ಅಗ್ನಿ ಅವಘಡಕ್ಕೆ ಬಲಿಯಾದ ಕಂಬಳದ ಕಣ್ಮಣಿಗಳು

KannadaprabhaNewsNetwork |  
Published : Jun 01, 2025, 01:43 AM IST
ಥೊನ್ಸೆ ಮತ್ತು ಅಪ್ಪು  | Kannada Prabha

ಸಾರಾಂಶ

ಬೇಲಾಡಿಬಾವ ಅಶೋಕ್‌ ಶೆಟ್ಟಿ ಅವರ ಕನಹಲಗೆ ವಿಭಾಗದಲ್ಲಿ ಗುರುತಿಸಿಕೊಂಡಿದ್ದ ಥೋನ್ಸೆ ಮತ್ತು ಅಪ್ಪು ಮೃತಪಟ್ಟ ಕೋಣಗಳು. ಈ ಘಟನೆ ಕರಾವಳಿಯ ಕಂಬಳ ಅಭಿಮಾನಿಗಳಲ್ಲಿ ಆಘಾತ ಉಂಟುಮಾಡಿದೆ.

2022-23ರ ಕನೆಹಲಗೆ ವಿಭಾಗದ ಚಾಂಪಿಯನ್‌ ಅಪ್ಪು-ಥೋನ್ಸೆ ಸಾವುಕನ್ನಡಪ್ರಭ ವಾರ್ತೆ ಕಾರ್ಕಳ

ಕಾರ್ಕಳ ತಾಲೂಕಿನ ಕಾಂತಾವರ ಗ್ರಾಮದ ಬೇಲಾಡಿ ಬಾವ ಎಂಬಲ್ಲಿ ಶುಕ್ರವಾರ ರಾತ್ರಿ ಅಗ್ನಿಅವಘಡ ಸಂಭವಿಸಿ ಎರಡು ಕಂಬಳದ ಕೋಣಗಳು ಮೃತಪಟ್ಟ ಘಟನೆ ನಡೆದಿದೆ.

ಬೇಲಾಡಿಬಾವ ಅಶೋಕ್‌ ಶೆಟ್ಟಿ ಅವರ ಕನಹಲಗೆ ವಿಭಾಗದಲ್ಲಿ ಗುರುತಿಸಿಕೊಂಡಿದ್ದ ಥೋನ್ಸೆ ಮತ್ತು ಅಪ್ಪು ಮೃತಪಟ್ಟ ಕೋಣಗಳು. ಈ ಘಟನೆ ಕರಾವಳಿಯ ಕಂಬಳ ಅಭಿಮಾನಿಗಳಲ್ಲಿ ಆಘಾತ ಉಂಟುಮಾಡಿದೆ.ಶುಕ್ರವಾರ ರಾತ್ರಿ ಶಾರ್ಟ್ ಸರ್ಕ್ಯೂಟ್‌ನಿಂದ ಹಟ್ಟಿಗೆ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡು, ಅದರಿಂದ ಹಟ್ಟಿಗೆ ಹೊಂದಿದ್ದ ಭತ್ತದ ಬಣವೆಗೂ ಬೆಂಕಿ ಹರಡಿತು. ಈ ವೇಳೆ ಉಂಟಾದ ಬೆಂಕಿಯ ಕೆನ್ನಾಲಿಗೆಯು ಹಟ್ಟಿಯಲ್ಲಿ ಕಟ್ಟಿಹಾಕಿದ್ದ ಕಂಬಳದ ಕೋಣಗಳನ್ನು ಆಹುತಿ ತೆಗೆದುಕೊಂಡಿದೆ. ಕಂಬಳ ಪ್ರಿಯರು ಈ ಘಟನೆಯ ಬಗ್ಗೆ ಕಂಬನಿ ಮಿಡಿದಿದ್ದಾರೆ.

ಅಪ್ಪು-ಥೋನ್ಸೆ ಜೋಡಿಯು ಕನಹಲಗೆ ವಿಭಾಗದಲ್ಲಿ ಪ್ರಾದೇಶಿಕ ಹಾಗೂ ಜಿಲ್ಲಾಮಟ್ಟದ ಕಂಬಳಗಳಲ್ಲಿ ಹಲವು ಪ್ರಶಸ್ತಿ ಜಯಿಸಿದೆ.--------------

ಥೋನ್ಸೆ ಮತ್ತು ಅಪ್ಪು ನಮ್ಮ ಕುಟುಂಬದ ಭಾಗವಾಗಿದ್ದರು. ಇಂತಹ ಘಟನೆ ಸಂಭವಿಸುತ್ತದೆ ಎಂದು ಕನಸಲ್ಲೂ ಅಂದುಕೊಂಡಿರಲಿಲ್ಲ.

। ಅಶೋಕ್ ಶೆಟ್ಟಿ, ಕೋಣಗಳ ಮಾಲಿಕ

------------------------

ಕಂಬಳ ಕೋಣಗಳ ಸಾಧನೆಗಳ ವಿವರ:ಥೋನ್ಸೆ ಮತ್ತು ಅಪ್ಪು ಕೋಣಗಳು 2022-23ರ ಕನೆಹಲಗೆ ವಿಭಾಗದ ಕಂಬಳ ಸ್ಪರ್ಧೆಯಲ್ಲಿ ಚಾಂಪಿಯನ್ ಪಟ್ಟವನ್ನು ಪಡೆದುಕೊಂಡಿದ್ದವು. ಥೋನ್ಸೆ ನಂತರದ 2023–24ರ ಋತುವಿನಲ್ಲಿ ನಿವೃತ್ತಿ ಹೊಂದಿತ್ತು. ಈ ಕೋಣವನ್ನು ಅಲೆವೂರಿನಿಂದ ತರಲಾಗಿತ್ತು.ಅಪ್ಪು ಕೋಣ ಅಡ್ಡಹಲಗೆ, ಕನೆಗಲಗೆ ಸೇರಿದಂತೆ ಹಲವಾರು ಸ್ಪರ್ಧೆಗಳಲ್ಲಿ ಬಹುಮಾನಗಳನ್ನು ಪಡೆದುಕೊಂಡಿತ್ತು. ಕೊಣಚೂರು, ಕೊಂಡೊಟ್ಟು, ಚೆನ್ನನೊಟ್ಟಿಗೆ ಹಗ್ಗ ಹಿರಿಯ ವಿಭಾಗಗಳಲ್ಲಿ ಈ ಕೋಣ ಗಮನ ಸೆಳೆಯುತ್ತಾ ಬಂದಿತ್ತು. ಅಶೋಕ್ ಶೆಟ್ಟಿಯವರ ಕೋಣಗಳು ಒಟ್ಟಾರೆ ನೂರಕ್ಕೂ ಹೆಚ್ಚು ಪ್ರಶಸ್ತಿಗಳನ್ನು ತಮ್ಮ ಹೆಸರಿನಲ್ಲಿ ದಾಖಲಿಸಿದ್ದವು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!