ಮುಂಡರಗಿ: ಕನಕದಾಸರು ಕೇವಲ ಒಂದು ಸಮಾಜಕ್ಕೆ ಮಾತ್ರ ಸೀಮಿತವಾಗಿ ಸಾಹಿತ್ಯ ರಚಿಸಲಿಲ್ಲ. ಅವರು ಇಡೀ ಮನುಕುಲಕ್ಕೆ ಒಳಿತಾಗುವ ಮತ್ತು ಆದರ್ಶವಾಗುವಂತಹ ಸಾಹಿತ್ಯ ರಚಿಸಿದರು. ಅವರ ಸಾಹಿತ್ಯಕ್ಕೆ ಒಂದು ಚೌಕಟ್ಟನ್ನು ಹಾಕಿ ಅವರ ಆದರ್ಶಕ್ಕೆ ಬೇಲಿಹಾಕಿ ನಿಲ್ಲಿಸುವುದು ಸರಿಯಲ್ಲ ಎಂದು ತಹಸೀಲ್ದಾರ್ ಎರ್ರಿಸ್ವಾಮಿ ಪಿ.ಎಸ್. ತಿಳಿಸಿದರು.
ಪಟ್ಟಣದ ತಹಸೀಲ್ದಾರ್ ಕಚೇರಿ ಸಭಾಭವನದಲ್ಲಿ ತಾಲೂಕು ಆಡಳಿತದ ವತಿಯಿಂದ ಶನಿವಾರ ಆಯೋಜಿಸಿದ್ದ ಭಕ್ತ ಕನಕದಾಸರ 538ನೇ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ತಿಮ್ಮಪ್ಪನಾಗಿ ಹುಟ್ಟಿದ ವ್ಯಕ್ತಿಯೊಬ್ಬ ಭಕ್ತನಾಗುತ್ತಾನೆ. ಕನಕನಾಗುತ್ತಾನೆ. 350ಕ್ಕೂ ಹೆಚ್ಚು ಕೀರ್ತನೆಗಳನ್ನು ರಚನೆ ಮಾಡುತ್ತಾನೆ. ಕಸಕದಾಸರು ಹೇಳಿದಂತೆ ಕುಲ ಕುಲ ಕುಲವೆಂದು ಬಡಿದಾಡುವುದು ಸರಿಯಲ್ಲ.
ಅತ್ಯಂತ ಮುಂದುವರಿದ ಇಂದಿನ ದಿನಮಾನಕಾಲದಲ್ಲಿ ಜಾತಿ, ಮತ, ಪಂಥ ಮೀರಿ ಎಲ್ಲರೂ ಮನುಷ್ಯರಾಗಿ ಪ್ರೀತಿ, ವಿಶ್ವಾಸದಿಂದ ಕೂಡಿ ಬಾಳಬೇಕು. ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಸಂಸ್ಕಾರಯುತರನ್ನಾಗಿ ಮಾಡುವ ಮೂಲಕ ಕನಕದಾಸರ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.ತಾಲೂಕು ಕುರುಬರ ಸಂಘದ ಅಧ್ಯಕ್ಷ ಮಂಜುನಾಥ ಮುಂಡವಾಡ, ಜ್ಯೋತಿ ಹಾನಗಲ್, ಯಂಕಣ್ಣ ಯಕ್ಲಾಸಪುರ, ಮುತ್ತು ಬಳ್ಳಾರಿ, ವಿಶ್ವನಾಥ ಹೊಸಮನಿ, ಉದಯಕುಮಾರ ಯಲಿವಾಳ, ಶಿವಾನಂದ ಇಟಗಿ, ಬಸವರಾಜ, ಮಂಜುಳಾ ಇಟಗಿ, ವಿ.ಎಸ್. ಗಟ್ಟಿ, ಅಶ್ವಿನಿ ಗೌಡರ್, ಪ್ರಭಾವತಿ, ಶರಣಪ್ಪ ಮುದಿಯಜ್ಜನವರ ಮಾತನಾಡಿದರು.
ಗಂಗಾಧರ ಅಣ್ಣೀಗೇರಿ, ಉದಯಕುಮಾರ ಯಲಿವಾಳ, ಮಂಜುಳಾ ಸಜ್ಜನರ, ಚಂದ್ರಶೇಖರ ಪೂಜಾರ, ಧರ್ಮಪ್ಪ ರಾಮೇನಹಳ್ಳಿ, ಶಿವನಗೌಡ ಗೌಡ್ರ, ರಂಗಪ್ಪ ಕೋಳಿ, ದಶರಥಪ್ಪ ಕುರಿ, ರಮೇಶ ಹುಳಕಣ್ಣವರ, ಎಚ್.ಎನ್. ಗೌಡರ್, ಭುವನೇಶ್ವರಿ ಕಲ್ಲಕುಟಗರ್, ಶಿವಕುಮಾರ ಕುರಿ, ಮೈಲಾರಪ್ಪ ಕಲಕೇರಿ, ಅಶೋಕ ಕೋಳಿ, ಶಾಂತವ್ಬ ಬಳ್ಳಾರಿ, ಬಸವರಾಜ ದೇಸಾಯಿ, ಎಸ್.ವಿ. ತಿಗರಿಮಠ, ವೀರಣ್ಣ ಮದ್ದೀನ, ಕಾಶೀನಾಥ ಶಿರಬಡಗಿ, ಡಿ.ಜಿ. ಪೂಜಾರ, ಶೇಖಪ್ಪ ಚಿಂಚಲಿ ಉಪಸ್ಥಿರಿದ್ದರು. ಶ್ರೀಕಾಂತ ಅರಹುಣಸಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.