ಕನ್ನಡಪ್ರಭ ವಾರ್ತೆ ನಾಗಮಂಗಲ
ತಾಲೂಕಿನ ಕರಡಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ನಾಗಮಂಗಲ ಕನ್ನಡ ಸಂಘದ ಸಹಯೋಗದಲ್ಲಿ ಆಯೋಜಿಸಿದ್ದ ವಿದ್ಯಾರ್ಥಿಗಳಲ್ಲಿ ಪುಸ್ತಕ ಓದುವ ಹವ್ಯಾಸ ಮೂಡಿಸಲು ಮೊಬೈಲ್ ಬಿಡಿ ಪುಸ್ತಕ ಹಿಡಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳಿಗೆ ಮೊಬೈಲ್ ಬಿಡಿ ಎನ್ನುವ ಹಿರಿಯರು ತಾವು ಮೊಬೈಲ್ ಬಳಕೆಯನ್ನು ಎಷ್ಟರ ಮಟ್ಟಿಗೆ ನಿಭಾಯಿಸುತ್ತಿದ್ದೇವೆ. ಮೊಬೈಲ್ ಬಿಡುವ ಅಗತ್ಯವೇನಿದೆ ಎಂಬುದನ್ನು ಯೋಚಿಸಬೇಕು ಎಂದರು.
ಪ್ರಸ್ತುತ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ಮೊಬೈಲ್ ಎಂಬುದು ಅತ್ಯಂತ ಉಪಯುಕ್ತವಾದ ಉಪಕರಣ. ಜೀವನದಲ್ಲಿ ಒಳ್ಳೆಯ ಸಚ್ಚಾರಿತ್ಯರಾಗಿ ಉತ್ತಮ ಬೆಳವಣಿಗೆ ರೂಢಿಸಿಕೊಳ್ಳಲು ಪಠ್ಯಕ್ಕೆ ಅಗತ್ಯವಾದ ಹಲವಾರು ಸಂಗತಿಗಳು ಮತ್ತು ಒಳ್ಳೆಯ ಉಪನ್ಯಾಸಗಳು ಸಿಗುತ್ತವೆ. ಅದೇ ರೀತಿ ನಮ್ಮಲ್ಲಿ ದುರಾಸೆಗಳು ಬೆಳೆಯಲು, ಸಮಾಜ ಕಂಟಕರಾಗಲು ಏನೆಲ್ಲಾ ಬೇಕೋ ಅವೆಲ್ಲವನ್ನು ಮೊಬೈಲ್ ಕೊಡುತ್ತದೆ. ಹಾಗಾಗಿ ಬೆಲ್ಲದಂತ ಉಪಕರಣವಾಗಿರುವ ಮೊಬೈಲ್ನ್ನು ಒಂದು ತಂತ್ರಜ್ಞಾನವಾಗಿ, ಜ್ಞಾನವಾಗಿ, ಅವಶ್ಯಕ ವಿದ್ಯೆಗಾಗಿ ಮಾತ್ರ ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಳ್ಳಬೇಕು ಎಂದರು.ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಗೆ ಪಠ್ಯ ಕ್ರಮದ ಹೊರತಾಗಿ ಬೇರ್ಯಾವ ಅವಕಾಶಗಳು ಸಾಲುವುದಿಲ್ಲ. ಮಕ್ಕಳ ಮೇಲೆ ಪಠ್ಯದ ಒತ್ತಡ ಅಷ್ಟಿರುತ್ತದೆ. ವಿದ್ಯಾರ್ಥಿ ದಿಸೆಯಲ್ಲಿ ಎಷ್ಟು ಒತ್ತಡವಿರುತ್ತದೆಯೋ ಅವೆಲ್ಲವನ್ನೂ ಬಳಸಿಕೊಂಡರೆ ಶೈಕ್ಷಣಿಕ ಪ್ರಗತಿ ಸಾಧಿಸಲು ಅವಕಾಶಗಳು ಸಿಗುತ್ತವೆ. ವಿದ್ಯಾರ್ಥಿಗಳ ಜೀವನದಲ್ಲಿ ಪ್ರೌಢಶಾಲಾ ಹಂತ ಬಹಳ ಮುಖ್ಯ. ಈ ಹಂತದಲ್ಲಿ ಪಠ್ಯಪುಸ್ತಕಗಳನ್ನು ಪೂರ್ಣವಾಗಿ ಓದಿ ಗ್ರಹಿಸಿಕೊಳ್ಳಬೇಕು ಎಂದರು.