ಕನಕದಾಸ ಭವನ, ರಾಯಣ್ಣನ ಪುತ್ಥಳಿಗೆ ಜಾಗೆ ನೀಡಿ

KannadaprabhaNewsNetwork |  
Published : Dec 03, 2025, 03:00 AM IST
ಚಿಕ್ಕೋಡಿಯಲ್ಲಿ ಸಂತ ಕನಕದಾಸ ಭವನ ನಿರ್ಮಾಣ ಹಾಗೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ ಪುತ್ಥಳಿ ಸ್ಥಾಪನೆಗೆ ಸರ್ಕಾರದಿಂದ ಸ್ಥಳಾವಕಾಶದ ವ್ಯವಸ್ಥೆ ಮಾಡಬೇಕೆಂದು ಚಿಕ್ಕೋಡಿ ಉಪ ತಹಸೀಲ್ದಾರ್‌ ಪಿ.ಬಿ.ಶೀಲವಂತಗೆ ಶ್ರೀಮುರಸೀದ್ದೇಶ್ವರ ದೇವಸ್ಥಾನ ಟ್ರಸ್ಟ್‌ನ ಅಧ್ಯಕ್ಷ ಮುರಾರಿ ಶಿಂಗಾಡೆ ನೇತೃತ್ವದಲ್ಲಿ ಮನವಿ ಸಲ್ಲಿಸಿ ಒತ್ತಾಯಿಸಿದರು. | Kannada Prabha

ಸಾರಾಂಶ

ಸಂತ ಕನಕದಾಸ ಭವನ ನಿರ್ಮಾಣ ಹಾಗೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಪುತ್ಥಳಿ ಸ್ಥಾಪನೆಗೆ ಚಿಕ್ಕೋಡಿಯಲ್ಲಿ ಸರ್ಕಾರದಿಂದ ಸ್ಥಳಾವಕಾಶ ಕಲ್ಪಿಸಬೇಕೆಂದು ಆಗ್ರಹ

ಕನ್ನಡಪ್ರಭ ವಾರ್ತೆ ಚಿಕ್ಕೋಡಿ

ಸಂತ ಕನಕದಾಸ ಭವನ ನಿರ್ಮಾಣ ಹಾಗೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಪುತ್ಥಳಿ ಸ್ಥಾಪನೆಗೆ ಚಿಕ್ಕೋಡಿಯಲ್ಲಿ ಸರ್ಕಾರದಿಂದ ಸ್ಥಳಾವಕಾಶ ಕಲ್ಪಿಸಬೇಕೆಂದು ಆಗ್ರಹಿಸಿ ಚಿಕ್ಕೋಡಿ ಉಪವಿಭಾಗಾಧಿಕಾರಿ ಹಾಗೂ ತಹಸೀಲ್ದಾರ್‌ಗೆ ಶ್ರೀ ಮುರಸೀದ್ದೇಶ್ವರ ದೇವಸ್ಥಾನ ಟ್ರಸ್ಟ್ ಪದಾಧಿಕಾರಿಗಳು ಮನವಿ ಸಲ್ಲಿಸಿದರು.ಉಪವಿಭಾಗಾಧಿಕಾರಿಗ ಪರವಾಗಿ ಗ್ರೇಡ್-2 ತಹಸೀಲ್ದಾರ್‌ ಪ್ರಮೀಳಾ ದೇಶಪಾಂಡೆ ಹಾಗೂ ತಹಸೀಲ್ದಾರ್‌ ಅನುಪಸ್ಥಿತಿಯಲ್ಲಿ ಉಪ ತಹಸೀಲ್ದಾರ್‌ ಪಿ.ಬಿ.ಶೀಲವಂತಗೆ ಮನವಿ ಸಲ್ಲಿಸಿದರು.

