ರಾಜಕಾಲುವೆ ಮೇಲಿದ್ದ ಕಮರಿಪೇಟೆ ಠಾಣೆ ಸ್ಥಳಾಂತರ

KannadaprabhaNewsNetwork |  
Published : May 27, 2025, 02:20 AM IST
ಸ್ಥಳಾಂತರ | Kannada Prabha

ಸಾರಾಂಶ

ರಾಜಕಾಲುವೆ ಮೇಲೆ ಕಮರಿಪೇಟೆ ಠಾಣೆಯನ್ನು ಸ್ಥಾಪಿಸಲಾಗಿತ್ತು. ಇದರಿಂದಾಗಿ ಪ್ರತಿವರ್ಷ ಮಳೆಗಾಲದಲ್ಲಿ ಹೂಳುತುಂಬಿ ನೀರು ಹರಿಯದೇ ಸಾಕಷ್ಟು ಆವಾಂತರಗಳು ಸೃಷ್ಟಿಯಾಗುತ್ತಿತ್ತು. ಇದನ್ನು ಸ್ಥಳಾಂತರಿಸಬೇಕೆಂಬ ಒತ್ತಾಯ ಬಹುದಿನಗಳಿಂದ ಇತ್ತು. ಈ ಕಟ್ಟಡ ಶಿಥಿಲಗೊಂಡಿದೆ. ಸ್ಥಳಾಂತರ ಮಾಡುವುದು ಸೂಕ್ತ ಎಂದು ಸಂಬಂಧಪಟ್ಟ ಎಂಜಿನಿಯರ್‌ಗಳ ತಂಡವೂ ಪರಿಶೀಲನೆ ನಡೆಸಿ ಸಲಹೆ ನೀಡಿತ್ತು.

ಹುಬ್ಬಳ್ಳಿ: ರಾಜಕಾಲುವೆ ಮೇಲಿದ್ದ ಇಲ್ಲಿನ ಕಮರಿಪೇಟೆ ಠಾಣೆಯನ್ನು ಕೊನೆಗೂ ಸ್ಥಳಾಂತರ ಮಾಡಲಾಗಿದೆ. ಇಲ್ಲಿನ ಭಾರತ್ ಸರ್ಕಲ್ ಬಳಿ ಇರುವ ನೂತನ ಕಟ್ಟಡಕ್ಕೆ ಠಾಣೆಯನ್ನು ಸೋಮವಾರ ಸ್ಥಳಾಂತರ ಮಾಡಿ ಲೋಕಾರ್ಪಣೆ ಮಾಡಲಾಗಿದೆ.

ರಾಜಕಾಲುವೆ ಮೇಲೆ ಕಮರಿಪೇಟೆ ಠಾಣೆಯನ್ನು ಸ್ಥಾಪಿಸಲಾಗಿತ್ತು. ಇದರಿಂದಾಗಿ ಪ್ರತಿವರ್ಷ ಮಳೆಗಾಲದಲ್ಲಿ ಹೂಳುತುಂಬಿ ನೀರು ಹರಿಯದೇ ಸಾಕಷ್ಟು ಆವಾಂತರಗಳು ಸೃಷ್ಟಿಯಾಗುತ್ತಿತ್ತು. ಇದನ್ನು ಸ್ಥಳಾಂತರಿಸಬೇಕೆಂಬ ಒತ್ತಾಯ ಬಹುದಿನಗಳಿಂದ ಇತ್ತು. ಈ ಕಟ್ಟಡ ಶಿಥಿಲಗೊಂಡಿದೆ. ಸ್ಥಳಾಂತರ ಮಾಡುವುದು ಸೂಕ್ತ ಎಂದು ಸಂಬಂಧಪಟ್ಟ ಎಂಜಿನಿಯರ್‌ಗಳ ತಂಡವೂ ಪರಿಶೀಲನೆ ನಡೆಸಿ ಸಲಹೆ ನೀಡಿತ್ತು. ಕಳೆದ ವರ್ಷವೇ ಸ್ಥಳಾಂತರ ಮಾಡಲಾಗುವುದು ಎಂದು ಪಾಲಿಕೆ ತಿಳಿಸಿ ಕಮಿಷನರೇಟ್‌ಗೂ ಪತ್ರ ಬರೆದಿತ್ತು. ಅದರಂತೆ ಇದೀಗ ಸ್ಥಳಾಂತರ ಮಾಡಲಾಗಿದೆ.

ಸ್ಥಳಾಂತರ ಮಾಡಿದ ಕಟ್ಟಡದಲ್ಲಿ ಪೊಲೀಸ್‌ ಠಾಣೆಯ ಉದ್ಘಾಟನೆಯನ್ನು ಶಾಸಕ ಪ್ರಸಾದ ಅಬ್ಬಯ್ಯ ನೆರವೇರಿಸಿದರು. ಈ ವೇಳೆ ಮಾತನಾಡಿದ ಅವರು, ಠಾಣೆಯನ್ನು ಸ್ಥಳಾಂತರಿಸುವ ಸಂಭವಿಸಬಹುದಾದ ಮಳೆ ಅವಾಂತರವನ್ನು ನಿಯಂತ್ರಣ ಮಾಡಿದಂತಾಗಿದೆ. ಕಮರಿಪೇಟೆ ಪೊಲೀಸ್‌ಠಾಣೆಯನ್ನು ಸ್ಥಳಾಂತರಿಸಲಾಗಿದೆ. ಇದಕ್ಕೆ ಹೊಂದಿಕೊಂಡೇ ಇರುವ ಪಾಲಿಕೆ ಸ್ವತ್ತುಗಳ ಲೀಸ್ ಅವಧಿಯೂ ಮುಕ್ತಾಯವಾಗಿದ್ದು, ಕೂಡಲೇ ಸ್ವತ್ತುಗಳನ್ನು ಪಾಲಿಕೆ ಸುಪರ್ಧಿಗೆ ಪಡೆದು ಪೊಲೀಸ್‌ಠಾಣೆ ಉನ್ನತಿಕರಣಕ್ಕೆ ಕ್ರಮ ವಹಿಸಲಾಗುವುದು ಎಂದು ಶಾಸಕರು ಹೇಳಿದರು.

ನೂತನ ಠಾಣೆಯಲ್ಲಿ ಪೂಜೆ ಮಾಡುವ ಮೂಲಕ ಸ್ಥಳಾಂತರ ಮಾಡಲಾಯಿತು. ಈ ಸಂದರ್ಭದಲ್ಲಿ ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್, ಸೈಬರ್ ಠಾಣೆ ಎಸಿಪಿ ಶಿವರಾಜ್ ಕಟಕಬಾವಿ, ಕಮರಿಪೇಟೆ ಇನ್ಸಪೆಕ್ಟರ್ ಮಹಾಂತೇಶ ಹೂಲಿ, ಪಾಲಿಕೆ ಅಧೀಕ್ಷಕ ಅಭಿಯಂತರ ವಿಜಯ್‌ಕುಮಾರ್, ಘನತಾಜ್ಯ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರ ಸಂತೋಷ ಯರಂಗಳ್ಳಿ ಸೇರಿದಂತೆ ಅನೇಕರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಲ್ಲಮಾವಟಿ ಭಗವತಿ ದೇವಸ್ಥಾನದಲ್ಲಿ ಶಡಾಧರ ಪೂಜಾ ಸಂಪನ್ನ
ಕಡಿಮೆ ಬೆಳೆ ವಿಮಾ ಮೊತ್ತ ಸರಿಪಡಿಸಿ ಮರು ಪಾವತಿಗೆ ಆಗ್ರಹ