ಕರ್ನಾಟಕ ಕ್ರೀಡಾಕೂಟ-2025 (ಕರ್ನಾಟಕ ಒಲಿಂಪಿಕ್ಸ್)ನ ಸೈಕ್ಲಿಂಗ್ ಸ್ಪರ್ಧೆಯ ಮಹಿಳೆಯರ ಮತ್ತು ಪುರುಷರ ಟೀಮ್ ಟೈಮ್ ಟ್ರಯಲ್ ಸ್ಪರ್ಧೆ ಎರಡರಲ್ಲೂ ವಿಜಯಪುರ ಜಿಲ್ಲೆ ಚಿನ್ನದ ಪದಕಗಳನ್ನು ಗೆದ್ದುಗೊಂಡಿದೆ. ಧಾರವಾಡ ಮತ್ತು ಬಾಗಲಕೋಟೆಯ ಸೈಕ್ಲಿಸ್ಟ್ಗಳು ತಲಾ 1 ಚಿನ್ನಗಳನ್ನು ಗೆದ್ದುಕೊಂಡಿದ್ದಾರೆ.
ಕನ್ನಡಪ್ರಭ ವಾರ್ತೆ ಉಡುಪಿ
ಇಲ್ಲಿ ನಡೆಯುತ್ತಿರುವ ಕರ್ನಾಟಕ ಕ್ರೀಡಾಕೂಟ-2025 (ಕರ್ನಾಟಕ ಒಲಿಂಪಿಕ್ಸ್)ನ ಸೈಕ್ಲಿಂಗ್ ಸ್ಪರ್ಧೆಯ ಮಹಿಳೆಯರ ಮತ್ತು ಪುರುಷರ ಟೀಮ್ ಟೈಮ್ ಟ್ರಯಲ್ ಸ್ಪರ್ಧೆ ಎರಡರಲ್ಲೂ ವಿಜಯಪುರ ಜಿಲ್ಲೆ ಚಿನ್ನದ ಪದಕಗಳನ್ನು ಗೆದ್ದುಗೊಂಡಿದೆ. ಧಾರವಾಡ ಮತ್ತು ಬಾಗಲಕೋಟೆಯ ಸೈಕ್ಲಿಸ್ಟ್ಗಳು ತಲಾ 1 ಚಿನ್ನಗಳನ್ನು ಗೆದ್ದುಕೊಂಡಿದ್ದಾರೆ.ಇಲ್ಲಿನ ಕೊಳಗಿರಿ ಮತ್ತು ಕುಕ್ಕೆಹಳ್ಳಿ ನಡುವಿನ 10 ಕಿ..ಮೀ. ರಸ್ತೆಯಲ್ಲಿ ಭಾನುವಾರ ಈ ಸೈಕ್ಲಿಂಗ್ ಸ್ಪರ್ಧೆ ನಡೆಯಿತು. ಉಡುಪಿ ಜಿಲ್ಲೆಯ ಮಟ್ಟಿಗೆ ಅಪರೂಪವಾಗಿರುವ ಮತ್ತು ಇಲ್ಲಿ ಪ್ರಥಮ ಬಾರಿಗೆ ನಡೆದ ಈ ಸ್ಪರ್ಧೆಯು ಸ್ಥಳೀಯ ಜನರ ಗಮನ ಸಳೆಯಿತು. ಡಿಸಿ ಡಾ. ವಿದ್ಯಾಕುಮಾರಿ ಮತ್ತು ಎಸ್ಪಿ ಡಾ.ಅರುಣ್ ಕುಮಾರ್ ಈ ಸ್ಪರ್ಧೆಗೆ ಚಾಲನೆ ನೀಡಿದರು.
ಫಲಿತಾಂಶ ಹೀಗಿದೆ.
ಮಹಿಳೆಯರ ವಿಭಾಗ - 20 ಕಿಮೀ ಟೀಮ್ ಟೈಮ್ ಟ್ರಯಲ್: ಚಿನ್ನ - ವಿಜಯಪುರ, ಬೆಳ್ಳಿ - ಬೆಳಗಾವಿ, ಕಂಚು - ಮೈಸೂರು30 ಕಿ.ಮೀ. ಮಾಸ್ ಸ್ಟಾರ್ಟ್ ರೇಸ್: ಚಿನ್ನ- ಪಾಯಲ್ ಚವಾಣ್ (ಧಾರವಾಡ), ಬೆಳ್ಳಿ - ದಾನಮ್ಮ ಕೆ. ಗುರನ್ (ಬಾಗಲಕೋಟೆ), ಕಂಚು - ಗ್ಲೆಯೊನ್ನಾ ಏಂಜೆಲ್ ಡಿಸೋಜ (ಮೈಸೂರು).
ಪುರುಷರ ವಿಭಾಗ- 40 ಕಿ.ಮೀ. ಟೀಮ್ ಟೈಮ್ ಟ್ರಯಲ್: ಚಿನ್ನ- ವಿಜಯಪುರ, ಬೆಳ್ಳಿ- ಬಾಗಲಕೋಟೆ, ಕಂಚು- ಮೈಸೂರು.50 ಕಿ.ಮೀ. ಮಾಸ್ ಸ್ಟಾರ್ಟ್ ರೇಸ್: ಚಿನ್ನ - ಅರುಣ್ ಕೆ.ಲಮಣಿ (ಬಾಗಲಕೋಟೆ), ಬೆಳ್ಳಿ - ಚರಿತ್ ಗೌಡ (ಮೈಸೂರು), ಕಂಚು- ನೀಲ್ ಐವರ್ ಡಿಸೋಜ (ಬೆಂಗಳೂರು).
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.