ಕೆಂಪೇಗೌಡರ ಆಡಳಿತ, ದೂರದೃಷ್ಟಿ ವರ್ಣನಾತೀತ: ನಿಂಗಣ್ಣ ಬಿರಾದಾರ

KannadaprabhaNewsNetwork |  
Published : Jun 28, 2026, 04:00 AM IST
ಫೋಟೋ ೨೭ಡಿಎಚಪಿ೧ | Kannada Prabha

ಸಾರಾಂಶ

ದೇವರಹಿಪ್ಪರಗಿ ತಾಲೂಕು ಆಡಳಿತದ ವತಿಯಿಂದ ಪಟ್ಟಣದ ತಹಶೀಲ್ದಾರ್‌ ಕಚೇರಿ,ಎ.ಬಿ.ಸಾಲಕ್ಕಿ ಕಾಲೇಜು, ಸಿದ್ದೇಶ್ವರ ಪ್ರೌಢಶಾಲೆ, ಸರ್ಕಾರಿ ಪ್ರೌಢಶಾಲೆ ಮುಳಸಾವಳಗಿ ಹಾಗೂ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಬಮ್ಮನಜೋಗಿಯಲ್ಲಿ ನಾಡಪ್ರಭು ಕೆಂಪೇಗೌಡರ ಜಯಂತ್ಯೋತ್ಸವ ಆಚರಿಸಲಾಯಿತು.

ಕನ್ನಡಪ್ರಭ ವಾರ್ತೆ ದೇವರಹಿಪ್ಪರಗಿ

ಒಂದು ಸಾವಿರ ವರ್ಷಗಳ ಹಿಂದೆಯೇ ಅಸಾಧಾರಣ ಬುದ್ದಿಮತ್ತೆ ಹಾಗೂ ಚಾಕಚಕ್ಯತೆ ಹೊಂದಿದ್ದ ಕೆಂಪೇಗೌಡರ ಆಡಳಿತದ ದೂರದೃಷ್ಟಿಯು ನಿಜಕ್ಕೂ ವರ್ಣನಾತೀತವಾಗಿದೆ ಎಂದು ತಹಶೀಲ್ದಾರ ನಿಂಗಣ್ಣ ಬಿರಾದಾರ ಹೇಳಿದರು.

