ಯಾದಗಿರಿ: ಯಾದಗಿರಿಯ ಕಂದಕೂರ ಕುಟುಂಬ ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡರಿಗೆ ನಿಷ್ಠಾವಂತ ಕುಟುಂಬ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದರು.
ಅಧಿಕಾರ ಅಥವಾ ಹಣದ ಆಸೆಗೆ ಕೆಲವರು ಪಕ್ಷವನ್ನು ತ್ಯಜಿಸಿರಬಹುದು. ಆದರೆ, ದೇವೇಗೌಡರು ಹಾಗೂ ಕುಮಾರಸ್ವಾಮಿಯವರಿಗೆ ಬೆಂಬಲವಾಗಿ ನಿಂತಿರುವುದು ಕಂದಕೂರು ಕುಟುಂಬ. ಮಧು ಬಂಗಾರಪ್ಪ ಅವರ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷರಾಗಿದ್ದರು. ಅವರು ನಂತರ ಪಕ್ಷವನ್ನು ಬಿಟ್ಟು ಹೋದರು. ಆಗ ದೇವೆಗೌಡ ಅವರು ಶಾಸಕ ಶರಣಗೌಡ ಅವರನ್ನು ಕರೆಸಿದರು. ಆಗ ಯುವ ಜನತಾದಳ ರಾಜ್ಯಾಧ್ಯಕ್ಷರಾಗಿ ಶರಣಗೌಡ ಅವರನ್ನು ಮಾಡಲು ದೇವೇಗೌಡ ಅವರು ಚಿಂತನೆ ನಡೆಸಿದ್ದರಾದರೂ, ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧಿಸಬೇಕಿದೆ, ಜೊತೆಗೆ ತಂದೆಯವರೂ ಸಹ ಶಾಸಕರಿದ್ದು, ಕ್ಷೇತ್ರದ ಜನರ ಸೇವೆ ಮಾಡಬೇಕಿದೆ, ಅಧ್ಯಕ್ಷ ಸ್ಥಾನ ಬೇಡ ಅಂದಿದ್ದರು. ಆಗ ನನ್ನ ಹೆಸರನ್ನು ಶರಣಗೌಡ ಕಂದಕೂರು ಅವರು ಸೂಚಿಸಿದ್ದರು. ಜೆಪಿ ಭವನದಲ್ಲಿ ನನ್ನನ್ನು ಕರೆಸಿ ಯುವ ಘಟಕದ ರಾಜ್ಯಾಧ್ಯಕ್ಷರನ್ನು ಮಾಡಿದ್ದರು ಎಂದು ನಿಖಿಲ್ ಸ್ಮರಿಸಿದರು.