ಗಡಿ ಯಕ್ಸಂಬಾದಲ್ಲಿ ಶಿಕ್ಷಣ ಕ್ರಾಂತಿ ಮಾಡಿದ ಕರಾಳೆ

KannadaprabhaNewsNetwork |  
Published : Jun 16, 2025, 02:11 AM IST
15ಡಿಡಬ್ಲೂಡಿ5ಚಿಕ್ಕೋಡಿ ತಾಲೂಕಿನ ಗಡಿಭಾಗ ಯಕ್ಸಂಬಾದ ಚನ್ನಬಸಪ್ಪ ಕರಾಳೆ ಜನತಾ ಶಿಕ್ಷಣ ಕಾಲೇಜಿನಲ್ಲಿ  ಕರ್ನಾಟಕ ವಿದ್ಯಾವರ್ಧಕ ಸಂಘವು ಆಯೋಜಿಸಿದ್ದ ಲಿಂ. ಚನ್ನಬಸಪ್ಪ ಕರಾಳೆ ದತ್ತಿಯಲ್ಲಿ ಚಂದ್ರಕಾಂತ ಕೋಟಿವಾಲೆ ಅವರಿಗೆ ಲಿಂ. ಚನ್ನಬಸಪ್ಪ ಕರಾಳೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.   | Kannada Prabha

ಸಾರಾಂಶ

ಕರಾಳೆ ಆಗರ್ಭ ಶ್ರೀಮಂತ ಕುಟುಂಬದಲ್ಲಿ ಜನಿಸಿದ್ದರೂ ಬಡವರ ಪಾಲಿನ ಭಾಗ್ಯವಿಧಾತರು. ಆಧುನಿಕತೆಗೆ ತಕ್ಕಂತೆ ವಿದ್ಯಾರ್ಥಿಗಳು ವ್ಯಕ್ತಿತ್ವ ರೂಪಿಸಿಕೊಳ್ಳಬೇಕು. ಕೃತಕ ಬುದ್ಧಿಮತ್ತೆಯ ಈ ಕಾಲಘಟ್ಟದಲ್ಲಿ ಜ್ಞಾನದ ಕ್ಷಿತಿಜವನ್ನು ವಿದ್ಯಾರ್ಥಿಗಳು ವಿಸ್ತರಿಸಿಕೊಳ್ಳಬೇಕು.

ಧಾರವಾಡ: ಚನ್ನಬಸಪ್ಪ ಕರಾಳೆ ಗಡಿಭಾಗ ಯಕ್ಸಂಬಾದಲ್ಲಿ ಶಿಕ್ಷಣ ಕ್ರಾಂತಿ ಮಾಡಿದ ಹರಿಕಾರರು. ಅವರ ಜೀವನದ ಯಶೋಗಾಥೆ ವಿದ್ಯಾರ್ಥಿಗಳಿಗೆ ಸ್ಫೂರ್ತಿಯಾಗಲಿ ಎಂದು ಚಿಕ್ಕೋಡಿ- ಸದಲಗಾ ಶಾಸಕ ಗಣೇಶ ಹುಕ್ಕೇರಿ ಹೇಳಿದರು.

ಚಿಕ್ಕೋಡಿ ತಾಲೂಕಿನ ಗಡಿಭಾಗ ಯಕ್ಸಂಬಾದ ಚನ್ನಬಸಪ್ಪ ಕರಾಳೆ ಜನತಾ ಶಿಕ್ಷಣ ಕಾಲೇಜಿನಲ್ಲಿ ಇಲ್ಲಿಯ ಕರ್ನಾಟಕ ವಿದ್ಯಾವರ್ಧಕ ಸಂಘ ಆಯೋಜಿಸಿದ್ದ ಲಿಂ. ಚನ್ನಬಸಪ್ಪ ಕರಾಳೆ ದತ್ತಿ ಉದ್ಘಾಟಿಸಿದ ಅವರು, ಲಿಂ. ಚನ್ನಬಸಪ್ಪ ಕರಾಳೆ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.

ಕರಾಳೆ ಆಗರ್ಭ ಶ್ರೀಮಂತ ಕುಟುಂಬದಲ್ಲಿ ಜನಿಸಿದ್ದರೂ ಬಡವರ ಪಾಲಿನ ಭಾಗ್ಯವಿಧಾತರು. ಆಧುನಿಕತೆಗೆ ತಕ್ಕಂತೆ ವಿದ್ಯಾರ್ಥಿಗಳು ವ್ಯಕ್ತಿತ್ವ ರೂಪಿಸಿಕೊಳ್ಳಬೇಕು. ಕೃತಕ ಬುದ್ಧಿಮತ್ತೆಯ ಈ ಕಾಲಘಟ್ಟದಲ್ಲಿ ಜ್ಞಾನದ ಕ್ಷಿತಿಜವನ್ನು ವಿದ್ಯಾರ್ಥಿಗಳು ವಿಸ್ತರಿಸಿಕೊಳ್ಳಬೇಕು ಎಂದರು.

ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಮಾತನಾಡಿ, ಕರಾಳೆ ಯಕ್ಸಂಬಾ ಭಾಗದಲ್ಲಿ ಅಕ್ಷರ ಸಂಸ್ಕೃತಿಯಿಂದ ವಂಚಿತರಾದ ಸಹಸ್ರಾರು ವಿದ್ಯಾರ್ಥಿಗಳಿಗೆ 50ರ ದಶಕದಲ್ಲಿ ವಿದ್ಯಾ ಸಂಸ್ಥೆಗಳನ್ನು ಪ್ರಾರಂಭಿಸಿ ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯಾದಾನ ಮಾಡಿದ ಪುಣ್ಯ ಪುರುಷರು ಎಂದರು.

ಅಥಣಿಯ ವಿಮೋಚನಾ ಸಂಸ್ಥೆಯ ಅಧ್ಯಕ್ಷ ಬಿ.ಎಲ್. ಪಾಟೀಲ ಇದ್ದರು. ಇದೇ ವೇಳೆ ನಿಪ್ಪಾಣಿಯ ವಿದ್ಯಾ ಸಂವರ್ಧಕ ಶಿಕ್ಷಣ ಸಂಸ್ಥೆ ಅಧ್ಯಕ್ಷ ಚಂದ್ರಕಾಂತ ಕೋಟಿವಾಲೆ ಅವರಿಗೆ ಲಿಂ. ಚನ್ನಬಸಪ್ಪ ಕರಾಳೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಸಂಘದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ, ರಾಜೇಂದ್ರ ಕರಾಳೆ, ಸಂಜೀವ ಕರಾಳೆ, ಮಲ್ಲಿಕಾರ್ಜುನ ಕರಾಳೆ, ಶಿವಾನಂದ ಭಾವಿಕಟ್ಟಿ, ವೀರಣ್ಣ ಒಡ್ಡೀನ, ಡಾ. ಮಹೇಶ ಹೊರಕೇರಿ, ವಿಶ್ವೇಶ್ವರಿ ಹಿರೇಮಠ, ಎನ್.ಎಸ್. ಕಾಶಪ್ಪನವರ ಮತ್ತಿತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪಲ್ಸ್‌ ಪೋಲಿಯೋ ಹಾಕಿಸಿ, ಅಂಗವಿಕತೆ ತಪ್ಪಿಸಿ
ಪುಷ್ಪಗಿರಿ ಜೇಸಿಗೆ 50 ವರ್ಷ: ಸಂಭ್ರಮ ಆಚರಣೆ