ತಾಲೂಕು ಆಡಳಿತದ ವತಿಯಿಂದ ಪಟ್ಟಣದ ತಹಶೀಲ್ದಾರ್‌ ಕಚೇರಿ,ಎ.ಬಿ.ಸಾಲಕ್ಕಿ ಕಾಲೇಜು, ಸಿದ್ದೇಶ್ವರ ಪ್ರೌಢಶಾಲೆ, ಸರ್ಕಾರಿ ಪ್ರೌಢಶಾಲೆ ಮುಳಸಾವಳಗಿ ಹಾಗೂ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಬಮ್ಮನಜೋಗಿಯಲ್ಲಿ ನಡೆದ ನಾಡಪ್ರಭು ಕೆಂಪೇಗೌಡರ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಜಯಂತ್ಯೋತ್ಸವ ನಿಮಿತ್ತ ಈ ಮೇಲ್ಕಂಡ ಶಾಲೆಗಳಲ್ಲಿ ಸರ್ಕಾರದ ಮಾರ್ಗಸೂಚಿಯಂತೆ ಮಕ್ಕಳಿಗಾಗಿ ಪ್ರಬಂಧ ಸ್ಪರ್ಧೆ, ಆಶುಭಾಷಣ,ರಸಪ್ರಶ್ನೆ,ಕವನ ವಾಚನ,ಚಿತ್ರಕಲೆ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.ಮಕ್ಕಳು ಕೆಂಪೇಗೌಡರ ಬಗ್ಗೆ ಮೊದಲೇ ಸಾಕಷ್ಟು ಅಧ್ಯಯನ ಮಾಡಿದ್ದರಿಂದ ಎಲ್ಲಾ ಸ್ಪರ್ಧೆಗಳು ಅತ್ಯಂತ ತುರುಸಿನ ಪೈಪೋಟಿಯಿಂದ ಕೂಡಿದ್ದವು.ಮಕ್ಕಳ ಆಕರ್ಷಕ ಬರವಣಿಗೆ ಹಾಗೂ ವಾಕ್ ಚಾತುರ್ಯ ತುಂಬಾ ಗಮನಸೆಳೆದವು.ವಿಜೇತರಾದ ಶಾಲಾ ಮಕ್ಕಳಿಗೆ ಅವರ ಮುಂದಿನ ಶೈಕ್ಷಣಿಕ ಜೀವನಕ್ಕೆ ಅನುಕೂಲವಾಗುವ ಗುಣಮಟ್ಟದ,ಹೆಚ್ಚಿನ ಮೌಲ್ಯದ ಹಾಗೂ ಉಪಯುಕ್ತವಾದ ಪುಸ್ತಕ,ಪೆನ್ನು,ಪ್ರಮಾಣ ಪತ್ರಗಳನ್ನು ವಿತರಿಸಿ ಮಕ್ಕಳನ್ನು ಪ್ರೋತ್ಸಾಹಿಸಲಾಯಿತು.ಅತ್ಯಂತ ಶಿಸ್ತುಬದ್ದವಾಗಿ ಕಾರ್ಯಕ್ರಮವು ಮೂಡಿಬಂದಿತು.ತಹಶೀಲದಾರರು ವಿದ್ಯಾರ್ಥಿ ಸ್ನೇಹಿಯಾಗಿ ಅತ್ಯಂತ ವ್ಯವಸ್ಥಿತವಾಗಿ,ವಿಜೃಂಭಣೆಯಿಂದ ಕಾರ್ಯಕ್ರಮವನ್ನು ಆಯೋಜಿಸಿದ್ದು ಜ್ಞಾನಾಸಕ್ತರ ಮೆಚ್ಚುಗೆಗೆ ಪಾತ್ರವಾಯಿತು. ಶಿರಸ್ತೇದಾರ ಸುರೇಶ ಮ್ಯಾಗೇರಿ,ಪ್ರಥಮ ದರ್ಜೆ ಸಹಾಯಕ ಕುಮಾರ ಅವರಾದಿ,ಚನ್ನು ಹೊಸಮನಿ,ಎ.ಬಿ.ಸಾಲಕ್ಕಿ ಕಾಲೇಜಿನ ಪ್ರಾಂಶುಪಾಲರಾದ ವಿ.ಜಿ.ಹೂನಳ್ಳಿ,ಸಿದ್ದೇಶ್ವರ ಪ್ರೌಢಶಾಲೆಯ ಮುಖ್ಯಸ್ಥರಾದ ವಿ.ಕೆ.ಪಾಟೀಲ,ಮುಳಸಾವಳಗಿ ಪ್ರೌಢಶಾಲೆಯ ಮುಖ್ಯಗುರು ಈರಣ್ಣ.ನರೂಣಿ,ಬಮ್ಮನಜೋಗಿ ಶಾಲೆಯ ಮುಖ್ಯಗುರು ಕೆ.ಎನ್.ಭಜಂತ್ರಿ,ತಾಲೂಕಿನ ಮಾಜಿ ಕಸಾಪ ಅಧ್ಯಕ್ಷ ಜಿ.ಪಿ.ಬಿರಾದಾರ,ಕೆ.ವಿ.ಒಡೆಯರ,ಕೆ.ಪಿ.ಮಾಲೀಪಾಟೀಲ,ರಮಾನಂದ ಚಕ್ಕಡಿ,ಎಸ್.ಜಿ.ತಾವರಖೇಡ,ಎಚ್.ಎಸ್.ತಳಕೇರಿ,ನವೀನಕುಮಾರ,ರವಿ ಉಮನಾಬಾದಿ ಸೇರಿದಂತೆ ವಿವಿಧ ಶಾಲೆಗಳ ಶಿಕ್ಷಕರು,ವಿದ್ಯಾರ್ಥಿಗಳು,ಉಪಸ್ಥಿತರಿದ್ದರು

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಯುವ ಜನತೆಯಲ್ಲಿ ಯೋಗದ ಬಗ್ಗೆ ರೆಡ್‌ಕ್ರಾಸ್‌ ಅರಿವು: ಸಿಎ ಶಾಂತಾರಾಮ ಶೆಟ್ಟಿ
ಸ್ತ್ರೀ ಪರಿಪೂರ್ಣತೆಯ ಸಂಕೇತ: ಡಾ. ಮೋಹನ್ ಆಳ್ವ