಲಜಿ,ಶಿವರಾಜ ಮಾಲ್ಲಿ ಪಾಟೀಲ್, ಸತಿಶ್ ಪೂಜಾರಿ, ಬಾಬುರಾವ್ ಧಾಮ, ವಿನಯ್ ಮಠಪತಿ,ರಾಜು ಪೂಲೀಸ್ ಪಾಟೀಲ್ ಗ್ರಾಮಸ್ಥರು ಇದ್ದರು.