ಕರಾಟೆ ಇನ್ನೊಬ್ಬರ ಮೇಲಿನ ದಾಳಿಗೆ ಉಪಯೋಗಿಸುವಂಥ ಕಲೆಯಲ್ಲ: ಪಿ. ವೈ.ಶಿಹಾನ್ ನಾಸಿರುದ್ದೀನ್

KannadaprabhaNewsNetwork |  
Published : Aug 25, 2026, 01:15 AM IST
  ಸಿಕೆಬಿ-1 ಶಿವಮೊಗ್ಗದಲ್ಲಿ  ನಡೆದ 7ನೇ ಅಂತರಾಷ್ಟ್ರೀಯ ಮಟ್ಟದ ಕರಾಟೆ ಕ್ರೀಡಾಕೂಟದಲ್ಲಿ ಚಿಕ್ಕಬಳ್ಳಾಪುರ   ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಕತಾ  ಮತ್ತು ಕುಮಿಟೆ  ವಿಭಾಗಗಳಲ್ಲಿ ಭಾಗವಹಿಸಿ ವಿಜೇತ ರೊಂದಿಗೆ ತರಬೇತುದಾರರು | Kannada Prabha

ಸಾರಾಂಶ

ಸೋಲು- ಗೆಲುವು ಕ್ರೀಡೆಯಲ್ಲಿ ಸಹಜ, ಕ್ರೀಡೆಯು ಆಟದ ಜೊತೆಗೆ ಇನ್ನೊಬ್ಬರೊಂದಿಗೆ ಹೇಗೆ ನಡೆದುಕೊಳ್ಳಬೇಕೆಂಬ ಗುಣಗಳನ್ನು ಕಲಿಸುತ್ತದೆ. ಭವಿಷ್ಯ ಉತ್ತಮವಾಗಿರಲು ಕ್ರೀಡೆ ಸಹಕಾರಿಯಾಗಲಿದೆ, ಸ್ವಯಂ ರಕ್ಷಣೆಯ ಕಲೆಯಾದ ಕರಾಟೆಯನ್ನು ಪ್ರತಿಯೊಬ್ಬರೂ ಕಲಿತು, ಅದನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಸಲಹೆ ನೀಡಿದರು.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಕರಾಟೆಯು ಇನ್ನೊಬ್ಬರ ಮೇಲೆ ದಾಳಿ ಮಾಡಲು ಉಪಯೋಗಿಸುವಂಥ ಕಲೆಯಲ್ಲ, ಅದು ನಮ್ಮ ಸ್ವಯಂರಕ್ಷಣೆಗೆ ಇರುವಂಥ ಕಲೆ. ಅದನ್ನು ಪ್ರತಿಯೊಬ್ಬರೂ ಕಲಿಯುವುದರಿಂದ ನಮ್ಮ ಮೇಲಾಗುವ ದಬ್ಬಾಳಿಕೆ, ದೌರ್ಜನ್ಯ ತಡೆಗಟ್ಟಬಹುದು ಎಂದು ಕರ್ನಾಟಕ ರಾಜ್ಯ ಕರಾಟೆ ಸಂಸ್ಥೆ ಸಹ ಕಾರ್ಯದರ್ಶಿ ಹಾಗೂ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ. ವೈ.ಶಿಹಾನ್ ನಾಸಿರುದ್ದೀನ್ ತಿಳಿಸಿದರು.

ಕಳೆದ 22 ಮತ್ತು 23ರಂದು ಶಿವಮೊಗ್ಗದಲ್ಲಿ ನಡೆದ 7ನೇ ಅಂತಾರಾಷ್ಟ್ರೀಯ ಮಟ್ಟದ ಕರಾಟೆ ಕ್ರೀಡಾಕೂಟದಲ್ಲಿ ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಕತಾ ಮತ್ತು ಕುಮಿಟೆ ವಿಭಾಗಗಳಲ್ಲಿ ಭಾಗವಹಿಸಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನಗಳನ್ನು ಪಡೆದವರಿಗೆ ನಗರದ ಕರ್ನಾಟಕ ರಾಜ್ಯ ಕರಾಟೆ ಸಂಸ್ಥೆಯಲ್ಲಿ ನಡೆದ ಅಭಿನಂಧನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು. ಕರಾಟೆಗೆ ವಿಶ್ವದೆಲ್ಲೆಡೆ ಮಾನ್ಯತೆ ಇದೆ, ಇದು ಒಂದು ಪ್ರದೇಶಕ್ಕೆ ಸಿಮೀತವಾಗಿಲ್ಲ. ಕರಾಟೆ ಒಂದು ಶಿಸ್ತು ಬದ್ಧ ಆಟ, ಕರಾಟೆ ಕಲಿಯುವುದರಿಂದ ಮನುಷ್ಯನಲ್ಲಿ ಶಿಸ್ತು ಮತ್ತು ಸಂಯಮ ಅಳವಡಿಸಿಕೊಳ್ಳಲು ಸಾಧ್ಯ. ಶಿಸ್ತು ಇರುವ ಮನುಷ್ಯ ಜೀವನದಲ್ಲಿ ಉತ್ತರೋತ್ತರಕ್ಕೆ ಬೆಳೆಯಬಹುದು ಎಂದು ಹೇಳಿದರು.

