-ಸನ್ನತಿ ಬೌದ್ಧ ಕೇಂದ್ರದ ಸಾಂಸ್ಕೃತಿಕ ಆಯಾಮಗಳು ಕುರಿತು ಒಂದು ದಿನದ ರಾಜ್ಯ ಮಟ್ಟದ ವಿಚಾರ ಸಂಕಿರಣ
ಕನ್ನಡಪ್ರಭ ವಾರ್ತೆ ಕಲಬುರಗಿ
ಭಾರತ ದೇಶದಲ್ಲಿಯೇ ಕನಗನಹಳ್ಳಿ ಸನ್ನತಿ ವಿಶಿಷ್ಟ ಬೌದ್ಧ ಕೇಂದ್ರ. ಬೌದ್ಧ ಮಹಾ ಸ್ತೂಫಗಳು ಮತ್ತು ಶಾಸನಗಳು ಬುದ್ಧನ ಜೀವನದ ಐತಿಹಾಸಿಕ ಪರಂಪರೆ ಹೇಳುತ್ತವೆ. ಕುರುಹುಗಳು ನಮ್ಮೆಲ್ಲರಿಗೂ ಮುಂದಿನ ಭವಿಷ್ಯದ ಬಗ್ಗೆ ಭರವಸೆ ಮೂಡಿಸುತ್ತವೆ ಎಂದು ಮೈಸೂರಿನ ಹಿರಿಯ ಪುರಾತತ್ತ್ವಶಾಸ್ತ್ರಜ್ಞ ಡಾ. ಎಂ.ಎಸ್. ಕೃಷ್ಣಮೂರ್ತಿ ಅಭಿಪ್ರಾಯಪಟ್ಟರು.ನಳಂದ ವಿಹಾರದ ಪಾಲಿ ಇನ್ಸ್ಟಿಟ್ಯೂಟ್ ಹಾಗೂ ಗುಲಬರ್ಗ ವಿವಿ ಪಾಲಿ ಮತ್ತು ಬೌದ್ಧ ಅಧ್ಯಯನ ಸಂಸ್ಥೆ ಸಹಯೋಗದಲ್ಲಿ ಹರಿಹರ ಸಭಾಂಗಣದಲ್ಲಿ ''''''''ಸನ್ನತಿ (ಕನಗನಹಳ್ಳಿ) ಬೌದ್ಧ ಕೇಂದ್ರದ ಸಾಂಸ್ಕೃತಿಕ ಆಯಾಮಗಳು'''''''' ಕುರಿತು ಒಂದು ದಿನದ ರಾಜ್ಯ ಮಟ್ಟದ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿ 1954 ರಲ್ಲಿ ಕಪಟರಾಳ ಕೃಷ್ಣರಾವ್ ಅವರು ಸನ್ನತಿಯ ಮಹತ್ವ ದಾಖಲೆ ಶೋಧಿಸಿ ಅವುಗಳ ಮಹತ್ವ ದಾಖಲಿಸಿದ್ದಾರೆ. ಅಲ್ಲಿನ ಅಪರೂಪದ ವಸ್ತುಗಳು, ಶಿಲ್ಪಗಳು, ಭೌತಿಕ ಅವಶೇಷ, ಪುರಾವೆ ಬುದ್ಧನ ಜೀವನ ಮತ್ತು ಸಾಧನೆ ಹೇಳುತ್ತವೆ. ‘ಕರ್ನಾಟಕದಲ್ಲಿ ಬೌದ್ಧ ಸಂಸ್ಕೃತಿ ಯೋಜನೆಗೆ ಸನ್ನತಿ ಭೇಟಿ ವೇಳೆ ಸಿಕ್ಕ ಪಳಿಯುಳಿಕೆಗಳಲ್ಲಿ ಮಹತ್ವದ ಅಂಶಗಳು ದೊರಕಿವೆ ಎಂದರು.
