ಶಿಗ್ಗಾಂವಿ: ಯಾವುದೇ ಬ್ಯಾಂಕಿನವರು ಗ್ರಾಹಕರಿಗೆ ಓಟಿಪಿ ಬಗ್ಗೆ ಮಾಹಿತಿ ಕೇಳುವುದಿಲ್ಲ. ಬ್ಯಾಂಕ್ ಉಳಿತಾಯ ಖಾತೆಯ ಬಗ್ಗೆ ನಿಮ್ಮ ಮಾಹಿತಿ ಗೌಪ್ಯವಾಗಿಡಿ. ಇದರಿಂದ ನಿಮ್ಮ ಖಾತೆಯ ಹಣವೂ ಸುರಕ್ಷಿತವಾಗಿರುತ್ತದೆ ಎಂದು ಎಸ್.ಬಿ.ಐ ಬ್ಯಾಂಕ್ ಮ್ಯಾನೇಜರ್ ವರಪ್ರಸಾದ ತ್ರಿವೇದಿ ಹೇಳಿದರು.ಪಟ್ಟಣದ ಪುರಸಭೆಯ ಸಭಾಭವನದಲ್ಲಿ ಆಯೋಜಿಸಿದ್ದ ಪಿಎಂ ಸ್ವನಿಧಿ ಯೋಜನೆಯ ಬ್ಯಾಂಕ್ ಬೀದಿಬದಿಯ ವ್ಯಾಪಾರಸ್ಥ ಗ್ರಾಹಕರು ಹಾಗೂ ಫಲಾನುಭವಿಗಳ ಸಭೆಯಲ್ಲಿ ಮಾಹಿತಿ ನೀಡಿ ಮಾತನಾಡಿದ ಅವರು, ಬ್ಯಾಂಕ್ ಮೂಲಕ ಪಿಎಂ ಸ್ವನಿಧಿ ಗ್ರಾಹಕ ವ್ಯಾಪಾರಸ್ಥರು ಕಿರುಸಾಲ ಯೋಜನೆಯನ್ನು ಬಳಸಿಕೊಂಡು ವ್ಯಾಪಾರ ವ್ಯವಹಾರ ಸಹಕಾರ ಪಡೆಯಬೇಕು. ಬ್ಯಾಂಕ್ನ ಉತ್ತಮ ವ್ಯವಹಾರದಿಂದ ಗ್ರಾಹಕರ ಉಳಿತಾಯ ಸಾಲ ತಿರುವಳಿ ಮರುಪಾವತಿ ಮಾಡುವುದರಿಂದಾಗಿ ಸಿಬಿಲ್ ಸ್ಕೋರ್ ಪ್ರಮಾಣ ಹೆಚ್ಚುತ್ತದೆ. ಗುಣಮಟ್ಟದ ವ್ಯವಹಾರಗಳಿಂದ ಬ್ಯಾಂಕ್ ಗ್ರಾಹಕರು ಹಂತಹಂತವಾಗಿ ಸಾಲ ಪ್ರಮಾಣ ವೃದ್ಧಿಸಿಕೊಂಡು ಲಾಭ ಪಡೆಯಬಹುದು ಎಂದರು.ಈಗಾಗಲೇ ಪುರಸಭೆಯ ಸಾಮಾಜಿಕ ಸಂಘಟಕರು ಸರ್ವೇ ನಡೆಸಿ ಕಿರು ಯೋಜನೆಯಲ್ಲಿ ಫಲಾನುಭವಿಗಳನ್ನು ಆಯ್ಕೆ ಮಾಡಿದ್ದಾರೆ. ಸಾಕಷ್ಟು ಫಲಾನುಭವಿಗಳು ಬೀದಿಬದಿಯ ವ್ಯಾಪಾರ ಮಾಡುತ್ತಿದ್ದರು. ಬ್ಯಾಂಕ್ ಯೋಜನೆಗಳ ಲಾಭ ಪಡೆದುಕೊಂಡಿಲ್ಲ. ಉಳಿದುಕೊಂಡ ಗ್ರಾಹಕರು ಪುರಸಭೆಯ ಅಧಿಕಾರಿಗಳ ಸಹಾಯ ಪಡೆದು ವ್ಯಾಪಾರ ನೊಂದಣಿ ಮಾಡಿಸಿ ಗುರುತಿನ ಪತ್ರ ಪಡೆದು ಲಾಭದಾಯಿಕ ವ್ಯಾಪಾರ ಮಾಡಿ. ನಿಮ್ಮದೇ ಹಣಕಾಸು ವಹಿವಾಟಿನ ಖಾತೆಯ ಸುರಕ್ಷತೆಗಾಗಿ ಕೆವಾಯ್ಸಿ ಮಾಡಿಸಿ ಅಲ್ಲದೇ ಯಾರಿಗೂ ಸುರಕ್ಷಿತ ಪಿನ್ ಬಳಸಿ ಪರಿಚಯದವರಿಗೆ ಹಂಚಿಕೆ ಮಾಡಿಕೊಳ್ಳಬೇಡಿ. ಬ್ಯಾಂಕ್ ನೀಡುವ ವಹಿವಾಟಿನ ಕ್ಯೂಆರ್ ಕೋಡ್ ಪ್ರತಿ ಹಾಗೂ ಹಣ ಸಂದಾಯಕ್ಕಾಗಿ ನಿಮ್ಮದೇ ಜಾಗದಲ್ಲಿ ಸ್ಪೀಕರ್ ವ್ಯವಸ್ಥೆ ಮಾಡಿಕೊಳ್ಳಿ. ನಿಮ್ಮ ಖಾತೆಯ ಬಗ್ಗೆ ಮಾಹಿತಿ ನೀಡಬೇಡಿ. ಬ್ಯಾಂಕ್ ನಿಮ್ಮ ಸಹಾಯಕ್ಕೆ ಬರುತ್ತದೆ. ಬ್ಯಾಂಕ್ ಶಿಬ್ಬಂದಿಯೊಂದಿಗೆ ಸಹಕರಿಸಿ. ಹೆಚ್ಚಿನ ಮಾಹಿತಿ ಬ್ಯಾಂಕ್ನಿಂದ ಪಡೆದುಕೊಳ್ಳಿ ಸಲಹೆ ನೀಡಿದರು.ಕಾರ್ಯಕ್ರಮದಲ್ಲಿ ಪಿಎಂ ಸ್ವನಿಧಿ ಯೋಜನೆಯ ವ್ಯಾಪ್ತಿಯ ವಿವಿಧ ರಾಷ್ಟ್ರೀಕೃತ ಬ್ಯಾಂಕ್ ವ್ಯವಸ್ಥಾಪಕರು, ಕೆವಿಜಿ ಬ್ಯಾಂಕ್ ಅಧಿಕಾರಿ ಕಿರಣ ಹಾಗೂ ಜಿಲ್ಲಾ ಮಟ್ಟದ ಕೌಶಲ್ಯಾಭಿವೃದ್ಧಿ ಇಲಾಖೆ ಚಂದ್ರಶೇಖರ, ವಿನಾಯಕ, ಪುರಸಭೆಯ ಉಪಾಧ್ಯಕ್ಷೆ ಶಾಂತಾಬಾಯಿ ಸುಭೇದಾರ, ಮಾಜಿ ಅಧ್ಯಕ್ಷ ಶ್ರೀಕಾಂತ ಬುಳ್ಳಕ್ಕನವರ, ಪರಶುರಾಮ್ ಸೊನ್ನದ. ಸ್ಥಾಯಿ ಸಮಿತಿ ಅಧ್ಯಕ್ಷೆ ಅನುರಾಧಾ ಮಾಳ್ವದೆ, ಪುರಸಭೆಯ ಮುಖ್ಯಾಧಿಕಾರಿ ಮಲ್ಲೇಶ ಸಮೂದಾಯ ಸಂಘಟಕ ಅಧಿಕಾರಿ ಶೈಲಾ ಪಾಟೀಲ, ಪಿಎಂ ಸ್ವನಿಧಿಯ ಯೋಜನೆಯ ಬ್ಯಾಂಕ್ ಫಲಾನುಭವಿ ವ್ಯಾಪಾರಸ್ಥರು ಇತರ ಸಿಬ್ಬಂದಿಗಳಿದ್ದರು.