ಕನ್ನಡಪ್ರಭ ವಾರ್ತೆ ಮುಧೋಳ
ಈ ಕುರಿತು ಅವರು ಪತ್ರಿಕೆಗೆ ಮಾಹಿತಿ ನೀಡಿದ್ದು, ರಾಷ್ಟ್ರೀಯ ಸಂಶೋಧನಾ ವೇದಿಕೆಯಿಂದ ಗುರುತಿಸಲಾದ ಈ ಶಾಸನ ಶ್ರೀಶೈಲ ಕ್ಷೇತ್ರದ ಕಡೆಬಾಗಿಲು ಹತ್ತಿರವಿದೆ. ಈ ಶಾಸನದ ಕಾಲ ಮತ್ತು ಶಾಸನ ಹಾಕಿಸಿದವರ ಕುರಿತು ಯಾವುದೇ ಮಾಹಿತಿ ಲಭ್ಯವಾಗಿಲ್ಲ. ನೆರೆಯ ಆಂಧ್ರದ ನೆಲದಲ್ಲಿ ದೊರೆತ ಕನ್ನಡ ಶಾಸನದಲ್ಲಿ ಶ್ರೀಶೈಲಂ ಕ್ಷೇತ್ರದ ಅಧಿದೇವರಾದ ಮಲ್ಲಿಕಾರ್ಜುನ ದೇವರ ಕುರಿತು ಉಗೆ ಉಗೆ ಮಲ್ಲಯ್ಯ ಅನಿತಿ ಭವ ಸಂಹಾರಿ ಎಂದು ಬರೆಯಲಾಗಿದೆ. ಈ ಶಾಸನ ಶ್ರೀ ಮಲ್ಲಯ್ಯ ದೇವರನ್ನು ಸ್ಮರಿಸಿದರೆ ಲೋಕದ ಕಷ್ಟ ದೂರವಾಗುತ್ತದೆ ಎಂದು ಅರ್ಥ ಕೊಡುತ್ತದೆ ಎಂದು ಹಿರಿಯ ಇತಿಹಾಸ ಸಂಶೋಧಕ ರಾಷ್ಟ್ರೀಯ ಸಂಶೋಧನಾ ವೇದಿಕೆ ಗೌರವ ಅಧ್ಯಕ್ಷ ಡಾ. ಸಂಗಮೇಶ ಕಲ್ಯಾಣಿ ತಿಳಿಸಿದ್ದಾರೆ.