ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಸಹ ಪ್ರಾಧ್ಯಾಪಕ ಮೋಹನ್ ಚಂದ್ರಗುತ್ತಿ ಈ ಸಂದರ್ಭ ಮಾತನಾಡಿ, ಇಡೀ ಜಗತ್ತು ಕಾರ್ಪೊರೇಟ್ ಆಗುತ್ತಿರುವ ಸಂದರ್ಭದಲ್ಲಿ ಒಂದು ರಾಷ್ಟ್ರೀಯ ಬ್ಯಾಂಕ್ ಕನ್ನಡದ ನೆಲದ ಸವಿಯನ್ನು, ಅಭಿಮಾನದಿಂದ ಗೌರವದಿಂದ ರಾಜ್ಯೋತ್ಸವ ಆಚರಿಸುತ್ತಿರುವುದು ನಿಜವಾಗಲೂ ಹೆಮ್ಮೆಯ ವಿಚಾರ ಎಂದು ಶ್ಲಾಘಿಸಿದರು.
ನಶ್ವರವಾದ ಈ ಬದುಕಿನಲ್ಲಿ ಸಂಭ್ರಮ ಕಾಣಬೇಕು. ಕನ್ನಡದ ದೀಪದ ಮೂಲಕ ಜ್ಞಾನವನ್ನು, ವಿವೇಕವನ್ನು ನೋಡಿಕೊಳ್ಳಬೇಕು, ಸಾಮಾನ್ಯರ ಮೂಲಕ ನಮ್ಮ ಕನ್ನಡ ನಾಡನ್ನು ಸೂಚಿಸಬೇಕು ಎಂದರು.ಖಂಡೋಬರಾವ್ ಮಾತನಾಡಿ, ಅವರು ಕನ್ನಡ ನಾಡು ಉದಯವಾಗಿ 68 ವರ್ಷ ಪೂರೈಸಿದೆ. ಅನೇಕರ ಹೋರಾಟ ಶ್ರದ್ಧೆ ಫಲವಾಗಿ ವಿಶಾಲ ಕರ್ನಾಟಕವಾಗಿದೆ. ಕನ್ನಡ ಕೇವಲ ನುಡಿಯಲ್ಲ, ನಮ್ಮ ಜೀವ. ಮಹಾಭಾರತದ ಆದಿ ಪರ್ವದಲ್ಲೂ ಕನ್ನಡ ಪದದ ಉಲ್ಲೇಖವಿದೆ. ಕನ್ನಡ ಪ್ರಾಚೀನ ಕಾಲದಿಂದಲೂ ತನ್ನದೇ ಆದ ವೈಶಿಷ್ಟವನ್ನು ಹೊಂದಿದೆ ಎಂದರು.
ಬೇರೆ ರಾಜ್ಯಗಳಿಂದ ವರ್ಗಾವಣೆಯಾಗಿ ಕರ್ನಾಟಕಕ್ಕೆ ಬಂದಂತಹ ಉದ್ಯೋಗಿಗಳಿಗೆ ನಿರಂತರವಾಗಿ ಕನ್ನಡವನ್ನು ಕಲಿಸುವ ಉದ್ದೇಶದಿಂದ ಕನ್ನಡ ತರಗತಿಯನ್ನು ಬ್ಯಾಂಕಿನಿಂದ ಆಯೋಜಿಸುತ್ತಿದ್ದೇವೆ ಎಂದರು.
- - - -11ಎಸ್ಎಂಜಿಕೆಪಿ05:
ಶಿವಮೊಗ್ಗದ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಕನ್ನಡ ಬಳಗ ಹಾಗೂ ಕ್ಷೇತ್ರಿಯ ಕಾರ್ಯಾಲಯ ಶಿವಮೊಗ್ಗದ ವತಿಯಿಂದ ಆಯೋಜಿಸಿದ್ದ 68ನೇ ಕನ್ನಡ ರಾಜ್ಯೋತ್ಸವವನ್ನು ಸಹ ಪ್ರಾಧ್ಯಾಪಕ ಮೋಹನ್ ಚಂದ್ರಗುತ್ತಿ ಉದ್ಘಾಟಿಸಿದರು.