ಕನ್ನಡ ಶಬ್ದವಲ್ಲ ಅದು ಜೀವನ: ಮೌನೇಶ ನವಲಹಳ್ಳಿ

KannadaprabhaNewsNetwork |  
Published : Dec 04, 2025, 02:45 AM IST
ಪೋಟೊ30ಕೆಎಸಟಿ3: ಕುಷ್ಟಗಿ ತಾಲೂಕಿನ ಬಿಜಕಲ್ಲ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ದೇವಿ ಪ್ರತಿಷ್ಠಾನದ ವತಿಯಿಂದ ಕನ್ನಡ ರಾಜ್ಯೋತ್ಸವದ ಅಂಗವಾಗಿ ಪ್ರಬಂಧ ಕವನ ಸ್ಪರ್ಧೆ ಬಹುಮಾನ ವಿತರಣೆ ಕಾರ್ಯಕ್ರಮ ನಡೆಯಿತು. | Kannada Prabha

ಸಾರಾಂಶ

ತನು ಕನ್ನಡ, ಮನ ಕನ್ನಡ, ನಡೆ ಕನ್ನಡ, ನುಡಿ ಕನ್ನಡ

ಕುಷ್ಟಗಿ: ಕನ್ನಡ ಒಂದು ಶಬ್ದವಲ್ಲ, ಅದು ಜೀವನ ಎಂದು ಸಾಹಿತಿ ಮೌನೇಶ ನವಲಹಳ್ಳಿ ಅಭಿಪ್ರಾಯಪಟ್ಟರು.

ತಾಲೂಕಿನ ಬಿಜಕಲ್ಲ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ದೇವಿ ಪ್ರತಿಷ್ಠಾನದಿಂದ ಕನ್ನಡ ರಾಜ್ಯೋತ್ಸವದ ಅಂಗವಾಗಿ ಇತ್ತೀಚೆಗೆ ನಡೆದ ಪ್ರಬಂಧ, ಕವನ ಸ್ಪರ್ಧೆ ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ತನು ಕನ್ನಡ, ಮನ ಕನ್ನಡ, ನಡೆ ಕನ್ನಡ, ನುಡಿ ಕನ್ನಡ ಎಂದು ಹೇಳಿದರು. ಕನ್ನಡವು ಒಂದು ಶಬ್ದವಲ್ಲ, ಅದು ಜೀವನ ಎನ್ನುವ ಮೂಲಕ ಕನ್ನಡ ಜಾಗೃತಿಯ ಮಹತ್ವ ತಿಳಿಸಿಕೊಟ್ಟರು.

ಬಿಜಕಲ್ ಗ್ರಾಪಂ ಅಧ್ಯಕ್ಷ ಸಂಗಪ್ಪ ತೆಗ್ಗಿನಮನಿ ಕಾರ್ಯಕ್ರಮ ಉದ್ಘಾಟಿಸಿದರು. ಕಸಾಪ ತಾಲೂಕಾಧ್ಯಕ್ಷ ಲೆಂಕಪ್ಪ ವಾಲಿಕಾರ ಅಧ್ಯಕ್ಷತೆ ವಹಿಸಿದ್ದರು. ಎಸ್‌ಡಿಎಂಸಿ ಅಧ್ಯಕ್ಷ ವೀರನಗೌಡ ಪೊಲೀಸ್ ಪಾಟೀಲ್, ಮಂಜುನಾಥ ಬನ್ನಿಗೋಳ, ಮುಖ್ಯಶಿಕ್ಷಕ ಬಸವರಾಜ ಬಾಗಲಿ, ರವೀಂದ್ರ ಬಾಕಳೆ, ವಿ.ಎಸ್. ಕಾಡಗಿಮಠ, ನಿಂಗಪ್ಪ ಸಜ್ಜನ, ಶರಣಪ್ಪ ಲೈನದ್‌, ಮಂಜೂರಲಿ ದೋಟಿಹಾಳ, ಮನೋಹರ ಬಡಿಗೇರ, ಮಂಜುನಾಥ ಮಠಪತಿ, ಶ್ರೀಧರ ವಂಕಲಕುಂಟಿ, ಶರಣಪ್ಪ ಕೊಪ್ಪಳ, ಮಲ್ಲಿಕಾರ್ಜುನ ಕಮ್ಮಾರ, ಬಸವರಾಜ್ ಪೊಲೀಸ್ ಪಾಟೀಲ್, ಮಂಜುನಾಥ ಬೆಳಗಲ್, ಶರಣಬಸವ ಮಾದರ, ಚಂದ್ರಶೇಖರ ಅಡಿವೆಪ್ಪಗೌಡ್ರು, ಮೈಲಾರಪ್ಪ ಕೊಡಗಲಿ ಇದ್ದರು. ಶಿಕ್ಷಕ ವಿಜಯಕುಮಾರ ಕಾರ್ಯಕ್ರಮ ನಿರೂಪಿಸಿದರು. ಕಸಾಪ ಕಾರ್ಯದರ್ಶಿ ದೇವರಾಜ ವಿಶ್ವಕರ್ಮ ವಂದಿಸಿದರು. ಪ್ರಬಂಧ ಹಾಗೂ ಕವನ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬ್ಯಾಲೆಟ್‌ನಲ್ಲಿ ಮತದಾನ ನಡೆಸಿದರೆ ತಪ್ಪೇನು? ರಾಜ್ಯ ಚುನಾವಣಾ ಆಯುಕ್ತ
ಜಾಗತಿಕ ಸವಾಲಿಗೆ ನವೋದ್ಯಮ ಉತ್ತರ : ರಾಧಾಕೃಷ್ಣನ್‌