ಸಿರವಾರದ ಸರ್ಕಾರಿ ಕಾಲೇಜಿನಲ್ಲಿ ಕವಿಗೋಷ್ಠಿ, ಸಾಧಕರಿಗೆ ಸನ್ಮಾನ ಸಮಾರಂಭ
ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕಲ್ಪವೃಕ್ಷ ಯುವ ಸಾಂಸ್ಕೃತಿಕ ಮಹಿಳಾ ಮತ್ತು ಮಕ್ಕಳ ಗ್ರಾಮೀಣಾಭಿವೃದ್ಧಿ ಸಂಘ ಸಂಯೋಗದಲ್ಲಿ ಕನ್ನಡ ರಾಜ್ಯೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಕವಿಗೋಷ್ಠಿ ಹಾಗೂ ಸಮಾಜದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಮಹನೀಯರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕರ್ನಾಟಕದಲ್ಲಿ ಅನ್ನ ನೀಡುವ ಭಾಷೆ, ಮಾತೃಭಾಷೆ ಕನ್ನಡ, ಸರ್ಕಾರಿ ಶಾಲೆಗಳಲ್ಲಿ ಶ್ರೇಷ್ಠ ಜ್ಞಾನ ಲಭಿಸುತ್ತದೆ. ಕನ್ನಡದಲ್ಲಿ ನಾವು ಸಂಪೂರ್ಣವಾಗಿ ಅಳವಡಿಸಿಕೊಳ್ಳುವ ಜೊತೆಗೆ ಇತರರಿಗೂ ಮಾದರಿಯಾಗೋಣ ಎಂದರು.ಸರ್ಕಾರಿ ಪಿಯು ಕಾಲೇಜು ಉಪನ್ಯಾಸಕ ಚನ್ನೂರ ಹನುಮಂತ, ಕನ್ನಡ ಉಪನ್ಯಾಸಕಿ ಸಲ್ಮಾ, ಕಸಾಪ ತಾಲೂಕು ಘಟಕದ ಅಧ್ಯಕ್ಷ ಸುರೇಶ ಹೀರಾ ಮಾತನಾಡಿದರು.
ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಸಿಪಿಐ ಗುರುರಾಜ ಕಟ್ಟಿಮನಿ, ರೇಖಾ ಬಡಿಗೇರ, ಶಿಕ್ಷಕಿ ನಿರ್ಮಲಾ ಮೇಗಳಮನಿ, ವೆಂಕಟೇಶ ಉಪ್ಪಾರ, ಲಕ್ಷ್ಮಣ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಉಪನ್ಯಾಸಕಿ ಚಂದ್ರಮತಿ ನಿರೂಪಿಸಿದರು.ಕಲ್ಪವೃಕ್ಷ ಯುವ ಸಂಘದ ನಿರ್ದೇಶಕ ಜೆ.ಮಂಜುನಾಥ ಗೌಡ, ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾ ಯುವ ಘಟಕದ ಅಧ್ಯಕ್ಷ ಅರಿಕೇರಿ ಶಿವಶರಣ, ಡಿ.ಯಮನೂರಪ್ಪ, ಅಮರೇಶ ದಿನ್ನಿ, ಶಂಕ್ರಯ್ಯ ಸ್ವಾಮಿ ಕವಿತಾಳ, ಎಂ..ಫಕ್ರುದ್ದೀನ್, ಪತ್ತಾರ ನಾಗಪ್ಪ, ಚಿದಾನಂದ ಕರಿಗೂಳಿ, ಕೆ.ರಾಘವೇಂದ್ರ ಸೇರಿದಂತೆ ಕಾಲೇಜು ವಿದ್ಯಾರ್ಥಿಗಳು ಇದ್ದರು.