ಸನ್ನತಿಯ ಶಿಲೆಗಳ ಮೇಲೆ ‘ರಾಯ ಅಶೋಕೋ’ ಎಂಬ ವಾಕ್ಯವಿದೆ. ಬಹುಶಃ ಅಶೋಕ ಸನ್ನತಿಗೆ ಬಂದಿರಬಹುದೆಂಬ ಗೋಚರವಿದೆ. ಮೊದಲು ಹೀನಯಾನ ಸಂಸ್ಕೃತಿ, ಅನಂತರ ಮಹಾಯಾನ ಪಂಥ ಬೆಳೆದಿದೆ. ಅದು ಯಾವಾಗ ಬದಲಾಯಿತು ಎಂಬುದಕ್ಕೂ ಸಹ ಕುರುಹುಗಳು ಪತ್ತೆಯಾಗಿವೆ. ಬುದ್ಧನ ಹುಟ್ಟು, ಧ್ಯಾನ, ಶಾಂತಿ ಮಾರ್ಗ, ಪರಿನಿರ್ವಾಣ, ಧರ್ಮಚಕ್ರದ ನಿರೂಪಣೆ, ಅಶೋಕನ ಬೌದ್ಧಧರ್ಮ ಪ್ರಚಾರ, ಬ್ರಾಹ್ಮಿಲಿಪಿ ಮತ್ತಿ ಪಾಲಿ ಭಾಷೆಯಲ್ಲಿ ದಾಖಲಿರುವ ಬುದ್ಧನ ಜೀವನ ಚರಿತ್ರೆಯ ಅವಶೇಷಗಳ ಮತ್ತು ಕುರುಹುಗಳ ಸಂಗತಿಗಳನ್ನು ಛಾಯಾಚಿತ್ರಗಳನ್ನು ಪ್ರದರ್ಶಿಸಿ ಬೆಳಕು ಚೆಲ್ಲಿದರು. ಪುರಾತತ್ವ ಇಲಾಖೆ ಉತ್ಖನನದಿಂದ ಸಂಗ್ರಹಿಸಿ ಪ್ರಕಟಿಸಿದ ಮಾಹಿತಿ ವಿವರಿಸಿದರು.ಗುವಿವಿ ಪ್ರೊ. ಶಶಿಕಾಂತ ಎಸ್. ಉಡಿಕೇರಿ ಮಾತನಾಡಿ, ಸನ್ನತಿ ಕೇಂದ್ರ ವಿಶ್ವದಲ್ಲಿಯೇ ಅತಿ ಹೆಚ್ಚಾಗಿ ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಈ ಕ್ಷೇತ್ರದ ಬಗ್ಗೆ ಹೆಚ್ಚು ಅಧ್ಯಯನ ಮತ್ತು ಸಂಶೋಧನೆಗಳು ಬೆಳಕು ಚೆಲ್ಲಬೇಕಿದೆ ಎಂದರು.
ಗುಲಬರ್ಗಾ ವಿವಿ ಪಾಲಿ ಮತ್ತು ಬೌದ್ಧ ಅಧ್ಯಯನ ಸಂಸ್ಥೆ ನಿರ್ದೇಶಕ ಪ್ರೊ. ಎಚ್.ಟಿ.ಪೋತೆ ಮಾತನಾಡಿ, ಮೇರು ನಾಯಕ ಡಾ. ಮಲ್ಲಿಕಾರ್ಜುನ ಖರ್ಗೆ ಅವರ ಕಾಳಜಿ ಮತ್ತು ಮುತುವರ್ಜಿಯಿಂದ ಸ್ಥಾಪನೆಯಾದ ಎರಡು ಸಂಸ್ಥೆಗಳು ಒಪ್ಪಂದದ ಮೂಲಕ ಪಾಲಿ ಮತ್ತು ಬೌದ್ಧ ಪಿಜಿ ಡಿಪ್ಲೊಮಾ ಕೋರ್ಸ್ ನಡೆಸುತ್ತಿದೆ. ಮುಂದಿನ ವರ್ಷದಿಂದ ಎಂಎ ಇನ್ ಪಾಲಿ ಮತ್ತು ಬೌದ್ಧ ಸ್ಟಡೀಸ್ ಆರಂಭಿಸಲು ಈಗಾಗಲೇ ಪಠ್ಯಕ್ರಮ ಸಿದ್ಧಗೊಂಡಿದೆ ಎಂದರು.ಸಂಗೀತ ವಿಭಾಗದ ಅಧ್ಯಾಪಕ ಡಾ. ಲಕ್ಷ್ಮಿಶಂಕರ ಜೋಷಿ, ಡಾ. ದಾನಮ್ಮ ಸಂಗಡಿಗರು ನಾಡಗೀತೆ ಹಾಡಿದರು.
ಸಂಶೋಧನಾ ವಿದ್ಯಾರ್ಥಿ ಭಾಗ್ಯಶ್ರೀ ನಿರೂಪಿಸಿದರು.ಮೊದಲನೇ ಗೋಷ್ಠಿಯಲ್ಲಿ ಬೆಂಗಳೂರು ಐ.ಜಿ.ಎನ್.ಸಿ ಪೇಲಿಯೋ ಗ್ರಾಫಿಸ್ಟ್ ಡಾ. ಸದ್ಯೋಜಾತ ಭಟ್ಟ, ''''ಸನ್ನತಿ ಶಾಸನಗಳು
ಸ್ವರೂಪ ವಿಚಾರ, ಚಾಣಕ್ಯ ವಿವಿ ಸಂದರ್ಶಕ ಪ್ರಾಧ್ಯಾಪಕ ಅರ್ಜುನ್ ಭಾರದ್ವಾಜ್ ''''ಸನ್ನತಿ ಶಿಲ್ಪ ವಾಸ್ತುಶಿಲ್ಪ ಲಕ್ಷಣ'''', ಸಂಶೋಧಕ ಡಾ. ಕೇಯೂರ ರಾಮಚಂದ್ರ ಕರಗುದರಿ ''''ಸನ್ನತಿ ಜಾತಕಶಿಲ್ಪಗಳು ಕಥಾನಕದ ಹಿನ್ನೆಲೆಯಲ್ಲಿ'''''''' ಹಾಗೂ ಪ್ರಾಂಶುಪಾಲ ಡಾ. ಸಿ. ಚಂದ್ರಪ್ಪ ''''ಸನ್ನತಿ ಮತ್ತು ಅಶೋಕ ಸಂಬಂಧಗಳ ಸ್ವರೂಪ'''' ಕುರಿತು ಮಾತನಾಡಿದರು.ಎರಡನೇ ಗೋಷ್ಠಿಯಲ್ಲಿ ಹಂಪಿ ಕನ್ನಡ ವಿವಿ ವಿಶ್ರಾಂತ ಪ್ರಾಧ್ಯಾಪಕ ಡಾ. ದೇವರ ಕೊಂಡಾರೆಡ್ಡಿ ''''ಸನ್ನತಿ ಮತ್ತು ರಾಜಮನೆತನಗಳು'''', ಸಂಶೋಧಕ ಡಾ.ಎಸ್. ಚಂದ್ರಮೋಹನ್ ''''ಸನ್ನತಿ ಮತ್ತು ಬೌದ್ಧ ಧರ್ಮ'''', ಕನ್ನಡ ಅಧ್ಯಯನ ಸಂಸ್ಥೆ ಅತಿಥಿ ಉಪನ್ಯಾಸಕ ಡಾ. ಎಂ.ಬಿ. ಕಟ್ಟಿ'''''''' ಸನ್ನತಿ ಮತ್ತು ಇತರ ಬೌದ್ಧ ಕೇಂದ್ರಗಳು'''''''' ಕುರಿತು ವಿಷಯ ಮಂಡಿಸಿದರು.
