ಕನ್ನಡಪ್ರಭ ವಾರ್ತೆ ಮಡಿಕೇರಿ
ಮುಖ್ಯ ಅತಿಥಿಯಾಗಿ ಮಾತನಾಡಿದ ಡಾ. ಶಿವಪ್ಪ, ಆಧುನಿಕ ಎಲ್ಲಾ ಯುಗದಲ್ಲೂ ಸಂಸ್ಕಾರ ಹಾಗೂ ಸಂಸ್ಕೃತಿ ಉಳಿಸಿ ಬೆಳೆಸುವಲ್ಲಿ ಸ್ತ್ರೀಯರ ಪಾತ್ರ ಮುಖ್ಯವಾಗಿದೆ. ಆಧುನಿಕ ಜಗತ್ತಿನಲ್ಲಿ ಏನೇ ಬದಲಾದರೂ ಸಂಸ್ಕಾರ ಮಾತ್ರ ಬದಲಾಗಬಾರದು. ಪುರಾಣ ಕಾಲದಿಂದಲೂ ನದಿಗಳು ಸೇರಿದಂತೆ ಪ್ರಕೃತಿಯನ್ನು ತಾಯಿ ಸ್ಥಾನದಲ್ಲಿ ಇಟ್ಟು ಪೂಜಿಸಲಾಗಿದೆ. ಇದನ್ನು ಮುಂದಿನ ಪೀಳಿಗೆಗೆ ತಲುಪಿಸುವುದು ನಮ್ಮ ಜವಾಬ್ದಾರಿ ಆಗಿದೆ ಎಂದರು.
ಇರ್ಪು ಶ್ರೀರಾಮೇಶ್ವರ ದೇವಾಲಯ ಸಮಿತಿ ಅಧ್ಯಕ್ಷ ಮದ್ರೀರ ವಿಷ್ಣು ದೇವಾಲಯದ ಇತಿಹಾಸ ಮಂಡಿಸಿದರು. ಮತ್ತೋರ್ವ ಅತಿಥಿ ಕಾಫಿ ಬೆಳೆಗಾರ ಕೆ.ಎನ್. ಸಂದೀಪ್ ಹಾಗೂ ಡಾ.ಕಾವೇರಿ ಉದಯ ಮಾತನಾಡಿದರು. ಗಾಯಕರಾದ ಕಬ್ಬಚೀರ ರಶ್ಮಿ, ಆಶಾ, ಮಾಲಮೂರ್ತೀ ಮೀರ, ನಳಿನಿ, ಶನಿವಾರಸಂತೆ ನಾಗರಾಜ್, ಉಮೇಶ್ ಹಾಗೂ ಆವರ್ತಿ ಮಹದೇವಪ್ಪ ಗಾಯನ ಹಾಡಿದರು.ಸಂಘದ ಅಧ್ಯಕ್ಷ ಲೋಕೇಶ್ ಸಾಗರ್ ಪ್ರಾಸ್ತಾವಿಕ ಭಾಷಣ ಮಾಡಿದರು. ಶಿಕ್ಷಕಿ ಪ್ರೇಮ ನಿರೂಪಿಸಿದರು. ಮಾಲಾಮೂರ್ತಿ ಸ್ವಾಗತಿಸಿದರು. ಕಬ್ಬಚೀರ ರಶ್ಮಿ ಪ್ರಾರ್ಥನೆ ಮಾಡಿದರು.ಮೊದಲು ಓದುಗನಾಗಿರಬೇಕು:
ಕರ್ನಾಟಕ ಸುವರ್ಣ ಸಂಭ್ರಮದ ಅಂಗವಾಗಿ ಕನ್ನಡ ಸಿರಿ ಸ್ನೇಹ ಬಳಗದ ವತಿಯಿಂದ ಆಯೋಜಿಸಿದ್ದ ಇರ್ಪು ಜಲಪಾತ ಕವಿಗೋಷ್ಠಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕವಿಗಳಿಗೆ ವಸ್ತು ವಿಷಯವನ್ನು ಅರಿಯುವ ಗ್ರಹಿಸುವ ಮನೊಭಾವನೆ ಇರಬೇಕು. ಕೊಡಗಿನಂತಹ ಸುಂದರ ಪರಿಸರ ಕವಿಮನಸುಗಳಿಗೆ ಮುದ ನೀಡುತ್ತದೆ ಎಂದರು.
ಗೋಣಿಕೊಪ್ಪ ಗ್ರಾಮ ಪಂಚಾಯಿತಿ ಸದಸ್ಯೆ ಮೂರೇರ ರತಿ ಅಚ್ಚಪ್ಪ, ಸೋಮವಾರಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ನಿಕಟಪೂರ್ವ ಅಧ್ಯಕ್ಷ ಜವರಪ್ಪ ಹಾಜರಿದ್ದರು. ಸಂಘದ ಅಧ್ಯಕ್ಷ ಲೋಕೇಶ್ ಸಾಗರ್ ಪ್ರಾಸ್ತಾವಿಕ ಮಾತನಾಡಿದರು.