ಸೋಲು- ಗೆಲುವು ಕ್ರೀಡೆಯಲ್ಲಿ ಸಹಜ, ಕ್ರೀಡೆಯು ಆಟದ ಜೊತೆಗೆ ಇನ್ನೊಬ್ಬರೊಂದಿಗೆ ಹೇಗೆ ನಡೆದುಕೊಳ್ಳಬೇಕೆಂಬ ಗುಣಗಳನ್ನು ಕಲಿಸುತ್ತದೆ. ಭವಿಷ್ಯ ಉತ್ತಮವಾಗಿರಲು ಕ್ರೀಡೆ ಸಹಕಾರಿಯಾಗಲಿದೆ, ಸ್ವಯಂ ರಕ್ಷಣೆಯ ಕಲೆಯಾದ ಕರಾಟೆಯನ್ನು ಪ್ರತಿಯೊಬ್ಬರೂ ಕಲಿತು, ಅದನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಸಲಹೆ ನೀಡಿದರು.

ಹೆಣ್ಣು ಮಕ್ಕಳು ತಮ್ಮನ್ನು ತಾವು ಸಮಾಜದಲ್ಲಿ ಗಟ್ಟಿಯಾಗಿ ರಕ್ಷಿಸಿಕೊಳ್ಳಲು ಯಾವುದಾದರೂ ಒಂದು ಆಯುಧ ಇದೆ ಎಂದರೆ ಅದು ಕರಾಟೆಯಾಗಿದೆ. ಮಕ್ಕಳಲ್ಲಿ ಅನೇಕ ಕ್ರೀಡಾಸಕ್ತಿಗಳಿದ್ದು, ಅದರಲ್ಲಿ ಕರಾಟೆಯನ್ನು ಇಷ್ಟಪಡುತ್ತಾರೆ. ಪ್ರತಿ ಮಗುವಿನಲ್ಲೂ ತನ್ನದೇಯಾದ ಪ್ರತಿಭೆ ಎಂಬುದು ಇರುತ್ತದೆ. ಆದರೆ, ಆ ಪ್ರತಿಭೆಗೆ ಪ್ರೋತ್ಸಾಹ ಅಗತ್ಯವಾಗಿದೆ, ಆ ಕೆಲಸವನ್ನು ಪೋಷಕರು ಮಾಡಿಬೇಕಿದೆ ಎಂದು ಅಭಿಪ್ರಾಯಪಟ್ಟರು.

ಅಧ್ಯಕ್ಷ ಎಂ.ಅಲ್ತಾಫ್ ಪಾಷಾ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಕಲಬೆರಕೆ ಆಹಾರ ಹಾಗೂ ಮಾನಸಿಕ ಒತ್ತಡಗಳಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದ್ದು, ಮಕ್ಕಳಿಗೆ ದೈಹಿಕ ಹಾಗೂ ಮಾನಸಿಕ ಆರೋಗ್ಯ ಸಂರಕ್ಷಣೆಗೆ ಕರಾಟೆ ಕಲಿಸುವುದು ಉತ್ತಮ. ಹೆಚ್ಚುತ್ತಿರುವ ಮಹಿಳಾ ದೌರ್ಜನ್ಯಗಳು, ಅತ್ಯಾಚಾರ, ಕಿರುಕುಳಗಳನ್ನು ತಡೆಗಟ್ಟಲು, ಹೆಣ್ಣು ಮಕ್ಕಳಲ್ಲಿ ದೈರ್ಯ ತುಂಬಿಸಲು ಕರಾಟೆ ತರಬೇತಿ ಸಹಕಾರಿಯಾಗಿದೆ. ರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ವಿಜೇತರಾಗಿರುವ ಮಕ್ಕಳು ಮುಂದೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗೆಲುವು ಸಾಧಿಸುವಂತಾಗಲಿ ಎಂದು ಹಾರೈಸಿದರು.

ಕತಾ ಮತ್ತು ಕಮಿಟೆ ಸ್ಪರ್ಧೇಗಳಲ್ಲಿ ವಿಜೇತರ ವಿವರ:

ಪುಟಾಣಿ ಸುಚಲ್ ಪಿ.ಜಿ., ಮಹಮ್ಮದ್ ಯಾಮಿನ್ ಎನ್.. ನೂರ್ ಫಾತಿಮಾ , ಅರ್ಚನಾ ವಿ., ಸಾಕ್ಷಿ ಕೆ. ಎಂ., ನಿಶಾ ರಾಮ್, ವರ್ಷಿಣಿ, ಹರಿಪ್ರಸಾದ್, ಉಲ್ಲಾಸ್ ಗೌಡ, ಪೃಥ್ವಿ ತೇಜ್, ರಿತಿಕ್ ಸುಶೀಲ್, ಧೀರಜ್ ಗೌಡ , ಜತಿನ್ ಶ್ರೀನಿಧಿ, ಋತ್ವಿಕ್.

ಜಿಲ್ಲಾ ಸ್ಪೋರ್ಟ್ಸ್ ಕರಾಟೆ ಸಂಸ್ಥೆ ತರಬೇತುದಾರರಾದ ನಶ್ರಾ ಸುಲ್ತಾನ ಎ., ವಾರಿಯರ್ಸ್ ಅಕಾಡೆಮಿ ಪಧಾಧಿಕಾರಿಗಳು, ವಿಜೇತ ವಿದ್ಯಾರ್ಥಿಗಳು, ಮತ್ತಿತರರು ಇದ್ದರು.

-----

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಚಿಕ್ಕಬಳ್ಳಾಫುರ ಜಿಲ್ಲೇಲಿ 9,44,623 ಮತದಾರರು
ಜಿಲ್ಲಾ ಚುನಾವಣಾಧಿಕಾರಿ ವೆಂಕಟೇಶ್ ಮಾಹಿತಿ । ಸೆಪ್ಟೆಂಬರ್ 23 ರವರೆಗೆ ಹಕ್ಕು, ಆಕ್ಷೇಪಣೆಗೆ ಅವಕಾಶ -ಬರೋಬ್ಬರಿ 1,42,745 ಮಂದಿ ಮತಪಟ್ಟಿಯಿಂದ ಔಟ್!