ಗುವಿವಿ ಪ್ರೊ. ರಮೇಶ ಲಂಡನಕರ್ ಸಮಾರೋಪ ಸಮಾರಂಭದಲ್ಲಿ ಪ್ರಮಾಣ ಪತ್ರ ವಿತರಿಸಿದರು.ನಳಂದ ವಿಹಾರದ ಪಾಲಿ ಇನ್ಸ್ಟಿಟ್ಯೂಟ್ನ ಗೌರವ ನಿರ್ದೇಶಕ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ, ವಿದ್ಯಾ ವಿಷಯಕ ಪರಿಷತ್ ಸದಸ್ಯ ಪ್ರೊ. ಬಸವರಾಜ ಸಣ್ಣಕ್ಕಿ ಇದ್ದರು.,,ಬಾಕ್ಸ್ ..
ಪಾಲಿ, ಬೌದ್ಧ ಸ್ಟಡೀಸ್ ಪಿಜಿ ಡಿಪ್ಲೊಮಾ ಕೋರ್ಸ್ಗುವಿವಿಯಲ್ಲಿ ಶೈಕ್ಷಣಿಕ ವರ್ಷದಿಂದ ಎರಡು ವರ್ಷಗಳ ಎಂಎ ಪಾಲಿ ಮತ್ತು ಬೌದ್ಧ ಸ್ಟಡೀಸ್ ಮತ್ತು ಒಂದು ವರ್ಷದ ಪಿಜಿ ಡಿಪ್ಲೊಮಾ ಕೋರ್ಸುಗಳನ್ನು ಕನ್ನಡ ಮತ್ತು ಇಂಗ್ಲಿಷ್ ನಲ್ಲಿ ಆರಂಭಿಸಲು ಸಿದ್ಧತೆ ನಡೆದಿದೆ. ಅಂತರರಾಷ್ಟ್ರೀಯ ಮತ್ತು ಹೊರ ರಾಜ್ಯದ ಆಸಕ್ತರು ಪಾಲಿ ಮತ್ತು ಬೌದ್ಧ ಸ್ಟಡೀಸ್ ಕೋರ್ಸ್ ಕಲಿಯಲು ಪ್ರೋತ್ಸಾಹ ನೀಡುವ ಉದ್ದೇಶವಿದೆ. ಈಗಾಗಲೇ ಅಧ್ಯಯನ ಮಂಡಳಿ ಸಭೆಯಲ್ಲಿ ಪಠ್ಯಕ್ರಮಕ್ಕೆ ಅಂತಿಮ ರೂಪ ನೀಡಲಾಗಿದೆ. ಹೆಚ್ಚಾಗಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಂತದಲ್ಲಿ ಪಾಲಿ ಮತ್ತು ಬೌದ್ಧ ವಿಷಯಗಳು ಕಲಿಕೆಗೆ ಅವಕಾಶ ಸಿಗಬೇಕಿದೆ. ಮುಂದಿನ ದಿನಗಳಲ್ಲಿ ವಿವಿಯಲ್ಲಿ ಪಾಲಿ ಮತ್ತು ಬೌದ್ಧ ವಿಷಯ ಕುರಿತು ಅಂತರ ರಾಷ್ಟ್ರೀಯ ವಿಚಾರ ಸಂಕಿರಣ ನಡೆಸಲು ಯೋಜನೆ ರೂಪಿಸಲಾಗುವುದು.
-ಪ್ರೊ. ಶಶಿಕಾಂತ್ ಎಸ್. ಉಡಿಕೇರಿ, ಕುಲಪತಿ, ಗುವಿವಿ