ಭಾರತಪ್ರಪಂಚವಿಶೇಷರಾಜಕೀಯಮನರಂಜನೆಅಪರಾಧಕ್ರೀಡೆಕರ್ನಾಟಕಇ- ಪೇಪರ್

ಕಾಯಕ, ದಾಸೋಹ, ಸಮಾನತೆ ಬಸವಾದಿ ಶರಣರ ಸಿದ್ಧಾಂತ

KannadaprabhaNewsNetwork | Published : Jul 14, 2024 1:42 AM

ಹಡಪದ ಅಪ್ಪಣ್ಣನವರಿಗೆ ಲಿಂಗತತ್ತ್ವ ಬದುಕಿನ ಜೀವಾಳವಾಗಿತ್ತು. ಇಡೀ ಬದುಕು ಲಿಂಗಮಯವಾಗಿತ್ತು. ಲಿಂಗತತ್ವದಲ್ಲಿ ನಿಜವಾದ ಸುಖ ಕಂಡಂತಹ ಅಪ್ಪಣ್ಣನವರು ನಿಜಸುಖಿಗಳಾಗಿದ್ದರು

ಗದಗ: ಕಾಯಕ, ದಾಸೋಹ, ಸಮಾನತೆ ಬಸವಾದಿ ಶಿವಶರಣರ ಸಿದ್ಧಾಂತಗಳು. ಶರಣ ಹಡಪದ ಅಪ್ಪಣ್ಣನವರು ಲಿಂಗಾನುಭಾವಿಗಳಾಗಿದ್ದರು. ಲಿಂಗಾಂಗ ಸಾಮರಸ್ಯದಲ್ಲಿ ಸಿಗುವ ಸುಖ ನಿತ್ಯವೂ ಅನುಭವಿಸಿ ನಿಜಸುಖಿಗಳಾಗಿದ್ದರು ಎಂದು ಡಾ. ತೋಂಟದ ಸಿದ್ಧರಾಮ ಸ್ವಾಮಿಗಳು ಹೇಳಿದರು.

ಅವರು ನಗರದ ತೋಂಟದಾರ್ಯ ಮಠದಲ್ಲಿ ನಡೆದ ಲಿಂಗಾಯತ ಪ್ರಗತಿಶೀಲ ಸಂಘದ 2701ನೇ ಶಿವಾನುಭವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿ, ಹಡಪದ ಅಪ್ಪಣ್ಣ ಬಸವಣ್ಣನವರ ಪ್ರೀತಿಗೆ ಪಾತ್ರರಾಗಿದ್ದರು. ಅಪ್ಪಣ್ಣನವರು ಅನುಭಾವಿಗಳು, ತತ್ವ ಅರಿತವರು, ಶಿಸ್ತು, ಸೌಜನ್ಯ, ನಯ-ವಿನಯ ಬದುಕಿನಲ್ಲಿ ಅಳವಡಿಸಿಕೊಂಡವರು ಎಂದರು.ನಿಜಸುಖಿ ಶರಣ ಹಡಪದ ಅಪ್ಪಣ್ಣ ಕುರಿತು ಹುಬ್ಬಳ್ಳಿ ಶ್ರೀಗುರುಬಸವ ಮಂಟಪ ಟ್ರಸ್ಟ್ ಸಂಚಾಲಕ ಶಶಿಧರ ಕರವೀರಶೆಟ್ರ ಉಪನ್ಯಾಸ ನೀಡಿ, ಹಡಪದ ಅಪ್ಪಣ್ಣನವರಿಗೆ ಲಿಂಗತತ್ತ್ವ ಬದುಕಿನ ಜೀವಾಳವಾಗಿತ್ತು. ಇಡೀ ಬದುಕು ಲಿಂಗಮಯವಾಗಿತ್ತು. ಲಿಂಗತತ್ವದಲ್ಲಿ ನಿಜವಾದ ಸುಖ ಕಂಡಂತಹ ಅಪ್ಪಣ್ಣನವರು ನಿಜಸುಖಿಗಳಾಗಿದ್ದರು. ಅಪ್ಪಣ್ಣನವರ ಪುಣ್ಯಸ್ತ್ರೀ ಹಡಪದ ಲಿಂಗಮ್ಮನವರು ಸಹಿತ ಅಪ್ರತಿಮ ಶರಣೆಯಾಗಿದ್ದರು. ಹಡಪದ ಅಪ್ಪಣ್ಣನವರ ಜೀವನಾದರ್ಶ ಅರಿತು ಬದುಕಿನಲ್ಲಿ ಅಳವಡಿಸಿಕೊಳ್ಳಲು ಪ್ರಯತ್ನಿಸಬೇಕು ಎಂದರು.

ಮೃತ್ಯುಂಜಯ ಹಿರೇಮಠ ಹಾಗೂ ಗುರುನಾಥ ಸುತಾರ ವಚನ ಸಂಗೀತ ಹಾಡಿದರು. ಧರ್ಮಗ್ರಂಥ ಪಠಣವನ್ನು ಜಯಶ್ರೀ. ಆರ್. ಮುದೇನಗುಡಿ, ವಚನ ಚಿಂತನೆ ಸೃಷ್ಠಿ.ಎನ್. ಹಿರೇಮಠ ನೆರವೇರಿಸಿದರು. ಶಿವಾನುಭವದ ದಾಸೋಹ ಭಕ್ತಿಸೇವೆ ವಹಿಸಿಕೊಂಡಿದ್ದ ಮಂಜುನಾಥ ಹೂವಪ್ಪ ಗಜಾಕೋಶ, ಬಸವರಾಜ ಹಡಪದ, ಬಸವರಾಜ ತೋಟಪ್ಪ ಹಡಪದ ಅವರನ್ನು ಪೂಜ್ಯರು ಸನ್ಮಾನಿಸಿದರು.

ರಾಜ್ಯ ಹಡಪದ ನೌಕರರ ಸಂಘದ ಜಿಲ್ಲಾಧ್ಯಕ್ಷ ವಿ.ಬಿ. ಕೊಣ್ಣೂರು, ಹಡಪದ ಅಪ್ಪಣ್ಣ ಸಂಘದ ಅಧ್ಯಕ್ಷ ಟಿ.ವೈ.ಹಡಪದ, ನಿಜಸುಖಿ ಹಡಪದ ಅಪ್ಪಣ್ಣ ವಿವಿಧೊದ್ದೇಶ ಟ್ರಸ್ಟ್ ಅಧ್ಯಕ್ಷ ಶ್ರೀನಿವಾಸ.ಬಿ. ಹಡಪದ, ಲಿಂಗಾಯತ ಪ್ರಗತಿಶೀಲ ಸಂಘದ ಉಪಾಧ್ಯಕ್ಷ ಬಾಲಚಂದ್ರ ಭರಮಗೌಡರ, ರೇಣುಕಾ ಕರೇಗೌಡ್ರ, ಮಹೇಶ ಗಾಣಿಗೇರ, ವಿಜಯಕುಮಾರ ಹಿರೇಮಠ, ವಿರುಪಾಕ್ಷಪ್ಪ ಅರಳಿ, ಅಶೋಕ ಹಾದಿ, ಸುರೇಶ ನಿಲೂಗಲ್, ವಿವೇಕಾನಂದಗೌಡ ಪಾಟೀಲ ಇದ್ದರು. ಸಂಘದ ಅಧ್ಯಕ್ಷ ಶೇಖಣ್ಣ ಕಳಸಾಪೂರ ಸ್ವಾಗತಿಸಿದರು. ರತ್ನಕ್ಕ ಪಾಟೀಲ ನಿರೂಪಿಸಿದರು.