ಚಿಕ್ಕೋಡಿ ತಾಲುಕಿನ ಕುರುಬ ಸಮುದಾಯದ ಪರವಾಗಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ ಪುತ್ಥಳಿಯನ್ನು ಚಿಕ್ಕೋಡಿ ನಗರದಲ್ಲಿ ಸ್ಥಾಪಿಸಬೇಕೆಂದು ಹಲವು ಸಲ ಮನವಿ ಸಲ್ಲಿಸಿದರು ಪ್ರಯೋಜನವಾಗಿಲ್ಲ ಜೊತೆಗೆ ಹೋರಾಟಗಳನ್ನು ಸಹ ಮಾಡಲಾಗಿದೆ. ನಮ್ಮ ಸಮುದಾಯದ ವತಿಯಿಂದ ಈ ಎರಡು ಬೇಡಿಕೆಗಳನ್ನು ಮತ್ತೊಮ್ಮೆ ಹೋರಾಟ ಮಾಡಿಯಾದರು ಈಡೇರಿಸಿಕೊಳ್ಳಬೇಕಾಗಿದೆ ಎಂದು ಪ್ರತಿಭಟನಾಕಾರರು ತಿಳಿಸಿದರು.

ಈ ಭವನ ಸ್ಥಾಪನೆಗೆ ನಾಯಕರು, ಸಮಾಜ ಸೇವಕ ಪ್ರತಾಪ ಪಾಟೀಲ ಹಾಗೂ ಯುವ ಕೇಸರಿ ಶಿವರಾಜ ಪಾಟೀಲ ₹5 ಲಕ್ಷ ನೀಡಿದ್ದು ಸ್ಥಳ ನಿಗದಿಯಾದ ತಕ್ಷಣವೆ ಮತ್ತೆ ₹5 ಲಕ್ಷ ಸಹಾಯ ನೀಡುವುದಾಗಿ ಭರವಸೆ ನೀಡಿದ್ದಾರೆ. ಆದ್ದರಿಂದ ಚಿಕ್ಕೋಡಿ ಪುರಸಭೆ ವ್ಯಾಪ್ತಿಯ ಕೇಂದ್ರ ಸ್ಥಾನದಲ್ಲಿ ಸಂಗೊಳ್ಳಿ ರಾಯಣ್ಣನವರ ಪುತ್ಥಳಿ ಸ್ಥಾಪನೆಗೆ ಹಾಗೂ ಕನಕದಾಸ ಭವನ ನಿರ್ಮಾಣಕ್ಕೆ ಸೂಕ್ತ ಜಾಗೆ ಸರ್ಕಾರ ಒದಗಿಸಬೇಕೆಂದು ಈ ಮೂಲಕ ಆಗ್ರಹಿಸಿದ್ದಾರೆ.

ಮುರಸಿದ್ದೇಶ್ವರ ದೇವಸ್ಥಾನ ಅಧ್ಯಕ್ಷ ಮುರಾರಿ ಶಿಂಗಾಡೆ, ಸಂತೋಷ ಪೂಜಾರಿ, ಸಿದ್ದಪ್ಪ ಡಂಗೇರ, ಶಂಕರ ಪೂಜಾರಿ, ಲಕ್ಕಪ್ಪಾ ಶಿಂಗಾಡೆ, ಶಂಕರ ಡಂಗೇರ, ವಿಠ್ಠಲ ಕರಿಗಾರ, ಬಸವರಾಜ ದತ್ತವಾಡೆ, ಮುರಾರಿ ಕರಿಗಾರ, ಮಾರುತಿ ದತ್ತವಾಡೆ, ನಾಗರಾಜ ದತ್ತವಾಡೆ, ಮಾರುತಿ ಕರಿಗಾರ ಸೇರಿದಂತೆ ಕುರುಬ ಸಮಾಜ ಬಾಂಧವರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಿಕ್ಷಣಕ್ಕೆ ಸಿದ್ಧಗಂಗಾ ಮಠದ ಕೊಡುಗೆ ಅನನ್ಯ
ಪಟ್ಟಣದ ಬೀದಿ ಬದಿ ವ್ಯಾಪಾರಸ್ಥರ ಹಿತ ಕಾಪಾಡಿ